
ಬೆಳ್ತಂಗಡಿ:- ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಲಾಯಿಲ ಗ್ರಾಮದ ಕುಂಟಿನಿಯಲ್ಲಿ ತೀವ್ರ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಗೃಹೋಪಯೋಗಿ ಸಾಮಾಗ್ರಿ ಮಿಕ್ಸಿ ಹಾಗೂ ಅಕ್ಕಿಯನ್ನು ನೀಡಲಾಯಿತು. ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ, ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ರಾವ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುರೇಶ ಶೆಟ್ಟಿ, ತುಕಾರಾಂ ಉಪಸ್ಥಿತರಿದ್ದರು. ವರ್ಷದುದ್ದಕ್ಕೂ ಸೇವಾಪಥ ಕಾರ್ಯಕ್ರಮದಡಿ ಅನೇಕ ಸಮಾಜಮುಖಿ ಕೆಲಸಗಳು ಯಶ್ವಸಿಯಾಗಿ ಸಂಪನ್ನಗೊಂಡಿದೆ.
