
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸುದೆಮುಗೇರು, ಉದಯನಗರ ದಲ್ಲಿರುವ ನಿರಾಶ್ರಿತ ವೃದ್ಧೆಯರ ಆಶ್ರಯ ತಾಣ ಅನುಗ್ರಹ ವೃದ್ಧಾಶ್ರಮಕ್ಕೆ ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಇಂದು 50 ಬೆಡ್ ಶೀಟ್ ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷರಾದ ವಸಂತ ಶೆಟ್ಟಿ ಶ್ರದ್ಧಾ, ನಿಯೋಜಿತ ಕೋಶಾಧಿಕಾರಿ ಅನಂತಕೃಷ್ಣ ಹಾಗೂ ವೃದ್ಧಾಶ್ರಮದ ಮೇಲ್ವಿಚಾರಿಕೆಯರು ಉಪಸ್ಥಿತರಿದ್ದರು.
