![](https://kalanirnayanews.com/wp-content/uploads/2020/06/IMG-20200613-WA0056.jpg)
ಬೆಳ್ತಂಗಡಿ: ನಿಂತಿದ್ದ ಜೀಪೊಂದಕ್ಕೆ ಖಾಸಗಿ ಅಂಬ್ಯುಲೇನ್ಸ್ ಅತೀ ವೇಗದಲ್ಲಿ ಬಂದು ಡಿಕ್ಕಿ ಹೊಡೆದ ಪರಿಣಾಮ ಜೀಪು ಉರುಳಿ ಬಿದ್ದು ಸಂಪೂರ್ಣ ನಜ್ಜುನುಜ್ಜಾಗಿದೆ. ದಿನ ಜನ ಜಂಗುಳಿಯಿಂದ ಇರುತ್ತಿದ್ದ ಜೀಪು ತಂಗುದಾಣದಲ್ಲಿ ಜನಸಂಖ್ಯೆ ಕಡಿಮೆ ಇದ್ದುದರ ಪರಿಣಾಮ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಬೆಳ್ತಂಗಡಿಯ ಗುರುನಾರಾಯಣ ಸಂಕೀರ್ಣದ ಮುಂಭಾಗದಲ್ಲಿ ಘಟನೆ ಸಂಭವಿಸಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
![](https://kalanirnayanews.com/wp-content/uploads/2020/06/IMG-20200613-WA0057-1024x473.jpg)