![](https://kalanirnayanews.com/wp-content/uploads/2021/02/IMG-20210209-WA0058-compressed-1.jpg)
ತುಮಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಮಕೂರು ಜಿಲ್ಲೆಯ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಗೆ ಆಟೋ ವಿತರಣಾ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿ ಶುಭಹಾರೈಸಿದರು.
ತುಮಕೂರು ಜಿಲ್ಲೆಯಲ್ಲಿ ಯೋಜನೆಯ 125 ಫಲಾನುಭವಿಗಳಿಗೆ ಆಟೋ ವಿತರಣಾ ಕಾರ್ಯಕ್ರಮಕ್ಕೆ ತುಮಕೂರು ಕುಂಚಿಟಿಗ ಸಮುದಾಯಭವನದಲ್ಲಿ ಚಾಲನೆ ನೀಡಲಾಯಿತು.
![](https://kalanirnayanews.com/wp-content/uploads/2021/02/IMG-20210209-WA0059-1024x683.jpg)
ತುಮಕೂರು ತಾಲೂಕಿನ 15 ಫಲಾನುಭವಿಗಳಿಗೆ ಡಾ.ಹೆಗ್ಗಡೆಯವರಿಂದ ಸಾಂಕೇತಿಕವಾಗಿ ಹಸ್ತಾಂತರಿಸಲಾಯಿತು.
![](https://kalanirnayanews.com/wp-content/uploads/2021/02/IMG-20210209-WA0070-1024x768.jpg)
![](https://kalanirnayanews.com/wp-content/uploads/2021/02/IMG-20210209-WA0069-1024x768.jpg)
ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿ ಗಣೇಶ್, ಮಹಾನಗರ ಪಾಲಿಕೆ ಅಧ್ಯಕ್ಷೆ ಫರಿದಾ ಬೇಗಂ,
ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ಜನಜಾಗೃತಿ ಅಧ್ಯಕ್ಷ ಪ್ರೆಸ್ ರಾಜಣ್ಣ, ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಮೂಲ್ಯ, ಜಿಲ್ಲಾ ನಿರ್ದೇಶಕರಾದ ದಯಾಶೀಲ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು, ಹಾಗೂ ಯೋಜನೆಯ ಫಲಾನುಭವಿಗಳು ಉಪಸ್ಥಿತರಿದ್ದರು.