‘ಚೀನಾ ಸೈನಿಕರಿಂದ ಅರುಣಾಚಲ ಪ್ರದೇಶ ಗಡಿಯಲ್ಲಿ ಭಾರತೀಯ ಐವರು ಯುವಕರ ಅಪಹರಣ!’

ಇಟಾನಗರ: ಭಾರತದೊಂದಿಗೆ ಗಡಿ ಸಂಘರ್ಷಕ್ಕೆ ಇಳಿದಿರುವ ಚೀನಾ ತನ್ನ ಭಯೋತ್ಪಾದನೆಯ ಮತ್ತೊಂದು ಮುಖವನ್ನು ತೋರತೊಡಗಿದೆಯೇ? ಹೌದು ಎನ್ನುತ್ತಿದ್ದಾರೆ ಅರುಣಾಚಲ ಪ್ರದೇಶದ ಗಡಿಭಾಗದ ಜನರು. ಅಲ್ಲಿನ ಐವರು ಯುವಕರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್​ಎ) ಅಪಹರಿಸಿದ್ದಾಗಿ ಮಾಜಿ ಕೇಂದ್ರ ಸಚಿವ, ಪಾಸಿಘಾಟ್ ವೆಸ್ಟ್ ಕ್ಷೇತ್ರದ ಶಾಸಕ ನಿನೊಂಗ್ ಎರಿಂಗ್​ ಟ್ವೀಟ್ ಮಾಡಿದ್ದಾರೆ!

ಭಾರತ-ಚೀನಾ ಗಡಿ ಭಾಗದ ಸಮೀಪ ಸೆರಾ 7 ಪ್ರದೇಶದಲ್ಲಿ ಅರುಣಾಚಲ ಪ್ರದೇಶದ ಅಪ್ಪರ್​ ಸಬನ್​ಸಿರಿ ಜಿಲ್ಲೆಯ ನಾಚೋ ವೃತ್ತದ ಐವರು ಯುವಕರನ್ನು ಚೀನಾ ಪಿಎಲ್​ಎ ಅಪಹರಿಸಿದೆ. ಅಪಹರಣಕ್ಕೆ ಒಳಗಾದವರನ್ನು ತನು ಬಾಕಡ್​, ಪ್ರಶಾಂತ್​ ರಿಂಗ್ಲಿಂಗ್, ನಗ್ರು ದಿರಿ, ದೊನ್​ಗ್ಟು ಎಬಿಯಾ ಮತ್ತು ತೋಚ್​ ಸಿಂಗ್​ಕಾಮ್​ ಎಂಬ ತಾಗಿನ್ ಸಮುದಾಯದ ಯುವಕರು ಎಂದು ಗುರುತಿಸಲಾಗಿದೆ.

READ ALSO