![](https://kalanirnayanews.com/wp-content/uploads/2020/12/image-1.png)
ಮಂಗಳೂರು: ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ಬೋಟ್ ಮಗುಚಿಬಿದ್ದು 6 ಮಂದಿ ಮೀನುಗಾರರು ನಾಪತ್ತೆಯಾದ ಘಟನೆ ನಡೆದಿದೆ.
![](https://103.180.45.14/kalanirnaya1/wp-content/uploads/2020/12/1606800717951-1.jpg)
ಬೋಳಾರದ ಶ್ರೀ ರಕ್ಷಾ ಎಂಬ ಮೀನುಗಾರಿಕಾ ಬೋಟ್ ಸೋಮವಾರ (ನ 30 ) ನಸುಕಿನ ಜಾವ ಮೀನುಗಾರಿಕೆಗೆ ತೆರಳಿತ್ತು . ನಿನ್ನೆ ರಾತ್ರಿಯೇ ಆಗಮಿಸಬೇಕಿದ್ದ ಈ ಬೋಟ್ ಅಪಘಾತಕ್ಕಿಡಾಗಿದೆ.
![](https://103.180.45.14/kalanirnaya1/wp-content/uploads/2020/12/1606801772186-1.jpg)
ಮೀನು ಓವರ್ ಲೋಡ್ ಹಾಗೂ ಭಾರೀ ಗಾಳಿ ಬೀಸಿದ ಪರಿಣಾಮ ಉಳ್ಳಾಲದ ಪಶ್ಚಿಮ ಭಾಗದ ಹಲವು ನಾಟಿಕಲ್ ಮೈಲ್ ದೂರ ಆಳಸಮುದ್ರದಲ್ಲಿ ಬೋಟ್ ಮಗುಚಿಬಿದ್ದಿದೆ ಎಂದು ತಿಳಿದು ಬಂದಿದೆ.
![](https://www.nikharanews.com/wp-content/uploads/2020/12/WhatsApp-Image-2020-12-01-at-10.36.48-300x169.jpeg)
ದೋಣಿಯಲ್ಲಿ 20 ಕ್ಕೂ ಹೆಚ್ಚು ಮೀನುಗಾರರಿದ್ದು, ದುರಂತದ ಸಂದರ್ಭದಲ್ಲಿ 14 ಮಂದಿ ಡಿಂಗಿಯಲ್ಲಿ ಕುಳಿತು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. 6 ಮಂದಿ ನಾಪತ್ತೆಯಾಗಿದ್ದು, ಸ್ಥಳಕ್ಕೆ ಕರಾವಳಿ ರಕ್ಷಣಾ ಪಡೆ ಧಾವಿಸಿದೆ.