![](https://kalanirnayanews.com/wp-content/uploads/2021/05/FB_IMG_1621060581819-1.jpg)
ಮಂಗಳೂರು: ಕೋವಿಡ್ -19ರ ಸಲುವಾಗಿ ಲಾಕ್ಡೌನ್ ವಿಧಿಸಿದ ಪರಿಣಾಮ ಸಾಮಾನ್ಯ ಜನರು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ, ಉದ್ಯಮ ಹಾಗೂ ವ್ಯವಹಾರಗಳಿಗಾಗಿ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ನಿಂದ ಸಾಲ ಪಡೆದ ಉದ್ದಿಮೆದಾರರು ಆರ್ಥಿಕ ಹೊಡೆತಕ್ಕೆ ಸಿಲುಕಿ ತತ್ತರಿಸಿದ್ದಾರೆ, ಈ ನಿಟ್ಟನಲ್ಲಿ ಎಲ್ಲಾ ಮಾದರಿಯ ಹಣಕಾಸು ಸಂಸ್ಥೆಗಳು ಗ್ರಾಹಕರ ಮೇಲೆ ವಿಧಿಸಿರುವ ಇ.ಎಂ.ಐ ಹಾಗೂ ಅವಧಿ ಮೀರಿದ ಸಾಲಗಳ ವಸೂಲಾತಿಗೆ ಪರಿಸ್ಥಿತಿ ಸುಧಾರಿಸುವವರೆಗೆ ತಡೆ ನೀಡುವ ಕುರಿತು ರಾಜ್ಯ ಸರ್ಕಾರಕ್ಕೆ ಮಾನ್ಯ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರ ಮುಖಾಂತರ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮನವಿ ಸಲ್ಲಿಸಿದರು.