
Belthangady: ವಕೀಲರ ಸಂಘ ರಿ ಬೆಳ್ತಂಗಡಿ ಇದರ ವತಿಯಿಂದ ವಕೀಲರ ಭವನದಲ್ಲಿ ಮಾನ್ಯ ಪ್ರಧಾನ ಹಿರಿಯ ನ್ಯಾಯಾಧಿಶರಾದ ಶ್ರೀ ದೇವರಾಜು ಹೆಚ್ ಎಂ ರವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಅಧ್ಯಕ್ಷತೆಯನ್ನು ವಸಂತ ಮರಕಡರವರು ವಹಿಸಿದ್ದರು. ಮುಖ್ಯ ಅಥಿತಿಗಳುಗಳಾಗಿ ಸಂದೇಶ್ ಕೆ ಜೆ ( ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ ಎಂ ಎಫ್ ಸಿ ಬೆಳ್ತಂಗಡಿ. ಅಲೋಶಿಯಸ್ ಎಸ್ ಲೋಬೊ ( ಅಧ್ಯಕ್ಷರು ಹಿರಿಯ ವಕೀಲರ ಸಮಿತಿ ) ನವೀನ್ ಬಿ ಕೆ ( ಪ್ರಧಾನ ಕಾರ್ಯದರ್ಶಿ ವಕೀಲರ ಸಂಘದ ರಿ ಬೆಳ್ತಂಗಡಿ ) ಬಿ ಕೆ ಧನಂಜಯ ರಾವ್ ( ಹಿರಿಯ ನ್ಯಾಯವಾದಿ ಬೆಳ್ತಂಗಡಿ) ಶ್ರೀಮತಿ ಉಷಾ ಪ್ರಶಾಂತ್ ಎಂ, ವಕೀಲರ ಸಂಘ ರಿ ಬೆಳ್ತಂಗಡಿ ಯ ಉಪಾಧ್ಯಕ್ಷರಾದ ಶ್ರೀ ಅಶೋಕ್ ಕರಿಯನೆಲ, ಖಜಾಂಚಿಯಾದ ಶ್ರೀ ಪ್ರಶಾಂತ್ ಎಂ, ಶ್ರೀಮತಿ ಅಸ್ಮಾ, ಕಾರ್ಯಕ್ರಮದಲ್ಲಿ ವಕೀಲರ ಸಂಘದ ಇತರ ಪದಾಧಿಕಾರಿಗಳು, ವಕೀಲರುಗಳು ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗ ಹಾಜರಿದ್ದರು.