ಚೀನಾದ ಅಧಿಪತ್ಯವನ್ನು ಸ್ವೀಕರಿಸುವ ಬಗ್ಗೆ ಫಾರುಕ ಅಬ್ದುಲ್ಲಾರ ಹೇಳಿಕೆಯ ಮೇಲೆ ‘ಆನ್‌ಲೈನ್ ವಿಶೇಷ ಚರ್ಚಾಕೂಟ’ !

ಫಾರುಕ ಅಬ್ದುಲ್ಲಾರಂತಹ ಪ್ರತ್ಯೇಕತಾವಾದಿ ಹಾಗೂ ದೇಶವಿರೋಧಿ ಪ್ರವೃತ್ತಿಯನ್ನು ಪೋಷಿಸುವ ನಮ್ಮ ವ್ಯವಸ್ಥೆಯಲ್ಲಿಯೇ ಲೋಪದೋಷಗಳಿವೆ ! – ಶ್ರೀ. ಸುಶೀಲ ಪಂಡಿತ್, ಸಂಸ್ಥಾಪಕರು, ರೂಟ್ಸ್ ಇನ್ ಕಶ್ಮೀರ್

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಕಾನ್ಫರೆನ್ಸ್‌ನ ಸಂಸದ ಡಾ. ಫಾರುಕ ಅಬ್ದುಲ್ಲಾ ಇವರ ಕಾಲದಲ್ಲಿ ಸಾವಿರಾರು ಹಿಂದೂಗಳ ನರಮೇಧವಾಯಿತು, ಚಕಮಕಿಯಲ್ಲಿ ಸಾವಿಗೀಡಾದ ಭಯೋತ್ಪಾದಕರ ಕುಟುಂಬದವರಿಗೆ ಆರ್ಥಿಕ ಸಹಾಯ ನೀಡುವ ಯೋಜನೆ ಜಾರಿಯಾಯಿತು, ಕಾಶ್ಮೀರದಲ್ಲಿಯ ಜನರು ಭಾರತದಲ್ಲಿ ಇರಬೇಕೋ ಇಲ್ಲವೋ ಇದರ ಬಗ್ಗೆ ಜನಾಭಿಪ್ರಾಯ ಕೇಳಬೇಕೆಂದು ಒತ್ತಾಯಿಸಲಾಯಿತು, ಅದೇರೀತಿ ಮ್ಯಾನ್ಮಾರ್‌ನಲ್ಲಿಯ ಸಾವಿರಾರು ರೋಹಿಂಗ್ಯಾ ಮುಸಲ್ಮಾನರಿಗೆ ಅನಧಿಕೃತವಾಗಿ ಕಾಶ್ಮೀರದಲ್ಲಿ ನೆಲೆ ನೀಡುವುದು ಇತ್ಯಾದಿ ಅನೇಕ ಪ್ರತ್ಯೇಕತಾವಾದಿ ಹಾಗೂ ದೇಶವಿರೋಧಿ ಕೃತ್ಯಗಳಾಗಿವೆ. ಇಂತಹ ಅಬ್ದುಲ್ಲಾರವರ ಬಾಯಿಯಿಂದ ಕಾಶ್ಮೀರಿ ಜನರಿಗೆ ಚೀನಾದ ಅಧಿಪತ್ಯ ಸ್ವೀಕಾರದ ಬಗ್ಗೆ ಮಾತನಾಡುವುದು ಆಶ್ಚರ್ಯವಲ್ಲ. ಇತರ ದೇಶಗಳಲ್ಲಿ ಈ ರೀತಿ ದೇಶವಿರೋಧಿ ಹೇಳಿಕೆ ನೀಡುತ್ತಿದ್ದರೇ, ಆತನಿಗೆ ಕೂಡಲೇ ದೇಹದಂಡನೆಯ ಶಿಕ್ಷೆ ನೀಡಲಾಗುತ್ತಿತ್ತು. ಆದ್ದರಿಂದ ನಿಜವಾದ ಲೋಪದೋಷ ನಮ್ಮ ವ್ಯವಸ್ಥೆಯಲ್ಲಿದೆ, ಇದು ಈ ರೀತಿಯಲ್ಲಿ ಅನೇಕ ದೇಶವಿರೋಧಿ, ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ಪ್ರವೃತ್ತಿಯನ್ನು ಪೋಷಿಸುವ ಕಾರ್ಯವು ನಡೆಯುತ್ತಿದೆ, ಎಂದು ‘ರೂಟ್ಸ್ ಇನ್ ಕಶ್ಮೀರ್’ನ ಸಂಸ್ಥಾಪಕ ಹಾಗೂ ಕಾಶ್ಮೀರಿ ಅಭ್ಯಾಸಕರಾದ ಶ್ರೀ. ಸುಶೀಲ ಪಂಡಿತ್ ಇವರು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘ಚರ್ಚಾ ಹಿಂದೂ ರಾಷ್ಟ್ರ ಕಿ’ ಈ ವಿಶೇಷ ಚರ್ಚಾಕೂಟದಲ್ಲಿ ಅವರು ಮಾತನಾಡುತ್ತಿದ್ದರು. ‘ಫೇಸ್‌ಬುಕ್’ ಹಾಗೂ ‘ಯು ಟ್ಯೂಬ್’ನ ಮಾಧ್ಯಮದಿಂದ ಈ ಚರ್ಚಾಕೂಟವನ್ನು38768 ಜನರು ಪ್ರತ್ಯಕ್ಷವಾಗಿ ನೋಡಿದರೆ, 1 ಲಕ್ಷದ 18 ಸಾವಿರದ 309 ಜನರ ತನಕ ಈ ಕಾರ್ಯಕ್ರಮ ತಲುಪಿತು.

ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು(ಡಾ.) ಚಾರುದತ್ತ ಪಿಂಗಳೆಯವರು ಮಾತನಾಡುತ್ತಾ, ಚೀನಾದಲ್ಲಿ ಇಸ್ಲಾಮ್‌ಗೆ ಯಾವುದೇ ಸ್ಥಾನ ಇಲ್ಲ. ಅಲ್ಲಿ ಮುಸಲ್ಮಾನರ ಮೇಲೆ ಅಮಾನವೀಯವಾಗಿ ದೌರ್ಜನ್ಯ, ಅನೇಕ ಮಸೀದಿಗಳನ್ನು ನೆಲಸಮ ಮಾಡಿ ಕುರಾನ್ ಬದಲಾಯಿಸುವ ತನಕ ಘಟನೆಗಳು ಸಂಭವಿಸುತ್ತಿವೆ. ಈ ಬಗ್ಗೆ ಫಾರುಕ ಅಬ್ದುಲ್ಲಾ ಇವರಿಗೆ ಆಕ್ಷೇಪಣೆ ಇಲ್ಲ; ಆದರೆ ಕಲಂ 370 ಹಾಗೂ 35(ಅ) ತೆಗೆದನಂತರ ಅವರು ನೇರ ಚೀನಾದ ಅಧಿಪತ್ಯದ ಬಗ್ಗೆ ಮಾತುಗಳನ್ನಾಡುತ್ತಿರುವುದರಿಂದ ‘ನ್ಯಾಶನಲ್ ಕಾನ್ಫರೆನ್ಸ್’ ಅಲ್ಲ ‘ಅಂಟಿ ನ್ಯಾಶನಲ್ ಕಾನ್ಫರೆನ್ಸ್’ ಎಂದು ಹೇಳಬೇಕಾಗಬಹುದು. 1974 ರಲ್ಲಿ ‘ಜಮ್ಮು-ಕಾಶ್ಮೀರ ಲಿಬ್ರೇಶನ್ ಫ್ರಂಟ್’(ಜೆ.ಕೆ.ಎಲ್.ಎಫ್.)ನ ಭಯೋತ್ಪಾದಕರೊಂದಿಗೆ ಇದ್ದ ಫಾರುಕ ಅಬ್ದುಲ್ಲಾ ಇವರ ಛಾಯಾಚಿತ್ರ ಪ್ರಸಾರವಾಗಿದೆ. ಇದರಿಂದ ಅವರ ಮಾನಸಿಕತೆ ಸ್ಪಷ್ಟವಾಗುತ್ತದೆ. ಜೆ.ಕೆ.ಎಲ್.ಎಫ್.ನ ಯುವಕರು ಬಂದೂಕನ್ನು ಹಿಡಿದು ದೇಶದ ಮೇಲೆ ಹಲ್ಲೆ ಮಾಡುತ್ತಿದ್ದಾರೆ, ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಅಬ್ದುಲ್ಲಾ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಮಯದಲ್ಲಿ ‘ಜಮ್ಮು ಎಕ್‌ಜುಟ್’ನ ಅಧ್ಯಕ್ಷ ನ್ಯಾಯವಾದಿ ಅಂಕುರ ಶರ್ಮಾ ಇವರು ಮಾತನಾಡುತ್ತಾ, ಫಾರುಕ ಅಬ್ದುಲ್ಲಾ ಇವರ ಹೇಳಿಕೆಗೆ ಜಮ್ಮು-ಕಾಶ್ಮೀರದ ಜನರು ತೀವ್ರವಾಗಿ ವಿರೋಧಿಸಿದ್ದಾರೆ. ನಮ್ಮ ದೃಷ್ಟಿಯಲ್ಲಿ ಫಾರುಕ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬುಬಾ ಮುಫ್ತಿ, ಪ್ರತ್ಯೇಕತಾವಾದಿ ಗಿಲಾನಿ, ಯಾಸಿನ್ ಮಲೀಕ್, ಅದೇರೀತಿ ಜಿಹಾದಿ ಭಯೋತ್ಪಾದಕರು ಹಾಗೂ ಐ.ಎಸ್.ಐ ಇವರೆಲ್ಲರು ಇಂದೇ ಮಾಲೆಯ ಮಣಿಗಳಾಗಿದ್ದಾರೆ. ಇವರಿಗೆ ಜಮ್ಮು-ಕಾಶ್ಮೀರದಲ್ಲಿ ಹಿಂದೂಗಳಿಲ್ಲದಂತೆ ಮಾಡಿ ಇಸ್ಲಾಮಿ ಆಡಳಿತವನ್ನು ತರಲಿಕ್ಕಿದೆ. ಅದಕ್ಕಾಗಿ ಜಿಹಾದ್‌ಗೆ ಕರೆ ನೀಡಿದ್ದಾರೆ. ಈ ಸಮಸ್ಯೆಯನ್ನು ಅರಿತು ಅದರ ಮೇಲೆ ಉಪಾಯವನ್ನು ಹುಡುಕಬೇಕಿದೆ ಎಂದು ಹೇಳಿದ್ದಾರೆ. ಕಾಶ್ಮೀರಿ ವಿಚಾರವಂತರಾದ ಶ್ರೀ. ಲಲಿತ್ ಅಮ್ಬರದಾರ ಇವರು ಮಾತನಾಡುತ್ತಾ, ಅಬ್ದುಲ್ಲಾ ಇವರ ಹೇಳಿಕೆಯು ಕಲಂ 370 ರದ್ದು ಪಡಿಸಿದ್ದರಿಂದ ಆದ ಮಾನಸಿಕ ರೋಗವಾಗಿದೆ. ಅದರೊಂದಿಗೆ ‘ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಏಕೆ ಆಯಿತು’ ಇದರ ಉತ್ತರವನ್ನು ಹುಡುಕಿದರೇ, ಕಾಶ್ಮೀರ ಇದು ಹಿಂದೂ ಸಂಸ್ಕೃತಿಯ ಪ್ರತೀಕವಾಗಿದ್ದು ಅದರ ಮೇಲೆ ಉದ್ದೇಶಪೂರ್ವಕವಾಗಿ ಮಾಡಿದ ದಾಳಿಯಾಗಿದೆ. ಕಾಶ್ಮೀರದ ಬಗ್ಗೆ ನಾವು ರಾಜಿ ಮಾಡಿಕೊಂಡರೇ, ದೇಶದ ಪ್ರತಿಯೊಂದು ಸ್ಥಳದಲ್ಲಿ ಕಾಶ್ಮೀರದಂತೆ ಭಯಾನಕ ಪರಿಸ್ಥಿತಿ ಉದ್ಭವಿಸಬಹುದು ಎಂದು ಹೇಳಿದರು.

Spread the love
  • Related Posts

    ರುಡ್ ಸೆಟ್ ಸಂಸ್ಥೆ, ಸಿದ್ಧವನ ಉಜಿರೆ ಇದರ ವತಿಯಿಂದ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್‌ ತಯಾರಿಕೆ ತರಬೇತಿಯನ್ನು ಹಮ್ಮಿಕೊಂಡಿದೆ

    ಉಜಿರೆ: ರುಡ್ ಸೆಟ್ ಸಂಸ್ಥೆ, ಸಿದ್ಧವನ ಉಜಿರೆ, ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಸ್ವ ಉದ್ಯೋಗ ಅಥವಾ ಉದ್ಯೋಗ ಮಾಡುವುದಾದರೆ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್‌ ತಯಾರಿಕೆ ತರಬೇತಿಯನ್ನು ಆಯೋಜಿಸಿದ್ದು ದಿನಾಂಕ 15.10.24 ರಿಂದ 24.10.24ರ ವರೆಗೆ (10ದಿನ) ಪ್ರತಿ…

    Spread the love

    ನವರಾತ್ರಿಯ 9ನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುವ ಪದ್ಧತಿ ಹಾಗೂ ಮಹತ್ವ

    ನವರಾತ್ರಿ 9ನೇ ದಿನ: ಸಿದ್ಧಿದಾತ್ರಿ ದೇವಿಯನ್ನು ಈ ಮಂತ್ರಗಳನ್ನು ಹೇಳುತ್ತಾ ಪೂಜಿಸಿದರೆ ಒಳ್ಳೆಯದು ನವರಾತ್ರಿಯ 9ನೇ ಹಾಗೂ ಕೊನೆಯ ದಿನದಂದು ತಾಯಿ ಸಿದ್ಧಿದಾತ್ರಿ ಯ ಪೂಜೆ ಮಾಡಲಾಗುವುದು. ಈ ದಿನವನ್ನು ತುಂಬಾ ಸಂಭ್ರಮ ಹಾಗೂ ಸಡಗರಿಂದ ಆಚರಣೆ ಮಾಡಲಾಗುತ್ತದೆ.ದುರ್ಗಾದೇವಿಯು ಈಶ್ವರ ದೇವರ…

    Spread the love

    You Missed

    ವಕೀಲರ ಸಂಘ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಶ್ರೀ ಮಂಜು ಇಂಡೇನ್ ಗ್ಯಾಸ್ ವತಿಯಿಂದ ಸೇಫ್ಟಿ ಕ್ಲಿನಿಕ್ ಕಾರ್ಯಾಗಾರ

    • By admin
    • October 16, 2024
    • 27 views
    ವಕೀಲರ ಸಂಘ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಶ್ರೀ ಮಂಜು ಇಂಡೇನ್ ಗ್ಯಾಸ್ ವತಿಯಿಂದ ಸೇಫ್ಟಿ ಕ್ಲಿನಿಕ್ ಕಾರ್ಯಾಗಾರ

    ರುಡ್ ಸೆಟ್ ಸಂಸ್ಥೆ, ಸಿದ್ಧವನ ಉಜಿರೆ ಇದರ ವತಿಯಿಂದ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್‌ ತಯಾರಿಕೆ ತರಬೇತಿಯನ್ನು ಹಮ್ಮಿಕೊಂಡಿದೆ

    • By admin
    • October 11, 2024
    • 57 views
    ರುಡ್ ಸೆಟ್ ಸಂಸ್ಥೆ, ಸಿದ್ಧವನ ಉಜಿರೆ ಇದರ ವತಿಯಿಂದ ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲ ಪೌಡರ್‌ ತಯಾರಿಕೆ ತರಬೇತಿಯನ್ನು ಹಮ್ಮಿಕೊಂಡಿದೆ

    ನವರಾತ್ರಿಯ 9ನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುವ ಪದ್ಧತಿ ಹಾಗೂ ಮಹತ್ವ

    • By admin
    • October 11, 2024
    • 23 views
    ನವರಾತ್ರಿಯ 9ನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುವ ಪದ್ಧತಿ ಹಾಗೂ ಮಹತ್ವ

    ಕುವೆಂಪು ವಿವಿಯಲ್ಲಿ ತಡವಾಗಿ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

    • By admin
    • October 7, 2024
    • 79 views
    ಕುವೆಂಪು ವಿವಿಯಲ್ಲಿ ತಡವಾಗಿ ಪ್ರಕಟವಾಗುವ ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

    ನಾಗರಿಕ ಅಭಿನಂದನಾ ಸಮಿತಿಯಿಂದ ಯೋಧ ಮಂಜುನಾಥ ಹಾಗೂ ಶಿಕ್ಷಕ ವಿ.ಕೆ ವಿಟ್ಲ ಅವರಿಗೆ ನಾಗರಿಕ ಸನ್ಮಾನ

    • By admin
    • October 2, 2024
    • 39 views
    ನಾಗರಿಕ ಅಭಿನಂದನಾ ಸಮಿತಿಯಿಂದ ಯೋಧ ಮಂಜುನಾಥ ಹಾಗೂ ಶಿಕ್ಷಕ ವಿ.ಕೆ ವಿಟ್ಲ ಅವರಿಗೆ ನಾಗರಿಕ ಸನ್ಮಾನ

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಟ್ರಸ್ಟ್(ರಿ) ವತಿಯಿಂದ ನಿಡ್ಲೆ ಗ್ರಾಮದಲ್ಲಿ ಸಿಡಿಲು ಬಡಿದು ಮನೆ ಹಾನಿಯಾದ ಕುಟುಂಬಕ್ಕೆ ಆರ್ಥಿಕ ನೆರವು

    • By admin
    • October 1, 2024
    • 426 views
    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಸೇವಾ ಟ್ರಸ್ಟ್(ರಿ) ವತಿಯಿಂದ ನಿಡ್ಲೆ ಗ್ರಾಮದಲ್ಲಿ ಸಿಡಿಲು ಬಡಿದು ಮನೆ ಹಾನಿಯಾದ ಕುಟುಂಬಕ್ಕೆ ಆರ್ಥಿಕ ನೆರವು