ಇತಿಹಾಸದ ಬೆಳಕು ಚೆಲ್ಲುವ ದಾಸಗದ್ದೆ ಶಿಲಾ ಶಾಸನ ದೊರೆತ ಪರಿಸರದಲ್ಲಿ ಪ್ರಾಚೀನ ಎರಡು ಲಿಂಗಮುದ್ರೆ ಕಲ್ಲು ಮತ್ತು ಒಂದು ಪ್ರಾಚೀನ ಅರಸೊತ್ತಿಗೆ ಕಾಲದ ಗ್ರಾಮದ ಗಡಿಕಲ್ಲು ಪತ್ತೆ!

ಮಾಣಿ ಗ್ರಾಮದ ಇತಿಹಾಸದ ಬೆಳಕು ಚೆಲ್ಲುವ ದಾಸಗದ್ದೆ ಶಿಲಾ ಶಾಸನ ದೊರೆತ ಪರಿಸರದಲ್ಲಿ ಪ್ರಾಚೀನ ಎರಡು ಲಿಂಗಮುದ್ರೆ ಕಲ್ಲು ಮತ್ತು ಒಂದು ಪ್ರಾಚೀನ ಅರಸೊತ್ತಿಗೆ ಕಾಲದ ಗ್ರಾಮದ ಗಡಿಕಲ್ಲು ಪತ್ತೆಯಾಗಿದೆ.

ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಇತಿಹಾಸದ ಬೆಳಕನ್ನು ಚೆಲ್ಲುವ ವೀರಕಂಭ ದಾಸಗದ್ದೆ ಶಿಲಾ ಶಾಸನ ಇರುವ ಪರಿಸರದಲ್ಲಿ ಅರೆಬೆಟ್ಟು- ಪದವು ಮತ್ತು ತೆಕ್ಕಿಯಾಪು ಗಡಿ ಯಲ್ಲಿ ಎರಡು ಲಿಂಗ ಮುದ್ರೆಯ ಕಲ್ಲುಗಳು ಹಾಗೂ ಮಾಣಿ ,ಅನಂತಾಡಿ, ವೀರಕಂಭ ಸಂದಿಸುವ ವಾಮನಮೇರ್ ಪಡ್ಪು ಎಂಬಲ್ಲಿ ಅರಸೊತ್ತಿಗೆ ಕಾಲದ ಪ್ರಾಚೀನ ಗಡಿಕಲ್ಲು ಲಭ್ಯ ವಾಗಿದೆ.

ಮಾಣಿ ಗ್ರಾಮದ ಇತಿಹಾಸ ಮೇಲೆ ಬೆಳಕು ಚೆಲ್ಲುವ ಮಾಣಿ -ಕಂಬಳ ಶಾಸನ 1969ನೇ ಇಸವಿಯ ಆಸುಪಾಸಿನಲ್ಲಿ ಹಾಸನ- ಮಂಗಳೂರು ರೈಲು ಮಾರ್ಗ ನಿರ್ಮಾಣ ದ ವೇಳೆ ಮಣ್ಣಿನಲ್ಲಿ ಸೇರಿರುವ ಕಾರಣ. ದಾಸಗದ್ದೆಯ ಶಾಸನ ಮಾಣಿ ಕಂಬಳ ಶಾಸನ ಸಮಕಾಲೀನ ವಾಗಿರುವ ಸಾದ್ಯತೆ ಇರುವುದರಿಂದ ಸದ್ಯ ಲಭ್ಯವಿರುವ ಈ ಒಂದು ಶಾಸನ ಮಾಣಿ ಗ್ರಾಮದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಏಕೈಕ ಐತಿಹಾಸಿಕ ಮಹತ್ವದ ಶಾಸನ ಆಗಿದೆ.ಅದರ ನೇರವಾಗಿ ಅರಬೆಟ್ಟು ಪದವು ಮತ್ತು ತೆಕ್ಕಿಯಾಪು ಗಡಿಯಲ್ಲಿ ಲಿಂಗಮುದ್ರೆಯ ಕಲ್ಲು ಲಭ್ಯ ವಾಗಿದೆ.ಲಿಂಗಮುದ್ರೆಯ ಕಲ್ಲು ಪ್ರಾಚೀನ ಅರಸರ ಕಾಲದಲ್ಲಿ ಗ್ರಾಮದ ಸೀಮಾ ಬಂದಿ ಕಲ್ಲು ಆಗಿದ್ದು. ಇವುಗಳನ್ನು ಪ್ರಾಚೀನ ಕಾಲದಲ್ಲಿ ದೇವರ ಹೆಸರಿನಲ್ಲಿ ಉಂಬಳಿ ಬಿಟ್ಟ ಭೂಮಿ ಮತ್ತು ಗ್ರಾಮದ ವ್ಯಾಪ್ತಿ ಪ್ರದೇಶ ಗುರುತಿಸಲ್ಪಡುವ ಉದ್ದೇಶದಿಂದ ಸ್ತಾಪಿಸಲ್ಪಡುತ್ತಿದ್ದರು ಎನ್ನಲಾಗಿದೆ. ಸಾದಾರಣ ಎತ್ತರದ ಗಾತ್ರದ ಶಿಲೆಯ ಮದ್ಯದಲ್ಲಿ ಶಿವಲಿಂಗ ಹಾಗೂ ಅಕ್ಕ ಪಕ್ಕ ಸೂರ್ಯ ಚಂದ್ರರ ಕೆತ್ತನೆ ಇದೆ.


ಮಾಣಿ – ವೀರಕಂಭ- ಅನಂತಾಡಿ ಮೂರು ಗ್ರಾಮಗಳು ಸಂದಿಸುವ ವಾಮನಮೇರ್ ಪದವು ಎಂಬಲ್ಲಿ ಪ್ರಾಚೀನ ಅರಸೊತ್ತಿಗೆ ಕಾಲದ ಗ್ರಾಮದ ಗಡಿ ಬಾಂದು ಕಲ್ಲು ಲಭ್ಯ ವಾಗಿರುತ್ತವೆ. ಇನ್ನು ಹುಡುಕಾಡಿದರೆ ಇನ್ನೂ ಲಿಂಗ ಮುದ್ರೆಯ ಕಲ್ಲುಗಳು,ಗಡಿ ಕಲ್ಲು ಸಿಗುವ ಸಾದ್ಯತೆ ಇದೆ ಎಂದು ಸ್ತಳೀಯರು ಅಭಿಪ್ರಾಯ ಪಟ್ಟಿದ್ದಾರೆ.ಒಟ್ಟಾರೆ ಈ ಬಗ್ಗೆ ಅದ್ಯಯನ ನಡೆಸಿದರೆ ಸ್ತಳೀಯ ಇತಿಹಾಸದ ಬಗ್ಗೆ ಕುತೂಹಲಕಾರಿ ಸಂಗತಿಗಳು ಅನಾವರಣ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

Spread the love
  • Related Posts

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ನವದೆಹಲಿ: ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಮೂವರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರನ್ನು ನವದೆಹಲಿಗೆ ಕರೆಸಿ, ಅವರ ಜತೆಯಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ…

    Spread the love

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಧರ್ಮಸ್ಥಳ: ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರಕ್ಕೆ ಮುಂಚಾನ ಶ್ರೀ ಮಹಾದೇವಿಕೃಪಾ ಮನೆಯ ಸುಕನ್ಯಾ ಮತ್ತು ಜಯರಾಮ ರಾವ್ ಮತ್ತು ಮಕ್ಕಳು ಸಮರ್ಪಿಸಲಿರುವ ನೂತನ ಶಿಲಾಮಯ ಧ್ವಜಸ್ಥಂಭವು ಕಾರ್ಕಳದಿಂದ ಹೊರಟು ಬೆಳ್ತಂಗಡಿ ಮಾರ್ಗವಾಗಿ ಡಿ.4ರಂದು ಧರ್ಮಸ್ಥಳ ತಲುಪಿ ಧರ್ಮಸ್ಥಳ ಅಣ್ಣಪ್ಪ ಬೆಟ್ಟದಲ್ಲಿ…

    Spread the love

    You Missed

    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    • By admin
    • December 8, 2025
    • 16 views
    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    • By admin
    • December 4, 2025
    • 34 views
    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    • By admin
    • December 4, 2025
    • 53 views
    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    • By admin
    • December 4, 2025
    • 35 views
    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    • By admin
    • December 4, 2025
    • 42 views
    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ

    • By admin
    • December 2, 2025
    • 71 views
    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ