ಫೇಸಬುಕ್‌ನ ಪಕ್ಷಪಾತ ನೀತಿ – ಹಿಂದುತ್ವವಾದಿ ಭಾಜಪ ಶಾಸಕ ಟಿ. ರಾಜಾಸಿಂಹ ಇವರ ‘ಫೇಸಬುಕ್ ಪೇಜ್’ ನಿಷೇಧ! – HJS ಖಂಡನೆ

ಭಾಗ್ಯನಗರದ ಭಾಜಪ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ಟಿ. ರಾಜಾಸಿಂಹ ಇವರ ‘ಫೇಸಬುಕ್ ಪೇಜ್’ಅನ್ನು ನಿಷೇಧಿಸುವ ಮೂಲಕ ಫೇಸಬುಕ್ ಭಾರತದ ‘ವಾಕ್ ಸ್ವಾತಂತ್ರ್ಯ’ವನ್ನು ನಿರ್ಬಂಧಿಸಿದೆ. ಅವರ ಪೇಜ್‌ನಲ್ಲಿ ದ್ವೇಷ ಹಬ್ಬಿಸುತ್ತಿದ್ದರೆ ಭಾರತದಲ್ಲಿ ‘ವಾಂಟೆಡ್’ ಆಗಿರುವ ಮತ್ತು ಮುಸಲ್ಮಾನ ಯುವಕರನ್ನು ಉಗ್ರರನ್ನಾಗಿಸಲು ಪ್ರೋತ್ಸಾಹಿಸುವ ಜಿಹಾದಿ ಡಾ. ಝಾಕೀರ್ ನಾಯಿಕ್ ಇವರ ಹಾಗೂ 100 ಕೋಟಿ ಹಿಂದೂಗಳನ್ನು ಮುಗಿಸುವ ಬಹಿರಂಗ ಬೆದರಿಕೆಯೊಡ್ಡುವ ‘ಎಮ್‌ಐ.ಎಮ್’ನ ಶಾಸಕ ಅಕ್ಬರುದ್ದೀನ್ ಓವೈಸಿ ಇವರ ‘ಫೇಸಬುಕ್ ಪೇಜ್’ ಮೇಲೆ ಏಕೆ ನಿಷೇಧ ಹೇರಿಲ್ಲ ? ಅನೇಕ ಜಿಹಾದಿ ಉಗ್ರವಾದಿ ಸಂಘಟನೆಗಳ ‘ಫೇಸಬುಕ್ ಪೇಜ್’ ಇಂದಿಗೂ ಜಿಹಾದ್‌ನ ಪ್ರಚಾರ ಮಾಡುತ್ತಿವೆ. ಆದುದರಿಂದ ‘ಫೇಸಬುಕ್’ ಭಾರತದಲ್ಲಿ ಮುಸಲ್ಮಾನರಿಗೊಂದು ಹಿಂದೂಗಳಿಗೆ ಮತ್ತೊಂದು ನಿಯಮ ಅಳವಡಿಸಿ ಧಾರ್ಮಿಕ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಹಿಂದೂ ಜನಜಾಗೃತಿಸ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಈ ಪ್ರಕರಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಫೇಸಬುಕ್’ ತಕ್ಷಣವೇ ಟಿ. ರಾಜಾಸಿಂಹ ಇವರ ‘ಫೇಸಬುಕ್ ಪೇಜ್’ ಮುಂಚಿನಂತೆ ಆರಂಭಿಸಬೇಕು, ಇಲ್ಲದಿದ್ದರೆ ಹಿಂದೂ ಸಮಾಜಕ್ಕೇ ಫೇಸಬುಕ್ ನಿಷೇಧಿಸುವಂತೆ ಕರೆ ನೀಡಬೇಕಾಗುವುದು, ಎಂದು ಶ್ರೀ. ಶಿಂದೆಯವರು ಎಚ್ಚರಿಕೆ ನೀಡಿದರು.

ದೆಹಲಿಯಲ್ಲಿ ಮತ್ತು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಲಭೆಗಳ ಸಮಯದಲ್ಲಿಯೂ ಮತಾಂಧರು ತಮ್ಮ ‘ಫೇಸ್‌ಬುಕ್ ಪೇಜ್’ನಲ್ಲಿ ಒಟ್ಟಿಗೆ ಸೇರಲು ಕರೆ ನೀಡಿದ್ದರು ಎಂಬುದು ತಿಳಿದುಬಂದಿದೆ. ಭಾರತದ ನಗರಗಳಲ್ಲಿ ಗಲಭೆಗಳಿಗೆ ಭುಗಿಲೆಬ್ಬಿಸಿದ ‘ಫೇಸ್‌ಬುಕ್ ಪೇಜ್’ನಲ್ಲಿ ಫೇಸ್‌ಬುಕ್ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಅದೇ ರೀತಿ ‘ಫೇಸಬುಕ್’ನಲ್ಲಿ ಇದುವರೆಗೆ ಅನೇಕ ಸಲ ಹಿಂದೂ ದೇವತೆಗಳು, ರಾಷ್ಟ್ರಪುರುಷರ ವಿಷಯದಲ್ಲಿ ಅಶ್ಲೀಲ ಮತ್ತು ಆಕ್ಷೇಪಾರ್ಹ ಪೋಸ್ಟ್ ಪ್ರಸಾರಿತವಾಗುತ್ತಿವೆ. ಇದರ ಬಗ್ಗೆ ಹಿಂದೂತ್ವವಾದಿ ಸಂಘಟನೆಗಳು ಅನೇಕ ಬಾರಿ ‘ಫೇಸ್‌ಬುಕ್’ ಇಂತಹ ಪೋಸ್ಟ್ ಅಥವಾ ಪೇಜ್ ನಿರ್ಬಂಧಿಸುವಂತೆ ವಿನಂತಿಸಿವೆ; ಆದರೆ ಅದರ ಬಗ್ಗೆ ‘ಫೇಸಬುಕ್’ ಎಂದೂ ಕ್ರಮಕೈಗೊಂಡಿಲ್ಲ, ಇದು ‘ಫೇಸಬುಕ್’ನ ಪಕ್ಷಪಾತ!

ಹಿಂದೂ ಜನಜಾಗೃತಿ ಸಮಿತಿಯ ಅಧಿಕೃತ ‘ಪುಟ’ವನ್ನೂ ಇದೇ ರೀತಿ 2012 ರಲ್ಲಿ ಯಾವುದೇ ರೀತಿಯ ಕಾರಣವನ್ನು ನೀಡದೇ ಫೇಸ್‌ಬುಕ್’ ಬಂದ್ ಮಾಡಿತ್ತು. ಇದರಿಂದ ‘ಫೇಸ್‌ಬುಕ್’ನ ಹಿಂದೂದ್ವೇಷ ಸ್ಪಷ್ಟವಾಗಿ ಕಾಣುತ್ತದೆ. ಶಾಸಕ ಟಿ. ರಾಜಾಸಿಂಹ ಇವರು ಜನಪ್ರತಿನಿಧಿಯಾಗಿದ್ದಾರೆ, ಅವರ ‘ಪೇಜ್’ ಬಂದ್ ಮಾಡಿದ್ದರಿಂದ ಜನಸಾಮಾನ್ಯರಿಗೆ ಅವರೊಂದಿಗೆ ನೇರ ಸಂಪರ್ಕ ಮಾಡಿ ಸಮಸ್ಯೆಗಳನ್ನು ಬಿಡಿಸುವಲ್ಲಿ ಅಡಚಣೆಯಾಗಲಿದೆ. ಆದ್ದರಿಂದ ಭಾರತ ಸರಕಾರವು ‘ಫೇಸ್‌ಬುಕ್’ನ ಈ ಹಿಂದೂವಿರೋಧಿ ಕೃತ್ಯಕ್ಕೆ ನಿರ್ಬಂಧ ಹೇರಬೇಕು, ಎಂದು ಕೇಂದ್ರ ಸರಕಾರದ ಬಳಿ ನಾವು ಆಗ್ರಹಿಸುತ್ತೇವೆ. ಶಾಸಕ ಟಿ. ರಾಜಾ ಸಿಂಹ ಇವರ ಫೇಸ್‌ಬುಕ್ ಪೇಜ್ ಬಂದ್ ಮಾಡುವುದೆಂದರೆ ಒಂದು ರೀತಿಯಲ್ಲಿ ಹಿಂದೂಜನರ ಧ್ವನಿಯನ್ನು ಅದುಮುವ ಕೆಲಸವನ್ನು ‘ಫೇಸ್‌ಬುಕ್’ ಮಾಡುತ್ತಿದೆ. ಭಾರತದಲ್ಲಿ ಕೋಟಿಗಟ್ಟಲೆ ರೂಪಾಯಿಯನ್ನು ಸಂಪಾಧಿಸುವ ಫೇಸ್‌ಬುಕ್ ಒಂದು ವೇಳೆ ಬಹುಸಂಖ್ಯಾತ ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಲ್ಲಿ, ಹಿಂದೂಗಳೂ ‘ಫೇಸ್‌ಬುಕ್’ನ್ನು ಬಹಿಷ್ಕರಿಸುವರು, ಎಂಬುದು ‘ಫೇಸ್‌ಬುಕ್’ನವರು ಗಮನದಲ್ಲಿಡಬೇಕು.

Spread the love
  • Related Posts

    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    ಮಡಿಕೇರಿ:- ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಶ್ರೀ ಕಾವೇರಿ ಕೃಪಾ ವಿಶ್ವಕಲ್ಯಾಣ ಸೇವಾ ಸಮಿತಿ(ರಿ.), ಅಶ್ವಿನಿ ಆಸ್ಪತ್ರೆ ಮಡಿಕೇರಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕೊಡಗು ಶಾಖೆ…

    Spread the love

    ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ’ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ’

    ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ದೇಶನದಂತೆ ‘ಬ್ಯಾಂಕ್‌ಗಳ ವ್ಯವಹಾರ ಪ್ರತಿನಿಧಿ’ (Business Correspondence) ಆಗಿ ಸೇವೆಗೈಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ಗೆ ದೇಶದ ಬ್ಯಾಂಕಿಂಗ್ ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ‘ಭಾರತೀಯ ಆತೀ ಸಣ್ಣ ಮತ್ತು ಮಧ್ಯಮ…

    Spread the love

    You Missed

    ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

    • By admin
    • February 21, 2025
    • 49 views
    ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    • By admin
    • February 15, 2025
    • 55 views
    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ’ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ’

    • By admin
    • February 15, 2025
    • 225 views
    ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ’ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ’

    ತುಳುನಾಡಿನ ಕೆಡ್ಡಸ ಹಬ್ಬದ ಆಚರಣೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ತುಳುನಾಡ ಕಂಪನ್ನು ರಾಷ್ಟ್ರ ರಾಜಧಾನಿಯಲ್ಲಿ ಪಸರಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟರು

    • By admin
    • February 12, 2025
    • 74 views
    ತುಳುನಾಡಿನ ಕೆಡ್ಡಸ ಹಬ್ಬದ ಆಚರಣೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ತುಳುನಾಡ ಕಂಪನ್ನು ರಾಷ್ಟ್ರ ರಾಜಧಾನಿಯಲ್ಲಿ ಪಸರಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟರು
    Let's chat on WhatsApp

    How can I help you? :)

    01:48