“ನಾನು ನನ್ನ ತುಳುನಾಡು”

🖊️ಪ್ರವೀಶ್ ಕುಲಾಲ್ ಬೀರಿಕುಂಜ


ನಾನು ನನ್ನ ತುಳುನಾಡಿನ ಬಗ್ಗೆ ಹೆಚ್ಚಾಗಿ ತುಳುವಿನಲ್ಲೇ ಲೇಖನ ಬರೆಯುತ್ತಿದ್ದೆ. ಈ ಪುಟ್ಟ ಲೇಖನವನ್ನು ಕನ್ನಡ ದಲ್ಲಿ ಬರೆಯಲು ತೀರ್ಮಾನಿಸಿದೆ ಯಾಕೆಂದರೆ “ತುಳುನಾಡನ್ನು ತುಳುವರು ಎಷ್ಟು ಪ್ರೀತಿಸುತ್ತಾರೊ ಅಷ್ಟೇ ಕನ್ನಡಿಗರೂ ಪ್ರೀತಿಸುತ್ತಾರೆ ಎಂಬುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ” ಈ ಕಾರಣಕ್ಕಾಗಿ ಕರ್ನಾಟಕದ ನನ್ನ ಕನ್ನಡಿಗ ಸ್ನೇಹಿತರೂ ನನ್ನ ಈ ಪುಟ್ಟದಾದ ಲೇಖನವನ್ನು ಓದಲಿ ಎಂದು ಖುಷಿಯಿಂದ ಬರೆಯುತ್ತಿದ್ದೇನೆ.

ಉತ್ತರದ ಬಾರ್ಕೂರಿನಿಂದ ದಕ್ಷಿಣದ ನೀಲೇಶ್ವರದ ವರೆಗೆ ಸ್ವಚ್ಚಂದವಾದ ಹಸಿರು ವನಸಿರಿಯಿಂದ ಕಂಗೊಲಿಸುತ್ತಿದೆ ನನ್ನ ತುಳುನಾಡು. ಕಲೆ ಕಾರ್ಣಿಕಗಳಿಂದ ಮೆರೆಯುತ್ತಿದೆ. ಯಕ್ಷಗಾನ ಕೋಲ ಕಂಬುಲಗಳ ತವರೂರು ದೈವ ದೇವರುಗಳು ನೆಲೆಯಾಗಿರುವ ಪುಣ್ಯದ ಮಣ್ಣು ತುಳುನಾಡು. ವೀರರಾದ ಅಗೊಳಿ ಮಂಜಣ್ಣ ಹಾಗು ಕಾರಣಿಕದ ವೀರ ಪುರುಷರಾದ ಕೊಟಿ ಚನ್ನಯರು, ದೇವುಪೂಂಜರಂತಹ ಕಾರ್ಣಿಕ ಪುರುಷರು ರ್ಧರ್ಮ ನಿಷ್ಠೆ ಯಿಂದ ಮೆರೆದ ಪುಣ್ಯದ ಮಣ್ಣು ಇದು. ಸ್ತೀಪ್ರಧಾನವಾದ ಚೌಕಟ್ಟಿನಲ್ಲಿ ಎಲ್ಲಾ ಸಂಪ್ರದಾಯಗಳು ಇಲ್ಲಿನದ್ದು. ಇತರರಿಗೆ ಚಂದ್ರೊದಯದ ಅಮಾವಾಸ್ಯೆ ಯ ಲೆಕ್ಕದಲ್ಲಿ ತಿಂಗಳ ಕಾಲ ನಿರ್ಣಯವಾದರೆ ತುಳುನಾಡಿಗರಿಗೆ ಸೂರ್ಯೋದಯ ಸಂಕ್ರಮಣ ದ ಲೆಕ್ಕದಲ್ಲಿ ತಿಂಗಳ ಕಾಲ ನಿರ್ಣಯವಾಗುತ್ತದೆ ತಿಂಗಳ ಸಂಕ್ರಮಣದಂದು ತುಳುನಾಡಿನಲ್ಲಿ ತಿಂಗಳು ಬದಲಾಗುತ್ತದೆ ಸೌರಮಾನ ಯುಗಾದಿ (ಬಿಸು ಪರ್ಬ) ತುಳುನಾಡಿಗೆ ಹೊಸ ವರ್ಷ.

ವಿಭಿನ್ನ ಆಚರಣೆ ವಿಭಿನ್ನ ಸಂಸ್ಕೃತಿ ತುಳುನಾಡಿನದ್ದು ಭಾರತ ದ ಇತರ ಹಲವು ರಾಜ್ಯಗಳಲ್ಲಿ ಪುರುಷ ಪ್ರದಾನ ಪದ್ಧತಿಯಲ್ಲಿ ಮದುವೆಯಾಗಿ ಹೋದ ಹೆಣ್ಣು ಗಂಡನ ಕುಟುಂಬವನ್ನು ಸೇರುತ್ತಾಳೆ ಮತ್ತೆ ಅವಳಿಗೆ ತಾಯಿಮನೆಯ ಯಾವ ಹಕ್ಕೂ ಇರುವುದಿಲ್ಲ ಈ ಪದ್ಧತಿ ಗೆ “ಮಕ್ಕಳ ಕಟ್ಟ್” ಎಂಬ ಹೆಸರೂ ಇದೆ ಆದರೆ ತುಳುನಾಡಿನಲ್ಲಿ ಇದರ ತದ್ವಿರುಧವಾಗಿ “ಅಳಿಯಕಟ್ಟ್” ಅಥವಾ ಅಪ್ಪೆ ಕಟ್ಟ್ ಎಂಬ ಪದ್ಧತಿಯಲ್ಲಿ ತಾಯಿಮನೆಯ ಎಲ್ಲಾ ಹಕ್ಕನ್ನು ಮದುವೆಯಾಗಿ ಹೋದ ಹೆಣ್ಣೆ ಹೊಂದಿರುತ್ತಾಳೆ ತಾಯಿಮನೆಯ ಆಸ್ತಿಪಾಲು ಅಂತ ಬಂದಾಗ ಆ ಮನೆಯ ಗಂಡುಮಕ್ಕಳಿಗಿರುವ ಸಮಾನ ಪಾಲನ್ನು ಅವಳಿಗೂ ನೀಡಲಾಗುತ್ತದೆ ಇಂತಹ ಸ್ತ್ರೀ ಗೆ ಮಹತ್ವದ ಸ್ಥಾನವನ್ನು ತುಳುನಾಡಿನಲ್ಲಿ ಅಲ್ಲದೆ ಬೇರೆ ಎಲ್ಲೂ ಇಂತಹ ಮೂಲ ಪದ್ದತಿಯನ್ನು ನೋಡಲು ಸಾಧ್ಯವಿಲ್ಲ.

ಇನ್ನು ಆರಾಧನೆ ಯ ವಿಚಾರಕ್ಕೆ ಬಂದರೆ “ದೇವರಿಗಿಂತ ದೈವಗಳಿಗೆ ಹೆಚ್ಚಿನ ಆರಾಧನಾ ಪದ್ದತಿ ತುಳುನಾಡಿನಲ್ಲಿ ಕಾಣಸಿಗುತ್ತದೆ” ದೇವರಿಗೆ ಸಂಸ್ಕೃತ ಭಾಷೆ ಯಲ್ಲಿ ಇರುವ ಶ್ಲೋಕಗಳಿಂದ ಪೂಜೆ ಪುರಸ್ಕಾರಕ್ಕೆ ಪ್ರಾಧನ್ಯತೆ ನೀಡಿದರೆ ತುಳುನಾಡಿನಲ್ಲಿ ಕಾರ್ಣಿಕ ಮೆರೆಯುತ್ತಿರುವ ದೈವಗಳಿಗೆ “ತುಳುನಾಡಿನ ಆಡುಭಾಷೆ ತುಳುವಿನಲ್ಲೇ ಸಂಧಿ ಪಾಡ್ದನಗಳ ಮೂಲಕ ದೈವಾರಾಧನೆದ ಗೆ ಪ್ರಾಧಾನ್ಯತೆಯ
ನ್ನು ನೀಡಲಾಗುತ್ತದೆ”.

ಸುಂದರವಾದ ಸಂಸ್ಕೃತಿ ಹಾಗು ಪ್ರಾಕೃತಿಕ ಸಂಪತ್ತು ಸೌಂದರ್ಯದಿಂದ ಮೆರೆಯುತ್ತಿರುವ ತುಳುನಾಡು ಇನ್ನು ಮುಂದೆಯೂ ತುಳುನಾಡಿನ ದೈವ ದೇವರುಗಳ ಕೃಪೆಯಿಂದ ಶ್ರೀಂತವಾಗಿ ವಿಶ್ವಕ್ಕೆ ಮಾದರಿಯಾಗಿ ಮೆರೆಯಲಿ ಎಂಬುದೇ ನನ್ನ ಆಶಯ.

✍️ಪ್ರವೀಶ್ ಕುಲಾಲ್ ಬೀರಿಕುಂಜ

Spread the love
  • Related Posts

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಟೆಂಡರ್ ಕೂಪದ ಭ್ರಷ್ಟಾಚಾರವನ್ನು ಖಂಡಿಸಲು…

    Spread the love

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ ಕಾನರ್ಪ ಕಡಿರುದ್ಯಾವರ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿ ಸಭೆಯನ್ನು ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಪಣಿಕಲ್ ಹಾಗೂ…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 281 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 297 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 198 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 298 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 156 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 89 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ