ಹರಿಯುವ ನೀರಿನ ಜುಳು ಜುಳು ನಾದವ ಆಲಿಸಿ ಕೊಂಡು ಹೋದರೆ ನಿಸರ್ಗದ ಸಹಜ ಸಂಗೀತ ನಿನಾದದ ‘ ಹುಟ್ಟು ‘ ಗುಟ್ಟುಗಳನ್ನು ಅರಿಯಬಹುದು. 🖊️• ದಿನೇಶ್ ಹೊಳ್ಳ ಸಹ್ಯಾದ್ರಿ ಸಂಚಯ (ರಿ.)

ಅಡವಿಯ ಎಡೆಯಲ್ಲಿ ಗಿಡಗಳ ನಡುವಲ್ಲಿ ನೊರೆಗಳ ಪುಟಿ ಸುತ ಕುಣಿ ಕುಣಿ ದಾಡುತ ಹರಿಯುವ ನೀರಿನ ಜುಳು ಜುಳು ನಾದವ ಆಲಿಸಿ ಕೊಂಡು ಹೋದರೆ ನಿಸರ್ಗದ ಸಹಜ ಸಂಗೀತ ನಿನಾದದ ‘ ಹುಟ್ಟು ‘ ಗುಟ್ಟುಗಳನ್ನು ಅರಿಯಬಹುದು. ಅದು ಕೇವಲ ನೀರಿನ ಹರಿವು ಅಲ್ಲ, ಆದು ಅಡವಿಯ ಜೀವಂತಿಕೆಯ ನರ ನಾಡಿ, ನಾಡಿನ ಸಮಸ್ತ ಜನತೆಯ ಬದುಕಿನ ಚೇತನಾ ಶಕ್ತಿ ಎಂಬ ಜಲನಾಡಿ. ಪಶ್ಚಿಮ ಘಟ್ಟದ ದಟ್ಟ ಅಡವಿಯ ಒಳಗೆ ನದಿ ಕಣಿವೆಯ ನೀರಿನ ಹರಿವು ಪ್ರದೇಶವನ್ನು ಶೋಧಿಸುತ್ತಾ ಹೋದಂತೆಯೇ ಅತ್ಯಮೂಲ್ಯವಾದ ನೈಸರ್ಗಿಕ ಸೂಕ್ಷ್ಮ ವಿಚಾರಗಳು ಒಂದೊಂದಾಗಿ ಪುಟ ತೆರೆಯುತ್ತಾ ಹೋಗುತ್ತವೆ. ಅಲ್ಲಿ ಎಲ್ಲವೂ ನಿಗೂಢ, ಎಲ್ಲವೂ ಅಗಾಧ. ಪ್ರತೀ ಹೆಜ್ಜೆಯಲ್ಲೂ ಕಲಿಯುವಂತದ್ದು ತುಂಬಾ ಇರುತ್ತವೆ.

ಮೇಲ್ನೋಟಕ್ಕೆ ಹಚ್ಚ ಹಸುರಿನ ದಟ್ಟ ಅಡವಿ, ಒಳನೋಟದಲ್ಲಿ ಜೀವ ವೈವಿಧ್ಯತೆಗಳ ಭದ್ರ ಬದುಕಿನ ಸಂಕೀರ್ಣ. ನೀರಿನ ಅಂಚಿನಲ್ಲಿ ಕಲ್ಲಿಗೆ ಅಂಟಿರುವ ಪಾಚಿ, ಶಿಲೀಂಧ್ರ ಗಳಿಂದ ಹಿಡಿದು ಆಕಾಶವನ್ನು ಚುಚ್ಚಿ ನಿಂತ ಮರಗಳವರೆಗೆ , ತರಗೆಲೆಗಳ ಎಡೆಯಲ್ಲಿ ಇರುವ ಇರುವೆಯಿಂದ ಹಿಡಿದು ನೀರಿನ ಪಥದಲ್ಲಿ ಸಾಗುವ ಆನೆಗಳವರೆಗೆ ಒಂದಕ್ಕೊಂದು ಅವಿನಾಭಾವ ಸಂಬಂಧ ಇದೆ. ಜೀವ ಸಂಕಲೆಯ ಈ ಅಗೋಚರ ಪ್ರಭಾವಳಿಯ ಪ್ರಭೆಯು ನಾಡಿನ ಯಾವ ಮೂಲೆಗೂ ಪ್ರಭಾವ ಬೀರುವ ಶಕ್ತಿ ಇರುವಂತದ್ದು. ಪಶ್ಚಿಮ ಘಟ್ಟದ ಶೋಲಾ ಅರಣ್ಯದಲ್ಲಿ ಹರಿಯುವ ಈ ಜಲ ನಾಡಿಗಳು ಮಳೆ ನೀರನ್ನು ಇಂಗಿಸಿಕೊಂಡು ವರ್ಷ ಪೂರ್ತಿ ಹೊಳೆಯನ್ನು ಜೀವಂತ ಆಗಿ ಇರಿಸಿಕೊಳ್ಳುವ ಸಾಮರ್ಥ್ಯ ಇರುವಂತವು. ವರ್ಷಪೂರ್ತಿ ಈ ಅರಣ್ಯದ ಎಲೆಗಳು ಸೂರ್ಯನ ಕಿರಣ ನೆಲಕ್ಕೆ ಬೀಳದ ದಟ್ಟ ಅಡವಿ ಒಳಗೆ ಬಿದ್ದಾಗ ತರಗೆಲೆಗಳು ಅಲ್ಲಿನ ಸದಾ ಒರತೆ ಉಳ್ಳ ಮಣ್ಣಿಗೆ ಬಿದ್ದಾಗ ಆ ಮಣ್ಣು ಸ್ಪಂಜಿನಂತೆ ಇದ್ದು ನೀರನ್ನು ಹಿಡಿದಿಟ್ಟು ಕೊಳ್ಳುತ್ತವೆ. ಹೀಗೆ ಸಂಗ್ರಹ ಆದ ನೀರು ಹಂತ, ಹಂತವಾಗಿ ಒಂದು ಮಳೆಗಾಲದಿಂಡ ಇನ್ನೊಂದು ಮಳೆಗಾಲದ ವರೆಗೆ ನದಿಗೆ ಹರಿಯುತ್ತಾ ಇದ್ದು ಅಲ್ಲಿನ ನೈಸರ್ಗಿಕ ವ್ಯವಸ್ಥೆ ಒಂದು ಅಗೋಚರ ತಾಂತ್ರಿಕ ರೀತಿಯಲ್ಲಿ ಇರುತ್ತವೆ.

ನಡೆಯುತ್ತಾ ಹೋಗುವಾಗ ಕಾಲಿಗೆ ರಕ್ತದ ತಿಲಕ ಇಡುವ ಜಿಗಣೆಗಳು, ನೀರಿಗೆ ಚಂಗನೆ ಜಿಗಿಯವ ಕಪ್ಪೆಗಳು, ತರ ಗೆಲೆಗಳ ಒಳಗೆ ಸಂಚರಿಸುವ ಇರುವೆಗಳು, ನೀರಿನ ಅಂಚಿನಲ್ಲಿ ಇರುವ ಪಾಚಿಗಳು, ನೀರಿನ ಇಕ್ಕಡೆ ಇರುವ ಹುಲ್ಲುಗಳು, ಒಂದು ಕಡೆ ಒಂದು ಗೆಲ್ಲನ್ನು ಎಳೆದರೆ 30 ಅಡಿ ದೂರದಲ್ಲಿ ಆಗುವ ಸಂಚಲನದ ನೀರಿಗೆ ಸ್ಪರ್ಶಿಸುವ ಬೀಳುಗಳು, ನೀರಿನ ಮೇಲೆ ಹಾರಾಡುವ ಸಣ್ಣ ಕೀಟಗಳು, ನೀರಲ್ಲಿ ಕೊಳೆತ ಎಲೆಗಳಲ್ಲಿ ಇರುವ ಶಿಲೀಂಧ್ರಗಳು, ಬೀಜ ಸಿಂಚನದ ಮೂಲಕ ಕಾಡಿನ ಬೆಳವಣಿಗೆಗೆ ಪಾತ್ರವಾಗುವ ಹಾರ್ನ್ ಬಿಲ್, ಸಿಂಗಲೀಕ, ಮುಸುವ, ಲದ್ದಿ ಹಾಕುವ ಆನೆ, ಸೆಗಣಿ ಹಾಕುವ ಕಾಟಿ, ಹಿಕ್ಕೆ ಹಾಕುವ ಎಲ್ಲವೂ ಪಶ್ಚಿಮ ಘಟ್ಟದ ನೀರಿನ ಮತ್ತು ಅರಣ್ಯದ ಸಂರಕ್ಷಣೆಯ ಪಾತ್ರಧಾರಿಗಳು. ಇದು ಕನ್ಯಾಕುಮಾರಿಯಿಂದ ಗುಜರಾತ್ ತಪತಿ ನದೀ ಕಿನಾರೆ ವರೆಗಿನ 1600 ಕಿ. ಮೀ ನಷ್ಟು ಉದ್ದಕ್ಕೂ ಇರುವಂತದ್ದು. ಮಳೆ, ಹೊಳೆ, ಕಾಡು, ಕಣಿವೆ, ಗಿರಿ, ಝರಿ ಇವೆಲ್ಲವೂ ಒಂದಕ್ಕೊಂದು ಅವಲಂಬಿತವಾಗಿ ಇದ್ದ ಕಾರಣ ಮಳೆ ಕಾಲ, ಕಾಲಕ್ಕೆ ಬರುವಂತಿದೆ. ಆದರೆ ಮನುಜ ಸಂತಾನದ ‘ ಅಭಿವೃದ್ದಿ ‘ ಪರ ಯೋಜನೆಗಳು ಇಂದು ಪಶ್ಚಿಮ ಘಟ್ಟ ದ ಸೂಕ್ಷ್ಮ ಪ್ರದೇಶಕ್ಕೆ ಹಿಂಸೆ ನೀಡುತ್ತಾ ಬಂದಿದ್ದರೂ ಸಹನಾ ಸ್ವರೂಪಿ ಪ್ರಕೃತಿ ಮಾತೆ ಎಲ್ಲವನ್ನೂ ಸಹಿಸಿಕೊಂಡು ಬಂದಿರುತ್ತಾಳೆ. ಮನುಜರ ಹಿಂಸೆ, ದೌರ್ಜನ್ಯ ಎಷ್ಟೇ ಇದ್ದರೂ ಮಳೆಗಾಲ ಯಾವತ್ತಿಗೂ ಪೋಸ್ಟ್ ಪೋನ್ ಆಗಿಲ್ಲ.
ಇದು ಮೊನ್ನೆ ಶಿಬಾಜೆ ರಕ್ಷಿತಾರಣ್ಯದಲ್ಲಿ ನೇತ್ರಾವತಿಯ ಉಪನದಿ ಕಪಿಲಾ ನದಿಯ ಹರಿವಿನ ಪಥದಲ್ಲಿ ಹೆಜ್ಜೆ ಹಾಕುತ್ತಾ ಹೋದಾಗ ಕಂಡ ದೃಶ್ಯಗಳು.

🖊️• ದಿನೇಶ್ ಹೊಳ್ಳ
ಸಹ್ಯಾದ್ರಿ ಸಂಚಯ ( ರಿ. )

Spread the love
  • Related Posts

    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    ಉಜಿರೆ: ಬೆಳ್ತಂಗಡಿ ತಾಲೂಕಿನ ಉಜಿರೆಯ ಬೆನಕ ಹೆಲ್ತ್ ಸೆಂಟರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ಯುವತಿಯರಿಗೆ ಉಚಿತವಾಗಿ ತರಬೇತಿಯೊಂದಿಗೆ ಉದ್ಯೋಗಾವಕಾಶ ಪಡೆಯುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ನಲ್ಲಿ 2ವರ್ಷದ ANM ತರಬೇತಿಯನ್ನು…

    Spread the love

    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    Bangalore: ರಾಜ್ಯದಲ್ಲಿ ಎಚ್ಎಸ್ಆರ್ಪಿ ಅಳವಡಿಸಲು ಸೆಪ್ಟೆಂಬರ್ 15ರವರೆಗೆ ಅವಕಾಶ ನೀಡಲಾಗಿದೆ. HSRP ಗಳನ್ನು ಪಡೆಯದ ವಾಹನ ಮಾಲೀಕರು ಸೆ.16 ರಿಂದ ದಂಡವನ್ನು ಪಾವತಿಸಬೇಕಾಗಬಹುದು ಅಥವಾ ಇತರ ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆ. 2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ…

    Spread the love

    You Missed

    ಗಣಪನಿಗೆ 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ

    • By admin
    • September 7, 2024
    • 65 views
    ಗಣಪನಿಗೆ 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ

    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    • By admin
    • September 4, 2024
    • 194 views
    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    • By admin
    • September 4, 2024
    • 28 views
    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    ಸ್ಮಾರ್ಟ್ ಫೋನ್ ಬಳಕೆಗೂ ಮಿದುಳಿನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ: WHO ಸ್ಪಷ್ಟನೆ

    • By admin
    • September 4, 2024
    • 21 views
    ಸ್ಮಾರ್ಟ್ ಫೋನ್ ಬಳಕೆಗೂ ಮಿದುಳಿನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ: WHO ಸ್ಪಷ್ಟನೆ

    ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ, ಶರದ್ ಗೆ ಬೆಳ್ಳಿ ಮರಿಯಪ್ಪನ್ ಗೆ ಕಂಚಿನ ಪದಕ

    • By admin
    • September 4, 2024
    • 18 views
    ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ, ಶರದ್ ಗೆ ಬೆಳ್ಳಿ ಮರಿಯಪ್ಪನ್ ಗೆ ಕಂಚಿನ ಪದಕ

    ಕೆಐಒಸಿಎಲ್ ಸಂಸ್ಥೆಯನ್ನು ಎನ್.ಎಮ್.ಡಿ.ಸಿ ಸಂಸ್ಥೆಯೊಂದಿಗೆ ವೀಲೀನ ಪ್ರಕ್ರಿಯೆ ಚಾಲನೆ ನೀಡುವ ನಿಟ್ಟಿನಲ್ಲಿ ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಒತ್ತಾಯಿಸುವಂತೆ ರಾಜ್ಯ ಸಭಾ ಸದಸ್ಯರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಬಿಎಮ್ಎಸ್ ನಿಯೋಗದಿಂದ ಮನವಿ ಸಲ್ಲಿಕೆ

    • By admin
    • September 3, 2024
    • 45 views
    ಕೆಐಒಸಿಎಲ್ ಸಂಸ್ಥೆಯನ್ನು ಎನ್.ಎಮ್.ಡಿ.ಸಿ ಸಂಸ್ಥೆಯೊಂದಿಗೆ ವೀಲೀನ ಪ್ರಕ್ರಿಯೆ ಚಾಲನೆ ನೀಡುವ ನಿಟ್ಟಿನಲ್ಲಿ ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಒತ್ತಾಯಿಸುವಂತೆ ರಾಜ್ಯ ಸಭಾ ಸದಸ್ಯರಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಬಿಎಮ್ಎಸ್ ನಿಯೋಗದಿಂದ ಮನವಿ ಸಲ್ಲಿಕೆ