ಅಡಿಕೆ ಖರೀದಿಸಿ ಹಣ ನೀಡದೆ ಪಂಗನಾಮ! ಅಡಿಕೆ ಖರೀದಿಸಿದ ವ್ಯಾಪಾರಿ ನಿಗೂಢ ನಾಪತ್ತೆ! ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಅಡಿಕೆ ವ್ಯಾಪಾರಿಯೊಬ್ಬರು ಅಡಿಕೆ ಬೆಳೆಗಾರರಿಂದ ಅಡಿಕೆ ಖರೀದಿಸಿ ಹಣ ನೀಡದೇ ವಂಚನೆ ಮಾಡಿರುವ ಘಟನೆ ಬಂದಾರು ಗ್ರಾಮದ ಪಾಣೆಕಲ್ಲು ಎಂಬಲ್ಲಿ ನಡೆದಿದೆ.

ತಾಲೂಕಿನ ಬಂದಾರು ಗ್ರಾಮದ ಪಾಣೆಕಲ್ಲು ಬಟ್ಲಡ್ಕ ಎಂಟರ್‌ ಪ್ರೈಸಸ್ಸ್‌ನ ಅಡಿಕೆ ವ್ಯಾಪಾರಸ್ಥ ಬಿ ಎಮ್‌ ರಫೀಕ್‌ ರವರೊಂದಿಗೆ ದೂರುದಾರ ಡಾಕಯ್ಯ ಗೌಡ ಕೊಯ್ಯೂರು ಇವರು ಸುಮಾರು 3 ವರ್ಷಗಳಿಂದ ಅಡಿಕೆ ನೀಡುತ್ತಾ ವ್ಯವಹಾರವನ್ನು ಮಾಡುತ್ತಾ ಬಂದಿರುತ್ತಾರೆ.

ಅಡಿಕೆಗೆ ಮಾರುಕಟ್ಟೆ ಧಾರಣೆಗೆ ಅನುಗುಣವಾಗಿ ದರ ನಿಗದಿಮಾಡುತ್ತಿದ್ದು ಅಗತ್ಯ ಬಂದಾಗ ಆತನಿಂದ ಹಣ ಪಡೆದುಕೊಳ್ಳುತ್ತಿದ್ದರು . 07-05-2020 ರಂದು ಐದು ಲಕ್ಷದ ಇಪ್ಪತ್ತೈದುಸಾವಿರದ ಐನೂರಾ ಎಂಬತ್ತೆಂಟು ರೂಪಾಯಿ ಮೊತ್ತದ ಅಡಿಕೆಯನ್ನು ಬಿ ಎಮ್‌ ರಫೀಕ್‌ ರವರಿಗೆ ಕೊಟ್ಟಿದ್ದು ಆ ಸಮಯ ಎರಡು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಯನ್ನು ನೀಡಿದ್ದು ಉಳಿದ ಮೂರು ಲಕ್ಷದ ಐದು ಸಾವಿರದ ಐನೂರಾ ಎಂಬತ್ತೆಂಟು ರೂಪಾಯಿಯನ್ನು (3,05,588/-) ಒಂದು ವಾರ ಬಿಟ್ಟು ನೀಡುತ್ತೇನೆಂದು ತಿಳಿಸಿದ್ದು ಅದರಂತೆ ಮೇಲಿನ ವಿಶ್ವಾಸದಿಂದ ಒಪ್ಪಿಕೊಂಡು ಒಂದು ವಾರ ಬಿಟ್ಟು ಹೋದಾಗ ಮತ್ತೆ 10 ದಿನಗಳ ಕಾಲಾವಕಾಶ ಕೇಳಿದ್ದು ಅದರಂತೆ 26-05-2020 ರಂದು ಆತನ ಅಂಗಡಿಗೆ ಹೋದಾಗ ಆತನ ಅಂಗಡಿ ಮುಚ್ಚಿದ್ದು ಆತನಿಗೆ ದೂರವಾಣಿ ಕರೆಮಾಡಿದಾಗ ಕರೆ ಸ್ವೀಕರಿಸದೇ ಇದ್ದುದ್ದರಿಂದ ಆತನ ಮಗನಾದ ರಮೀಜಾ ನಲ್ಲಿ ವಿಚಾರಿಸಿದಾಗ ಆತನು ಕೂಡಾ ಆತನ ತಂದೆ ಎಲ್ಲಿರುತ್ತಾರೆ ಎಂದು ತಿಳಿಸಿದೇ ತಂದೆಯ ಮೋಸಕ್ಕೆ ಸಹಕರಿಸಿರುತ್ತಾನೆ ಎಂಬುದು ತಿಳಿದು ಬಂದಿದೆ.

ತಾಲೂಕಿನ ಬಂದಾರು, ಮೊಗ್ರು, ಕೊಯ್ಯೂರು, ಬೆಳಾಲು ಗ್ರಾಮದ 100ಕ್ಕೂ ಆಧಿಕ ಗ್ರಾಹಕರ ಮನವೊಲಿಸಿ ವಿಶ್ವಾಸದ ನೆಲೆಯಲ್ಲಿ ಮುಂಗಡ ಅಡಕೆ ಖರೀದಿಸಿ ಸುಮಾರು 1.5 ಕೋಟಿ ರೂಪಾಯಿಗಳನ್ನು ಕೊಡಲು ಬಾಕಿ ಇಟ್ಟುಕೊಂಡಿದ್ದ ಅಡಿಕೆ ವ್ಯಾಪಾರಿ ರಫೀಕ್ ಅವರು ಇದೀಗ ಒಂದು ವಾರದಿಂದ ನಾಪತ್ತೆಯಾಗಿದ್ದು ಗ್ರಾಹಕರ ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಊರಿನಲ್ಲಿ ವಿಚಾರಿಸಿದಾಗ ರಮಾನಂದ ಭಟ್‌, ಗೋವಿಂದ, ದಿನೇಶ್‌ ಕಿಣಾಜೆ, ನಾರಾಯಣ ಮೈಂದಕೋಡಿ, ಪೂವಪ್ಪ ಗೌಡ ಉಮಿಯಾ, ಲಿಂಗಪ್ಪ ಗೌಡ ಕಜೆ, ನಾಣ್ಯಪ್ಪ ಗೌಡ ಡೆಂಬುಗ, ಲಿಂಗಪ್ಪ ಗೌಡ ಉಮಿಯಾ, ಕುಶಾಲಪ್ಪ ಗೌಡ ಬಂದಾರು,ಧನಂಜಯ ಉಗ್ರೋಡಿ ಹಾಗೂ ಇನ್ನು ಕೆಲವರಿಂದ ಕೂಡಾ ಅಡಿಕೆ ಖರೀದಿಸಿ ಹಣ ನೀಡದೇ ಮೋಸ ಮಾಡಿರುತ್ತಾರೆ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಧರ್ಮಸ್ಥಳ ಪೋಲೀಸ್ ಠಾಣೆಯಲ್ಲಿ ಡಾಕಯ್ಯ ಗೌಡ ಕೊಯ್ಯೂರುರವರು ನೀಡಿದ ದೂರಿನ ಅನ್ವಯ ಅಡಿಕೆ ವ್ಯಾಪಾರಿ ಬಿ.ಎಮ್‌ ರಫೀಕ್‌ ಹಾಗೂ ಆತನ ಮಗನಾದ ರಮೀಜಾ ವಿರುದ್ಧ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗಾಗಿ ಪೋಲೀಸರು ಬಲೆ ಬೀಸಿದ್ದಾರೆ.

Spread the love
  • Related Posts

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಟೆಂಡರ್ ಕೂಪದ ಭ್ರಷ್ಟಾಚಾರವನ್ನು ಖಂಡಿಸಲು…

    Spread the love

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ ಕಾನರ್ಪ ಕಡಿರುದ್ಯಾವರ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿ ಸಭೆಯನ್ನು ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಪಣಿಕಲ್ ಹಾಗೂ…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 330 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 301 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 201 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 301 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 159 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 90 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ