![](https://kalanirnayanews.com/wp-content/uploads/2020/05/IMG_20200505_103218.jpg)
ಮಂಗಳೂರು: ಇಂದು ಬೆಳ್ಳಂ ಬೆಳಗ್ಗೆ ಮಂಗಳೂರು ನಗರದ ಮುಖ್ಯ ರಸ್ತೆಯಲ್ಲೇ ತಿರುಗಾಡುತ್ತಿದ್ದ ಕಾಡುಕೋಣವನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
![](https://kalanirnayanews.com/wp-content/uploads/2020/05/Screenshot_2020_0505_132033-1024x471.png)
ವಿಶಾಲ್ ನರ್ಸಿಂಗ್ ಹೋಂ, ಗುಜರಾತಿ ಶಾಲೆ ಬಳಿ ಪ್ರತ್ಯಕ್ಷವಾಗಿದ್ದ ಕಾಡುಕೋಣ ಬಳಿಕ ಪಬ್ಬಾಸ್, ಬಿಜೈ ರೋಡಿನಲ್ಲಿ ಓಡಾಡ್ತ ಇತ್ತು. ಅರಣ್ಯ ಅಧಿಕಾರಿಗಳು, ಪೊಲೀಸರು ಬೆಳಗ್ಗಿನಿಂದಲೇ ಕಾಡುಕೋಣವನ್ನ ಹಿಡಿಯಲು ಪ್ರಯತ್ನಿಸುತ್ತಿದ್ರು. ಅಲ್ಲದೆ ನಗರದ ಜನತೆ ಕೂಡ ಕಾಡುಕೋಣವನ್ನ ಕಂಡು ಭಯಭೀತರಾಗಿದ್ರು.
![](https://kalanirnayanews.com/wp-content/uploads/2020/05/1588663223516-768x1024.jpg)
ಕೊನೆಗೆ ವೇರ್ ಹೌಸ್ ರೋಡ್ ನ ತೃಪ್ತಿ ಅಪಾರ್ಟ್ ಮೆಂಟ್ ಬಳಿ ಕಾಡುಕೋಣವನ್ನ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಾಡುಕೋಣವನ್ನು ಪಿಲಿಕುಳಕ್ಕೆ ರವಾನಿಸಲಾಗಿದೆ.
![](https://kalanirnayanews.com/wp-content/uploads/2020/05/1588663218521-768x1024.jpg)