![](https://kalanirnayanews.com/wp-content/uploads/2020/06/anti-corruption-bureau-300x217-1.gif)
ಬೆಳ್ತಂಗಡಿ: ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರು ಸಲ್ಲಿಕೆಯ ಹಿನ್ನೆಲೆಯಲ್ಲಿ ಕಲ್ಮಂಜ ಗ್ರಾಮ ಪಂಚಾಯತ್ ಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬಸವ ವಸತಿ ಯೋಜನೆ ಹಾಗೂ 94ಸಿ ಯಲ್ಲಿ ಅಕ್ರಮ ನಡೆದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
![](https://kalanirnayanews.com/wp-content/uploads/2020/06/IMG-20200622-WA0033-746x1024.jpg)
ACB ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ನೇತ್ರತ್ವದಲ್ಲಿ ದಾಳಿ ನಡೆಸಿದ್ದು ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.
![](https://kalanirnayanews.com/wp-content/uploads/2020/06/IMG-20200622-WA0023-1024x477.jpg)
ಒಂದೇ ಕುಟುಂಬದ ಮೂವರಿಗೆ ಬಸವ ವಸತಿ ಯೋಜನೆ ಹಾಗೂ 94.ಸಿ ಯಲ್ಲಿ ಸರಕಾರದ ಯೋಜನೆಯಲ್ಲಿ ಮನೆಗಳನ್ನು ಪಡೆದಿರುವ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಯುತ್ತಿದೆ.
ಎಸಿಬಿಯ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್.ಬಿ.ಸಿ, ಹೆಡ್ ಕಾನ್ಸ್ಟೇಬಲ್ ಹರಿಪ್ರಸಾದ್, ಪ್ರಶಾಂತ್ ಪಾಲ್ಗೊಂಡಿದ್ದರು.
ಹೆಚ್ಚಿನ ಮಾಹಿತಿ ನಿರೀಕ್ಷಿಸಿಸಲಾಗುತ್ತಿದೆ.