ನಿಮಗೆ ಆಕರ್ಷಕ ಸ್ಮರಣಿಕೆಯನ್ನು ಹುಡುಕುವ ಹಂಬಲವೇ ಹಾಗಾದ್ರೆ ನವರಂಗ ಸ್ಮರಣಿಕಾಕ್ಕೆ ಭೇಟಿ ನೀಡಿ

ನಿಮ್ಮಲ್ಲಿ ಯಾವುದೇ ಸಭೆ ಸಮಾರಂಭಗಳಿಗೆ ಬಂದ ಅತಿಥಿಗಳಿಗೆ ನೆನಪಲ್ಲಿ ಉಳಿಯಲು ಒಂದು ಸ್ಮರಣಿಕೆ ಬೇಕಾಗಿದೆ ಎಂದಿಟ್ಟುಕೊಳ್ಳಿ . ನಾವು ಕೊಡುವ ಸ್ಮರಣಿಕೆ ನಮ್ಮ ಕಲ್ಪನೆಯಂತೆ ಇರಬೇಕೆಂಬ ಅಪೇಕ್ಷೆ ಪಟ್ಟರೆ ಖಂಡಿತವಾಗಿ ನೀವು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಸಮೀಪ ತಲೆಯೆತ್ತಿ ನಿಂತಿರುವ ನವರಂಗ್ ಸ್ಮರಣಿಕೆಗಳ ಮಳಿಗೆಗೆ ಭೇಟಿ ನೀಡಬಹುದಾಗಿದೆ.

ವಿಸ್ತಾರವಾದ ಮಳಿಗೆ, ನಗುಮೊಗದಿಂದ ಸ್ವಾಗತಿಸುವ ಶ್ರಮಿಕರು, ಒಳಹೋಗುತ್ತಿದ್ದಂತೆ ಕಣ್ಮಣ ತಣಿಸುವ ಚಿತ್ರ
ವೈಚಿತ್ರಗಳಿಂದ ಕೂಡಿದ ಸ್ಮರಣಿಕೆಗಳ ಬೃಹತ್ ಸಂಗ್ರಹ. ಅದರಲ್ಲೊಂದು ಆಯ್ಕೆ ಮಾಡಿ ಮುಂದಡಿ ಇಟ್ಟಾಗ ಸದಾ ಹಸನ್ಮುಖದಿಂದ ಬರಮಾಡಿಕೊಳ್ಳುವ ಮಲ್ಯರು. ಹೌದು ನವರಂಗ್ ಎಂಬ ಬಿ.ಸಿ ರೋಡಿನ ಅದ್ಭುತ ಸ್ಮರಣಿಕೆಗಳ ಅಗಾಧ ಆಯ್ಕೆ ಮಳಿಗೆಯ ಕೇಂದ್ರ ಶಕ್ತಿ ಮಲ್ಯರು .ಸದಾ ಹಸನ್ಮುಖಿ, ಯಾರು ಬಂದರೂ ಸತ್ಕರಿಸಿ ಕೂರಿಸಿ ಮಾತನಾಡುವ ಔದಾರ್ಯ . ಎಲ್ಲವನ್ನೂ ನಗುತ್ತ ವಿವರಿಸುವ ಜಾದುಗಾರ. ನಿಮ್ಮ ಆಯ್ಕೆಯಲ್ಲದೆ ನಿಮ್ಮ ಮನದಲ್ಲಿರುವ ಕಲ್ಪನೆಗಳಿಗೂ ಬಣ್ಣ ಹಚ್ಚಿ ಸ್ಮರಣಿಕೆ ತಯಾರಿಸುವ ಮಾಂತ್ರಿಕ ಅವರು. ಕೇವಲ ವ್ಯಾಪಾರ ದೃಷ್ಟಿ ಮಾತ್ರವಲ್ಲದೆ, ಮಾನವೀಯತೆ , ಸಮಾಜಮುಖಿ , ಸಾಧನಶೀಲ ವ್ಯಕ್ತಿತ್ವ ಅವರದ್ದು . ಪ್ರಕೃತಿ ಪ್ರಿಯರಾದ ಮಲ್ಯರು ಪ್ರತಿ ಭಾನುವಾರ ಒಂದಿಲ್ಲೊಂದು ಪ್ರಕೃತಿ ಶಿಬಿರಗಳಿಗೆ ಭೇಟಿ ನೀಡುತ್ತಾರೆ. ಅಷ್ಟೇ ಅಲ್ಲದೆ ತುಳುನಾಡಿನ ಹಣ್ಣುಗಳ ರಾಜ ಹಲಸಿನ ಬಗ್ಗೆ ವಿಶೇಷ ವ್ಯಾಮೋಹ ಹೊಂದಿರುವ ಇವರು ಬಂಟ್ವಾಳದಲ್ಲಿ ಹಲಸು ಮೇಳವನ್ನು ಸಂಯೋಜಿಸಿದವರಲ್ಲಿ ಓರ್ವರು . ಆಸ್ಟ್ರೇಲಿಯಾದ ಖ್ಯಾತ ಹಣ್ಣು ತಜ್ಞ ಕೆನ್ ಲವ್ ಜೊತೆಗೆ ಸಂಪರ್ಕವಿರುವ ಮಲ್ಯರು ಶ್ರೀ ಪಡ್ರೆಯವರ ನಿಕಟವರ್ತಿಗಳು.


ಬಡತನದೊಂದಿಗೆ ಬಂಟ್ವಾಳದಲ್ಲಿ ಜನಿಸಿದ ಮೌನೇಶ್ ಮಲ್ಯರು, ಎಸ್ವಿಎಸ್ ಪ್ರೌಢ ಶಾಲೆ ಮತ್ತು ಕಾಲೇಜು ಬಂಟ್ವಾಳದಲಿೢ ಕಾಲೇಜು ಶಿಕ್ಷಣ ಮುಗಿಸಿ ಮುಂದೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದರು. ಶಿಕ್ಷಣದ ನಂತರ ನಾಲ್ಕು ವರ್ಷಗಳ ಕಾಲ ವ್ಯಂಗ್ಯಚಿತ್ರಕಾರರಾಗಿ 2000 ಕ್ಕಿಂತಲೂ ಅಧಿಕ ವ್ಯಂಗ್ಯಚಿತ್ರಗಳನ್ನು ನಾಡಿನ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಕರ್ಮವೀರ, ಮಂಗಳ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡು ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದವರು .ನಂತರದ ದಿನಗಳಲ್ಲಿ ಮಲ್ಯರು ನಾಟಕ ರಂಗದ ಮೇಕಪ್ ಕಲಾವಿದರಾಗಿ ಸುಮಾರು ವರ್ಷ ರಂಗಭೂಮಿಯಲ್ಲಿ ದುಡಿದು, ನಂತರ ಸಣ್ಣ ಮಟ್ಟದಲ್ಲಿ ಬಿಸಿ ರೋಡಿನಲ್ಲಿ ನವರಂಗ್ ಎಂಬ ಸ್ಮರಣಿಕೆಗಳ ಮಳಿಗೆಯನ್ನು ಆರಂಭಿಸಿದರು. ಈಗಿದು ಸ್ಮರಣಿಕೆಗಳ ತಯಾರಿಯ ಲೋಕದಲ್ಲಿ ನವರಂಗ್ ಒಂದು ದೊಡ್ಡ ಹೆಸರು. ದಕ್ಷಿಣ ಕನ್ನಡ, ಉಡುಪಿ , ಕಾಸರಗೋಡು, ಹಾಸನ, ಚಿಕ್ಕಮಗಳೂರು ಅಲ್ಲದೆ ಮುಂಬಯಿ , ಅಬುಧಾಬಿಯಲ್ಲಿ ತನ್ನ ನವರಂಗಿನ ಸ್ಮರಣಿಕೆಗಳ ಘಮಲವನ್ನು ಹಂಚಿದ್ದಾರೆ .ಏನೇ ಆಗಲಿ ಮೌನೇಶ್ ಮಲ್ಯರ ನೆನಪಿನ ಕಾಣಿಕೆಗಳು ನೂರಾರು ವರ್ಷ ನೆನಪಿನಲ್ಲಿ ಉಳಿಯುವಂತಾಗಲಿ.. ನಿಮಗೇನಾದರೂ ಬಿಡುವಿದ್ದರೆ ಸ್ಮರಣಿಕೆಗಳು ಬೇಕೆನಿಸಿದರೆ ದಯವಿಟ್ಟು ಬಿಸಿರೋಡಿನಿಂದ ಮುಂದೆ ಪಾಣೆಮಂಗಳೂರು ಸಮೀಪವಿರುವ ನವರಂಗ ಸ್ಮರಣಿಕಾಕ್ಕೆ ತಪ್ಪದೆ ಭೇಟಿ ನೀಡಿ ..
ಶುಭ ಹಾರೈಕೆಯೊಂದಿಗೆ,

ಬರಹ: 🖊️ ಹರೀಶ್ ಮಂಜೊಟ್ಟಿ, ಪೆರಾಜೆ, ಬಂಟ್ವಾಳ.

Spread the love
  • Related Posts

    ಬೆಳ್ತಂಗಡಿ ದೈಹಿಕ ಶಿಕ್ಷಕ, ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ, ಅಖಿಲ್ ಕುಮಾರ್ ವಿಧಿವಶ

    ಬೆಳ್ತಂಗಡಿ: ಬೆಳ್ತಂಗಡಿ ಪಿ.ಎಂ.ಶ್ರೀ ಮಾದರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ, ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ, ಅಖಿಲ್ ಕುಮಾರ್ (50ವ) ಅವರು ಅಲ್ಪಕಾಲದ ಅಸೌಖ್ಯದಿಂದ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಜೂ 12ರಂದು ನಿಧನರಾದರು. ಒರ್ವ ಅದ್ಭುತ ಕಬಡ್ಡಿ ತೀರ್ಪುಗಾರರಾಗಿ, ತರಬೇತುದಾರರಾಗಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ…

    Spread the love

    ಮುಖ್ಯಮಂತ್ರಿ ಡಿಕೆಶಿ ಯವರಿಂದ ಪ್ರಧಾನಮಂತ್ರಿ ಭೇಟಿ, ರಾಜ್ಯದ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚೆ

    ನವದೆಹಲಿ: ನವದಹೆಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ…

    Spread the love

    You Missed

    ಬೆಳ್ತಂಗಡಿ ದೈಹಿಕ ಶಿಕ್ಷಕ, ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ, ಅಖಿಲ್ ಕುಮಾರ್ ವಿಧಿವಶ

    • By admin
    • June 12, 2026
    • 70 views
    ಬೆಳ್ತಂಗಡಿ ದೈಹಿಕ ಶಿಕ್ಷಕ, ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ,  ಅಖಿಲ್ ಕುಮಾರ್ ವಿಧಿವಶ

    ಮುಖ್ಯಮಂತ್ರಿ ಡಿಕೆಶಿ ಯವರಿಂದ ಪ್ರಧಾನಮಂತ್ರಿ ಭೇಟಿ, ರಾಜ್ಯದ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚೆ

    • By admin
    • June 11, 2026
    • 33 views
    ಮುಖ್ಯಮಂತ್ರಿ ಡಿಕೆಶಿ ಯವರಿಂದ ಪ್ರಧಾನಮಂತ್ರಿ ಭೇಟಿ, ರಾಜ್ಯದ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚೆ

    ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷ – ಪ್ರವಾಸಿಗರು ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ ಸೂಚನೆ

    • By admin
    • June 10, 2026
    • 50 views
    ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷ – ಪ್ರವಾಸಿಗರು ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ ಸೂಚನೆ

    ಉಜಿರೆ – ಗುರಿಪಳ್ಳ ಸಂಪರ್ಕ ರಸ್ತೆ ಅಂಬಡೆಬೆಟ್ಟುವಿನಲ್ಲಿ ತಾತ್ಕಾಲಿಕ ರಸ್ತೆ ಸಂಪೂರ್ಣ ಕುಸಿತ ಸಂಚಾರ ಬಂದ್ ಜನಜೀವನ ಅಸ್ತವ್ಯಸ್ತ

    • By admin
    • June 9, 2026
    • 99 views
    ಉಜಿರೆ – ಗುರಿಪಳ್ಳ ಸಂಪರ್ಕ ರಸ್ತೆ ಅಂಬಡೆಬೆಟ್ಟುವಿನಲ್ಲಿ  ತಾತ್ಕಾಲಿಕ ರಸ್ತೆ ಸಂಪೂರ್ಣ ಕುಸಿತ ಸಂಚಾರ ಬಂದ್ ಜನಜೀವನ ಅಸ್ತವ್ಯಸ್ತ

    ಚಾರ್ಮಾಡಿ–ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ನಡುವೆ ಅಪಾಯಕಾರಿ ಮರಗಳ ಭೀತಿ: ನಿರ್ಲಕ್ಷ್ಯ ಮುಂದುವರಿದರೆ ಆಪತ್ತು ಕಟ್ಟಿಟ್ಟ ಬುತ್ತಿ

    • By admin
    • June 9, 2026
    • 43 views
    ಚಾರ್ಮಾಡಿ–ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ನಡುವೆ ಅಪಾಯಕಾರಿ ಮರಗಳ ಭೀತಿ: ನಿರ್ಲಕ್ಷ್ಯ ಮುಂದುವರಿದರೆ ಆಪತ್ತು ಕಟ್ಟಿಟ್ಟ ಬುತ್ತಿ

    “ಭಜನೆಯಿಂದ ಸಂಸ್ಕಾರ ವೃದ್ಧಿಯಾಗಿ, ಸಮಾಜಸೇವೆಯ ಮನೋಭಾವ ಬೆಳೆಯಲಿ; ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಲಿ” : ಶಾಸಕ ಹರೀಶ್ ಪೂಂಜಾ

    • By admin
    • June 7, 2026
    • 195 views