ನಿಮಗೆ ಆಕರ್ಷಕ ಸ್ಮರಣಿಕೆಯನ್ನು ಹುಡುಕುವ ಹಂಬಲವೇ ಹಾಗಾದ್ರೆ ನವರಂಗ ಸ್ಮರಣಿಕಾಕ್ಕೆ ಭೇಟಿ ನೀಡಿ

ನಿಮ್ಮಲ್ಲಿ ಯಾವುದೇ ಸಭೆ ಸಮಾರಂಭಗಳಿಗೆ ಬಂದ ಅತಿಥಿಗಳಿಗೆ ನೆನಪಲ್ಲಿ ಉಳಿಯಲು ಒಂದು ಸ್ಮರಣಿಕೆ ಬೇಕಾಗಿದೆ ಎಂದಿಟ್ಟುಕೊಳ್ಳಿ . ನಾವು ಕೊಡುವ ಸ್ಮರಣಿಕೆ ನಮ್ಮ ಕಲ್ಪನೆಯಂತೆ ಇರಬೇಕೆಂಬ ಅಪೇಕ್ಷೆ ಪಟ್ಟರೆ ಖಂಡಿತವಾಗಿ ನೀವು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಸಮೀಪ ತಲೆಯೆತ್ತಿ ನಿಂತಿರುವ ನವರಂಗ್ ಸ್ಮರಣಿಕೆಗಳ ಮಳಿಗೆಗೆ ಭೇಟಿ ನೀಡಬಹುದಾಗಿದೆ.

ವಿಸ್ತಾರವಾದ ಮಳಿಗೆ, ನಗುಮೊಗದಿಂದ ಸ್ವಾಗತಿಸುವ ಶ್ರಮಿಕರು, ಒಳಹೋಗುತ್ತಿದ್ದಂತೆ ಕಣ್ಮಣ ತಣಿಸುವ ಚಿತ್ರ
ವೈಚಿತ್ರಗಳಿಂದ ಕೂಡಿದ ಸ್ಮರಣಿಕೆಗಳ ಬೃಹತ್ ಸಂಗ್ರಹ. ಅದರಲ್ಲೊಂದು ಆಯ್ಕೆ ಮಾಡಿ ಮುಂದಡಿ ಇಟ್ಟಾಗ ಸದಾ ಹಸನ್ಮುಖದಿಂದ ಬರಮಾಡಿಕೊಳ್ಳುವ ಮಲ್ಯರು. ಹೌದು ನವರಂಗ್ ಎಂಬ ಬಿ.ಸಿ ರೋಡಿನ ಅದ್ಭುತ ಸ್ಮರಣಿಕೆಗಳ ಅಗಾಧ ಆಯ್ಕೆ ಮಳಿಗೆಯ ಕೇಂದ್ರ ಶಕ್ತಿ ಮಲ್ಯರು .ಸದಾ ಹಸನ್ಮುಖಿ, ಯಾರು ಬಂದರೂ ಸತ್ಕರಿಸಿ ಕೂರಿಸಿ ಮಾತನಾಡುವ ಔದಾರ್ಯ . ಎಲ್ಲವನ್ನೂ ನಗುತ್ತ ವಿವರಿಸುವ ಜಾದುಗಾರ. ನಿಮ್ಮ ಆಯ್ಕೆಯಲ್ಲದೆ ನಿಮ್ಮ ಮನದಲ್ಲಿರುವ ಕಲ್ಪನೆಗಳಿಗೂ ಬಣ್ಣ ಹಚ್ಚಿ ಸ್ಮರಣಿಕೆ ತಯಾರಿಸುವ ಮಾಂತ್ರಿಕ ಅವರು. ಕೇವಲ ವ್ಯಾಪಾರ ದೃಷ್ಟಿ ಮಾತ್ರವಲ್ಲದೆ, ಮಾನವೀಯತೆ , ಸಮಾಜಮುಖಿ , ಸಾಧನಶೀಲ ವ್ಯಕ್ತಿತ್ವ ಅವರದ್ದು . ಪ್ರಕೃತಿ ಪ್ರಿಯರಾದ ಮಲ್ಯರು ಪ್ರತಿ ಭಾನುವಾರ ಒಂದಿಲ್ಲೊಂದು ಪ್ರಕೃತಿ ಶಿಬಿರಗಳಿಗೆ ಭೇಟಿ ನೀಡುತ್ತಾರೆ. ಅಷ್ಟೇ ಅಲ್ಲದೆ ತುಳುನಾಡಿನ ಹಣ್ಣುಗಳ ರಾಜ ಹಲಸಿನ ಬಗ್ಗೆ ವಿಶೇಷ ವ್ಯಾಮೋಹ ಹೊಂದಿರುವ ಇವರು ಬಂಟ್ವಾಳದಲ್ಲಿ ಹಲಸು ಮೇಳವನ್ನು ಸಂಯೋಜಿಸಿದವರಲ್ಲಿ ಓರ್ವರು . ಆಸ್ಟ್ರೇಲಿಯಾದ ಖ್ಯಾತ ಹಣ್ಣು ತಜ್ಞ ಕೆನ್ ಲವ್ ಜೊತೆಗೆ ಸಂಪರ್ಕವಿರುವ ಮಲ್ಯರು ಶ್ರೀ ಪಡ್ರೆಯವರ ನಿಕಟವರ್ತಿಗಳು.


ಬಡತನದೊಂದಿಗೆ ಬಂಟ್ವಾಳದಲ್ಲಿ ಜನಿಸಿದ ಮೌನೇಶ್ ಮಲ್ಯರು, ಎಸ್ವಿಎಸ್ ಪ್ರೌಢ ಶಾಲೆ ಮತ್ತು ಕಾಲೇಜು ಬಂಟ್ವಾಳದಲಿೢ ಕಾಲೇಜು ಶಿಕ್ಷಣ ಮುಗಿಸಿ ಮುಂದೆ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದರು. ಶಿಕ್ಷಣದ ನಂತರ ನಾಲ್ಕು ವರ್ಷಗಳ ಕಾಲ ವ್ಯಂಗ್ಯಚಿತ್ರಕಾರರಾಗಿ 2000 ಕ್ಕಿಂತಲೂ ಅಧಿಕ ವ್ಯಂಗ್ಯಚಿತ್ರಗಳನ್ನು ನಾಡಿನ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಕರ್ಮವೀರ, ಮಂಗಳ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡು ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದವರು .ನಂತರದ ದಿನಗಳಲ್ಲಿ ಮಲ್ಯರು ನಾಟಕ ರಂಗದ ಮೇಕಪ್ ಕಲಾವಿದರಾಗಿ ಸುಮಾರು ವರ್ಷ ರಂಗಭೂಮಿಯಲ್ಲಿ ದುಡಿದು, ನಂತರ ಸಣ್ಣ ಮಟ್ಟದಲ್ಲಿ ಬಿಸಿ ರೋಡಿನಲ್ಲಿ ನವರಂಗ್ ಎಂಬ ಸ್ಮರಣಿಕೆಗಳ ಮಳಿಗೆಯನ್ನು ಆರಂಭಿಸಿದರು. ಈಗಿದು ಸ್ಮರಣಿಕೆಗಳ ತಯಾರಿಯ ಲೋಕದಲ್ಲಿ ನವರಂಗ್ ಒಂದು ದೊಡ್ಡ ಹೆಸರು. ದಕ್ಷಿಣ ಕನ್ನಡ, ಉಡುಪಿ , ಕಾಸರಗೋಡು, ಹಾಸನ, ಚಿಕ್ಕಮಗಳೂರು ಅಲ್ಲದೆ ಮುಂಬಯಿ , ಅಬುಧಾಬಿಯಲ್ಲಿ ತನ್ನ ನವರಂಗಿನ ಸ್ಮರಣಿಕೆಗಳ ಘಮಲವನ್ನು ಹಂಚಿದ್ದಾರೆ .ಏನೇ ಆಗಲಿ ಮೌನೇಶ್ ಮಲ್ಯರ ನೆನಪಿನ ಕಾಣಿಕೆಗಳು ನೂರಾರು ವರ್ಷ ನೆನಪಿನಲ್ಲಿ ಉಳಿಯುವಂತಾಗಲಿ.. ನಿಮಗೇನಾದರೂ ಬಿಡುವಿದ್ದರೆ ಸ್ಮರಣಿಕೆಗಳು ಬೇಕೆನಿಸಿದರೆ ದಯವಿಟ್ಟು ಬಿಸಿರೋಡಿನಿಂದ ಮುಂದೆ ಪಾಣೆಮಂಗಳೂರು ಸಮೀಪವಿರುವ ನವರಂಗ ಸ್ಮರಣಿಕಾಕ್ಕೆ ತಪ್ಪದೆ ಭೇಟಿ ನೀಡಿ ..
ಶುಭ ಹಾರೈಕೆಯೊಂದಿಗೆ,

ಬರಹ: 🖊️ ಹರೀಶ್ ಮಂಜೊಟ್ಟಿ, ಪೆರಾಜೆ, ಬಂಟ್ವಾಳ.

Spread the love
  • Related Posts

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಟೆಂಡರ್ ಕೂಪದ ಭ್ರಷ್ಟಾಚಾರವನ್ನು ಖಂಡಿಸಲು…

    Spread the love

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ ಕಾನರ್ಪ ಕಡಿರುದ್ಯಾವರ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿ ಸಭೆಯನ್ನು ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಪಣಿಕಲ್ ಹಾಗೂ…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 8 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 269 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 186 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 291 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 154 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 85 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ