ಇತಿಹಾಸದ ಬೆಳಕು ಚೆಲ್ಲುವ ದಾಸಗದ್ದೆ ಶಿಲಾ ಶಾಸನ ದೊರೆತ ಪರಿಸರದಲ್ಲಿ ಪ್ರಾಚೀನ ಎರಡು ಲಿಂಗಮುದ್ರೆ ಕಲ್ಲು ಮತ್ತು ಒಂದು ಪ್ರಾಚೀನ ಅರಸೊತ್ತಿಗೆ ಕಾಲದ ಗ್ರಾಮದ ಗಡಿಕಲ್ಲು ಪತ್ತೆ!

ಮಾಣಿ ಗ್ರಾಮದ ಇತಿಹಾಸದ ಬೆಳಕು ಚೆಲ್ಲುವ ದಾಸಗದ್ದೆ ಶಿಲಾ ಶಾಸನ ದೊರೆತ ಪರಿಸರದಲ್ಲಿ ಪ್ರಾಚೀನ ಎರಡು ಲಿಂಗಮುದ್ರೆ ಕಲ್ಲು ಮತ್ತು ಒಂದು ಪ್ರಾಚೀನ ಅರಸೊತ್ತಿಗೆ ಕಾಲದ ಗ್ರಾಮದ ಗಡಿಕಲ್ಲು ಪತ್ತೆಯಾಗಿದೆ.

ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಇತಿಹಾಸದ ಬೆಳಕನ್ನು ಚೆಲ್ಲುವ ವೀರಕಂಭ ದಾಸಗದ್ದೆ ಶಿಲಾ ಶಾಸನ ಇರುವ ಪರಿಸರದಲ್ಲಿ ಅರೆಬೆಟ್ಟು- ಪದವು ಮತ್ತು ತೆಕ್ಕಿಯಾಪು ಗಡಿ ಯಲ್ಲಿ ಎರಡು ಲಿಂಗ ಮುದ್ರೆಯ ಕಲ್ಲುಗಳು ಹಾಗೂ ಮಾಣಿ ,ಅನಂತಾಡಿ, ವೀರಕಂಭ ಸಂದಿಸುವ ವಾಮನಮೇರ್ ಪಡ್ಪು ಎಂಬಲ್ಲಿ ಅರಸೊತ್ತಿಗೆ ಕಾಲದ ಪ್ರಾಚೀನ ಗಡಿಕಲ್ಲು ಲಭ್ಯ ವಾಗಿದೆ.

ಮಾಣಿ ಗ್ರಾಮದ ಇತಿಹಾಸ ಮೇಲೆ ಬೆಳಕು ಚೆಲ್ಲುವ ಮಾಣಿ -ಕಂಬಳ ಶಾಸನ 1969ನೇ ಇಸವಿಯ ಆಸುಪಾಸಿನಲ್ಲಿ ಹಾಸನ- ಮಂಗಳೂರು ರೈಲು ಮಾರ್ಗ ನಿರ್ಮಾಣ ದ ವೇಳೆ ಮಣ್ಣಿನಲ್ಲಿ ಸೇರಿರುವ ಕಾರಣ. ದಾಸಗದ್ದೆಯ ಶಾಸನ ಮಾಣಿ ಕಂಬಳ ಶಾಸನ ಸಮಕಾಲೀನ ವಾಗಿರುವ ಸಾದ್ಯತೆ ಇರುವುದರಿಂದ ಸದ್ಯ ಲಭ್ಯವಿರುವ ಈ ಒಂದು ಶಾಸನ ಮಾಣಿ ಗ್ರಾಮದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಏಕೈಕ ಐತಿಹಾಸಿಕ ಮಹತ್ವದ ಶಾಸನ ಆಗಿದೆ.ಅದರ ನೇರವಾಗಿ ಅರಬೆಟ್ಟು ಪದವು ಮತ್ತು ತೆಕ್ಕಿಯಾಪು ಗಡಿಯಲ್ಲಿ ಲಿಂಗಮುದ್ರೆಯ ಕಲ್ಲು ಲಭ್ಯ ವಾಗಿದೆ.ಲಿಂಗಮುದ್ರೆಯ ಕಲ್ಲು ಪ್ರಾಚೀನ ಅರಸರ ಕಾಲದಲ್ಲಿ ಗ್ರಾಮದ ಸೀಮಾ ಬಂದಿ ಕಲ್ಲು ಆಗಿದ್ದು. ಇವುಗಳನ್ನು ಪ್ರಾಚೀನ ಕಾಲದಲ್ಲಿ ದೇವರ ಹೆಸರಿನಲ್ಲಿ ಉಂಬಳಿ ಬಿಟ್ಟ ಭೂಮಿ ಮತ್ತು ಗ್ರಾಮದ ವ್ಯಾಪ್ತಿ ಪ್ರದೇಶ ಗುರುತಿಸಲ್ಪಡುವ ಉದ್ದೇಶದಿಂದ ಸ್ತಾಪಿಸಲ್ಪಡುತ್ತಿದ್ದರು ಎನ್ನಲಾಗಿದೆ. ಸಾದಾರಣ ಎತ್ತರದ ಗಾತ್ರದ ಶಿಲೆಯ ಮದ್ಯದಲ್ಲಿ ಶಿವಲಿಂಗ ಹಾಗೂ ಅಕ್ಕ ಪಕ್ಕ ಸೂರ್ಯ ಚಂದ್ರರ ಕೆತ್ತನೆ ಇದೆ.


ಮಾಣಿ – ವೀರಕಂಭ- ಅನಂತಾಡಿ ಮೂರು ಗ್ರಾಮಗಳು ಸಂದಿಸುವ ವಾಮನಮೇರ್ ಪದವು ಎಂಬಲ್ಲಿ ಪ್ರಾಚೀನ ಅರಸೊತ್ತಿಗೆ ಕಾಲದ ಗ್ರಾಮದ ಗಡಿ ಬಾಂದು ಕಲ್ಲು ಲಭ್ಯ ವಾಗಿರುತ್ತವೆ. ಇನ್ನು ಹುಡುಕಾಡಿದರೆ ಇನ್ನೂ ಲಿಂಗ ಮುದ್ರೆಯ ಕಲ್ಲುಗಳು,ಗಡಿ ಕಲ್ಲು ಸಿಗುವ ಸಾದ್ಯತೆ ಇದೆ ಎಂದು ಸ್ತಳೀಯರು ಅಭಿಪ್ರಾಯ ಪಟ್ಟಿದ್ದಾರೆ.ಒಟ್ಟಾರೆ ಈ ಬಗ್ಗೆ ಅದ್ಯಯನ ನಡೆಸಿದರೆ ಸ್ತಳೀಯ ಇತಿಹಾಸದ ಬಗ್ಗೆ ಕುತೂಹಲಕಾರಿ ಸಂಗತಿಗಳು ಅನಾವರಣ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 313 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 59 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 335 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 61 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 122 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 58 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ