ಬಳಂಜ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರಾಗಿ ಶಿಕ್ಷಣ ಪ್ರೇಮಿ ಮನೋಹರ್ ಬಳಂಜ ಪುನರಾಯ್ಕೆ


ಬೆಳ್ತಂಗಡಿ: ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಬಳಂಜ ಶಿಕ್ಷಣ ಟ್ರಸ್ಟ್ ರಿ. ಬಳಂಜ ಇದರ ಅಧ್ಯಕ್ಷರಾಗಿ ಪತ್ರಕರ್ತ ಮನೋಹರ್ ಬಳಂಜ ಪುನರಾಯ್ಕೆಗೊಂಡಿದ್ದಾರೆ.
ಟ್ರಸ್ಟ್‌ನ ಸಭೆಯು ಟ್ರಸ್ಟ್‌ನ ಅಧ್ಯಕ್ಷ ಮನೋಹರ್ ಬಳಂಜ ಅವರ ಅಧ್ಯಕ್ಷತೆಯಲ್ಲಿ ಸ.ಉನ್ನತೀಕರಿಸಿದ ಪ್ರಾಥಮಿಕ, ಪ್ರೌಢ ಶಾಲೆ ಬಳಂಜದಲ್ಲಿ ನಡೆಯಿತು. ಟ್ರಸ್ಟ್‌ನ .
ಟ್ರಸ್ಟ್ ನ 2 ವರ್ಷದ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮನೋಹರ್ ಬಳಂಜ, ಉಪಾಧ್ಯಕ್ಷರಾಗಿ ವಿನು ಬಳಂಜ, ಕಾರ್ಯದರ್ಶಿಯಾಗಿ ರತ್ನರಾಜ ಜೈನ್ ಪೇರಂದಬೈಲು, ಕಾನೂನು ಸಲಹೆಗಾರರಾಗಿ ಸತೀಶ್ ರೈ ಬಾರ್ದಡ್ಕ, ಟ್ರಸ್ಟಿಗಳಾಗಿ ಪ್ರಮೋದ್ ಜೈನ್, ಸಂತೋಷ್ ಕುಮಾರ್ ಕಾಪಿನಡ್ಕ, ಪ್ರಶಾಂತ್ ಡಿ. ಬಳಂಜ, ರಾಕೇಶ್ ಹೆಗ್ಡೆ, ಚಂದ್ರಶೇಖರ ಪಿ.ಕೆ., ಪ್ರವೀಣ್ ಹೆಚ್.ಎಸ್., ಅನಂತರಾಮ್ ಹೊಳ್ಳ, ಸತೀಶ್ ಕೆ. ಮತ್ತು ಅಹ್ವಾನಿತ ಟ್ರಷ್ಟ್ ಗಳಾಗಿ ಉಮಾಮಹೇಶ್ವರ ಯುವಕ ಮಂಡಲದ ಅದ್ಯಕ್ಷರ ನ್ನು, ಜ್ಯೋತಿ ಮಹಿಳಾ ಮಂಡಲದ ಅದ್ಯಕ್ಷರನ್ನು, ಬಳಂಜ ಶಾಲಾ ಹಳೆವಿದ್ಯಾರ್ಥಿ ಸಂಘದ ಅದ್ಯಕ್ಷರನ್ನು ಟ್ರಸ್ಟಿಗಳಾಗಿ ಆಯ್ಕೆಮಾಡಲಾಯಿತು.
ಟ್ರಸ್ಟ್ ವತಿಯಿಂದ ದಾನಿಗಳ ಸಹಕಾರದಿಂದ, ಸತ್ಕಾರ್ಯ ಸ್ನೇಹಿತ ಬಳಗದ ನೆರವುಹಾಗೂ ಬಳಂಜ‌ಶಾಲಾ ಶಿಕ್ಷಣ ಪ್ರೇಮಿಗಳು ಹುಟ್ಟು ಹಬ್ಬ ಆಚರಣೆ, ಮನೆಯ ಶುಭಕಾರ್ಯ ಪ್ರಯುಕ್ತ ಶಿಕ್ಷಣ ನೆರವು ನೀಡುತ್ತಿರುವ ಕಾರಣ ಅನೇಕ ಅಭಿವೃದ್ದಿ ಕಾರ್ಯಕ್ರಮ ಮಾಡಲು ಸಹಕಾರಿಯಾಗಿದ್ದು ಈ ಬಗ್ಗೆ ಚರ್ಚಿಸಲಾಯಿತು. ಶಾಲೆಗೆ ರೋಟರಿ ಕ್ಲಬ್ ವತಿಯಿಂದ 14,00,000 ರೂ ವೆಚ್ಚದ ಸೋಲಾರ್ ಅಳವಡಿಕೆ, ರಂಗ ಮಂದಿರ ಅಭಿವೃದ್ಧಿ ಇನ್ನಿತರ ಕೆಲಸಗಳು, ಶಾಲೆಗೆ 250 ಚೇಯರ್ ಹಸ್ತಾಂತರ, 2 ವರ್ಷದಲ್ಲಿ 4 ಗೌರವ ಶಿಕ್ಷಕಿಯರ ನೇಮಕಾತಿ ಮಾಡಿ ವೇತನ ನೀಡಿರುವುದು, ಶಾಸಕರ ನಿಧಿಯಿಂದ 05 ಲಕ್ಷ ರೂ ವೆಚ್ಚದಲ್ಲಿ ಮಕ್ಕಳ ತಂಗುದಾಣ ನಿರ್ಮಾಣ, ಪ್ರಾಥಮಿಕ ಹಂತದ ತಾಲೂಕು ಮಟ್ಟದ ಕ್ರೀಡೋತ್ಸವ, ಸುಮಾರು 50 ಮಕ್ಕಳಿಗೆ ಉಚಿತ ಎಲ್.ಕೆ.ಜಿ, ಯು.ಕೆ.ಜಿ. ಶಿಕ್ಷಣ, ಧ.ಗ್ರಾ ಯೋಜನೆ ನೆರವಿನಿಂದ 6 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಂಗಣ ಅಗಲೀಕರಣ, 5 ಲಕ್ಷ ರೂ. ವೆಚ್ಚದಲ್ಲಿ ವಿಧಾನಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್ ರವರ ಅನುದಾನದಲ್ಲಿ ಕೊಠಡಿ ನವೀಕರಣ, 03 ಲಕ್ಷ ರೂ. ವೆಚ್ಚದಲ್ಲಿ ತಾ.ಪಂ. ಅನುದಾನದೊಂದಿಗೆ ಕೊಠಡಿ ನವೀಕರಣ, ಶ್ರೀ ಧ.ಮಂ. ಶಿಕ್ಷಣ ಸಂಸ್ಥೆ ಉಜಿರೆ ಇವರ ಸಹಕಾರದೊಂದಿಗೆ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್, 1.20 ಲಕ್ಷ ವೆಚ್ಚದಲ್ಲಿ ಶೀಟ್ ಅಳವಡಿಕೆ, ತರಬೇತಿ ಕಾರ್ಯಾಗಾರ, ಇನ್ನಿತರ ಅನೇಕ ‌ ಶೈಕ್ಷಣಿಕ ‌ ಚಟುವಟಿಕೆ ಮಾಡಿದ ಬಗ್ಗೆ ಸಭೆಯಲ್ಲಿ ಸಂತಸ ವ್ಯಕ್ತಪಡಿಸಲಾಯಿತು. ಇದಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಮುಂದಿನ ದಿನಗಳಲ್ಲಿ ಮಂಗಳೂರು ಮೆಸ್ಕಾ ವಿಭಾಗದ ಅಧ್ಯಕ್ಷರಾದ ಕೆ.ಹರೀಶ್‌ ಕುಮಾರ್ ರವರ ಸಹಕಾರದೊಂದಿಗೆ 15 ಲಕ್ಷ ರೂ. ವೆಚ್ಚದಲ್ಲಿ ಕಂಪ್ಯೂಟರ್ ಕೊಠಡಿ ನಿರ್ಮಾಣ, ಶಾಸಕ ಹರೀಶ್ ಪೂಂಜ ರವರ ಅನುದಾನದೊಂದಿಗೆ ರಂಗ ಮಂದಿರ ನಿರ್ಮಾಣ, ಉದ್ಯಮಿ ಶೇಖರ ದೇವಾಡಿಗ ಸಹಕಾರದೊಂದಿಗೆ ಚಿನ್ನರ ಅಂಗಣ ನಿರ್ಮಾಣ, ಮಕ್ಕಳಿಗೆ ಅನಕೂಲಕ್ಕಾಗಿ ವಾಹನ ವ್ಯವಸ್ಥೆ, ಮುಂದೆಯೂ ಉಚಿತ ಅಂಗ್ಲ ಮಾಧ್ಯಮ ಶಿಕ್ಷಣ, ಉಚಿತ ಕಂಪ್ಯೂಟ‌ರ್ ‌ ಶಿಕ್ಷಣ, ತರಗತಿ ಕೊಠಡಿಗಳಿಗೆ ಸಿ.ಸಿ.ಕ್ಯಾಮರಾ ಅಳವಡಿಕೆ, ಶಾಲೆಗೆ ಅಗತ್ಯವಾದ ಶೌಚಾಲಯ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಯಿತು. ಉಪಾಧ್ಯಕ್ಷ ವಿನು ಬಳಂಜ ವಂದಿಸಿದರು.

Spread the love
  • Related Posts

    ಮನೆ ಕುಸಿದು ಮೂವರ ದುರ್ಮರಣ ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ನಡೆದ ದುರ್ಘಟನೆ

    ಮಂಗಳೂರು: ನಗರದ ಕಂಕನಾಡಿ ಸಮೀಪದ ನಾಗುರಿಯಲ್ಲಿ ಬುಧವಾರ ಮುಂಜಾನೆ ಸುರಿದ ಭಾರೀ ಗಾಳಿ-ಮಳೆಗೆ ಮನೆಯೊಂದು ಕುಸಿದ ಪರಿಣಾಮ ಮಹಿಳೆಯೊಬ್ಬರು ಹಾಗೂ ಇಬ್ಬರು ಹೆಣ್ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಅವಘಡದ …

    Spread the love

    “ಮಲೆಯಡ್ಕ MCK ಹಾಟ್ ಮಿಕ್ಸ್ ಘಟಕಕ್ಕೆ ಅಧಿಕಾರಿಗಳ ಭೇಟಿ; ಸ್ಥಳೀಯರ ಅಹವಾಲು ಪರಿಶೀಲನೆ”

    ಬೆಳ್ತಂಗಡಿ: ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಯಡ್ಕ ಎಂಬಲ್ಲಿ ಜನವಸತಿ ಪ್ರದೇಶದಲ್ಲಿ ಮುಗ್ರೋಡಿ ಕನ್ಸ್ಟ್ರಕ್ಷನ್ (MCK)ಯ ಅನಧಿಕೃತ ಹಾಟ್ ಮಿಕ್ಸ್ ಮತ್ತು ಕಾಂಕ್ರೀಟ್ ಮಿಶ್ರಣ ಘಟಕ ನಡೆಯುತ್ತಿದೆ ಎಂದು ನವದೆಹಲಿಯ ರಾಷ್ಟ್ರೀಯ ಅನುಸೂಚಿತ ಪಂಗಡಗಳ ಆಯೋಗ, ದೂರು ಅರ್ಜಿ ಸಲ್ಲಿಕೆಯಾಗಿದ್ದು ಸದ್ರಿ…

    Spread the love

    You Missed

    ಮನೆ ಕುಸಿದು ಮೂವರ ದುರ್ಮರಣ ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ನಡೆದ ದುರ್ಘಟನೆ

    • By admin
    • July 1, 2026
    • 46 views
    ಮನೆ ಕುಸಿದು ಮೂವರ ದುರ್ಮರಣ ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ನಡೆದ ದುರ್ಘಟನೆ

    “ಮಲೆಯಡ್ಕ MCK ಹಾಟ್ ಮಿಕ್ಸ್ ಘಟಕಕ್ಕೆ ಅಧಿಕಾರಿಗಳ ಭೇಟಿ; ಸ್ಥಳೀಯರ ಅಹವಾಲು ಪರಿಶೀಲನೆ”

    • By admin
    • June 30, 2026
    • 42 views
    “ಮಲೆಯಡ್ಕ MCK ಹಾಟ್ ಮಿಕ್ಸ್ ಘಟಕಕ್ಕೆ ಅಧಿಕಾರಿಗಳ  ಭೇಟಿ; ಸ್ಥಳೀಯರ ಅಹವಾಲು ಪರಿಶೀಲನೆ”

    ವಸತಿ ಪ್ರದೇಶದಲ್ಲೇ ಹಾಟ್ ಮಿಕ್ಸ್ ಘಟಕ? ರಾಷ್ಟ್ರೀಯ ಆಯೋಗದ ನಿರ್ದೇಶನದ ಮೇರೆಗೆ ಇಂದು ಸ್ಥಳ ಪರಿಶೀಲನೆ

    • By admin
    • June 30, 2026
    • 100 views
    ವಸತಿ ಪ್ರದೇಶದಲ್ಲೇ ಹಾಟ್ ಮಿಕ್ಸ್ ಘಟಕ? ರಾಷ್ಟ್ರೀಯ ಆಯೋಗದ ನಿರ್ದೇಶನದ ಮೇರೆಗೆ ಇಂದು ಸ್ಥಳ ಪರಿಶೀಲನೆ

    ಸಿಯುಇಟಿ ಜೀವಶಾಸ್ತ್ರದಲ್ಲಿ ಶೇ.100 ಪರ್ಸೆಂಟೈಲ್ಎಕ್ಸ್ ಪರ್ಟ್ ವಿದ್ಯಾರ್ಥಿನಿ ಅದ್ವಿತೀಯ.ಎಂ ರಾಷ್ಟ್ರ ಮಟ್ಟದ ಸಾಧನೆ

    • By admin
    • June 27, 2026
    • 29 views
    ಸಿಯುಇಟಿ ಜೀವಶಾಸ್ತ್ರದಲ್ಲಿ ಶೇ.100 ಪರ್ಸೆಂಟೈಲ್ಎಕ್ಸ್ ಪರ್ಟ್ ವಿದ್ಯಾರ್ಥಿನಿ ಅದ್ವಿತೀಯ.ಎಂ ರಾಷ್ಟ್ರ ಮಟ್ಟದ ಸಾಧನೆ

    ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭಾ.ಜ.ಪಾ ರಾಜ್ಯಾಧ್ಯಕ್ಷ BY ವಿಜಯೇಂದ್ರ ಕರಾವಳಿ ಶಾಸಕರೊಂದಿಗೆ ಭೇಟಿ

    • By admin
    • June 26, 2026
    • 69 views
    ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭಾ.ಜ.ಪಾ ರಾಜ್ಯಾಧ್ಯಕ್ಷ BY ವಿಜಯೇಂದ್ರ ಕರಾವಳಿ ಶಾಸಕರೊಂದಿಗೆ ಭೇಟಿ

    ನಾಳೆಯಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ ಗಡಾಯಿಕಲ್ಲು ಚಾರಣ; ದಿನಕ್ಕೆ 500 ಮಂದಿಗೆ ಮಾತ್ರ ಅವಕಾಶ

    • By admin
    • June 24, 2026
    • 55 views
    ನಾಳೆಯಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ ಗಡಾಯಿಕಲ್ಲು ಚಾರಣ; ದಿನಕ್ಕೆ 500 ಮಂದಿಗೆ ಮಾತ್ರ ಅವಕಾಶ