
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟಿ ರಸ್ತೆಯ ನಾಲ್ಕನೇ ತಿರುವಿನಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ. ಪ್ರಯಾಣಿಕರು ಸೆಲ್ಫೀ ಕ್ಲಿಕ್ಕಿಸುವುದಕ್ಕಾಗಿ ಅದರತ್ತ ಧಾವಿಸಿದ್ದಾರೆ. ವ್ಯಕ್ತಿಯೊಬ್ಬರು ಸೆಲ್ಫೀಗಾಗಿ ಸಮೀಪ ಬರುತ್ತಿದ್ದಂತೆಯೇ ಕಾಡಾನೆ ರೊಚ್ಚಿಗೆದ್ದಿದೆ. ರಸ್ತೆಯಲ್ಲಿ ಕಾಡಾನೆ ನಿಂತಿದ್ದರಿಂದ ಘಾಟ್ ರಸ್ತೆಯಲ್ಲಿ ಸುಮಾರು ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಕಾಡಾನೆ ಜತೆ ವ್ಯಕ್ತಿಯೊಬ್ಬರು ಸೆಲ್ಫೀ ತೆಗೆಯುತ್ತಿರುವ ಹಾಗೂ ಅಷ್ಟರಲ್ಲಿ ಆನೆ ರೊಚ್ಚಿಗೆದ್ದ ವಿಡಿಯೋ ವೈರಲ್ ಆಗುತ್ತಿದೆ.