![](https://kalanirnayanews.com/wp-content/uploads/2020/07/KUVEMPU-UNIVERSITY-20201.jpg)
ಶಿವಮೊಗ್ಗ : ಕುವೆಂಪು ವಿಶ್ವ ವಿದ್ಯಾನಿಲಯದ ದಾಸ್ತಾನು ಮತ್ತು ಖರೀದಿ ವಿಭಾಗದ ಉಪ ಕುಲಸಚಿವರಾದ ಡಿ. ವಿ. ಗಾಯತ್ರಿಯವರನ್ನು ಸೇವೆಯಿಂದ ಅಮಾನತು ಮಾಡಿ ಕುವೆಂಪು ವಿವಿ ಕುಲಸಚಿವ ಎಸ್. ಎಸ್. ಪಾಟೀಲ್ ಆದೇಶ ಹೊರಡಿಸಿದ್ದಾರೆ.
![](https://kalanirnayanews.com/wp-content/uploads/2020/07/1593623722744-768x1024.jpg)
ಡಿ. ವಿ. ಗಾಯಿತ್ರಿಯವರ ಮೇಲೆ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪ ಕೇಳಿ ಬಂದಿತ್ತು. ಇವರು ಮೊದಲು ಕುವೆಂಪು ವಿವಿಗೆ ಪ್ರಥಮ ದರ್ಜೆ ಸಹಾಯಕರಾಗಿ ಸೇವೆಗೆ ಸೇರಿದ್ದರು. ಈ ವೇಳೆ ಇವರು ತೀರ್ಥಹಳ್ಳಿ ತಹಶೀಲ್ದಾರ್ ಬಳಿ ಎಸ್ಟಿ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಈ ಕುರಿತು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಪಿಸಿಆರ್ ಕೇಸ್ ದಾಖಲಾಗಿತ್ತು.
ಕೇಸ್ ದಾಖಲಾದಾಗ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದರನ್ವಯ ವಿವಿಯ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಮಾನ್ಯ ಕುಲಪತಿಗಳ ಆದೇಶಾನುಸಾರ ಡಿ.ವಿ.ಗಾಯತ್ರಿರವರನ್ನು ಅಮಾನತು ಮಾಡಲಾಗಿದೆ.