ಯುವಕರಲ್ಲಿ ಧರ್ಮದ ಅರಿವು ಮೂಡಿಸುವಲ್ಲಿ ಭಜನಾ ಮಂದಿರಗಳು ಅವಶ್ಯಕ -ಹರೀಶ್ ಪೂಂಜಾ

ಬೆಳ್ತಂಗಡಿ: ಬೆಳ್ತಂಗಡಿಯ ಕುಪೆಟ್ಟಿಯಲ್ಲಿ ಇಂದು ಶ್ರೀ ಗಣೇಶ್ ಭಜನಾಮಂದಿರ ಸಭಾಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ನೆರವೇರಿಸಿ, ಮಾತನಾಡಿದ ಅವರು ಯುವಕರಲ್ಲಿ ಧರ್ಮದ ಅರಿವು ಮೂಡಿಸುವಲ್ಲಿ ಭಜನಾ ಮಂದಿರಗಳು ಅವಶ್ಯಕ. ಊರಿನ ಜನರು ಎಲ್ಲರೂ ಸೇರಿದರೆ ಇಂಥ ಸಭಾಭವನದ ನಿರ್ಮಾಣದ ಕಾರ್ಯ ಕಷ್ಟವಲ್ಲ. ತಾಲೂಕಿನ ಶಾಸಕನಾಗಿ ನನ್ನಿಂದಾಗುವ ಎಲ್ಲಾ ಸಹಕಾರವನ್ನು ನೀಡುತ್ತೇನೆ ಎಂದು ಹೇಳಿದರು.

READ ALSO


ಮುಖ್ಯ ಅತಿಥಿ ರೈತಬಂಧು ಆಹಾರೋದ್ಯಮದ ಮಾಲಕರಾದ ಶ್ರೀ ಶಿವಶಂಕರ ನಾಯಕ್ ಮಾತನಾಡಿ ಇಂಥ ಪುಣ್ಯದ ಕೆಲಸದಲ್ಲಿ ಕೋಟಿ ಕೊಟ್ಟವರು ಮತ್ತು ಹತ್ತು ರೂಪಾಯಿ ಕೊಟ್ಟವರು ಎಲ್ಲರೂ ಒಂದೇ ಎಂದು ನಾವು ಅವರನ್ನು ಒಂದೇ ದೃಷ್ಟಿಯಿಂದ ನೋಡಬೇಕು ಎಂದರು.
ಇನ್ನೋರ್ವ ಮುಖ್ಯ ಅತಿಥಿ ಪ್ರಗತಿ ಶಿಕ್ಷಣ ಸಂಸ್ಥೆ ಕಾಣಿಯೂರು ಇದರ ಸಂಚಾಲಕರಾದ ಶ್ರೀ ಜಯಸೂರ್ಯ ರೈ ಮಾಲಾಡಿ ಮಾತನಾಡಿ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕೃತಿಯನ್ನು ಕಳಿಸಬೇಕು ಮತ್ತು ಇಂತಹ ಭಜನಾಮಂದಿರದ ಮೂಲಕ ಅಂತ ಕಾರ್ಯ ನಡೆಯಬೇಕು ಎಂದರು.

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಯೋಗೀಶ್ ಕುಮಾರ್ ಕಡ್ತಿಲ ಮಾತನಾಡಿ ಯುವ ಪೀಳಿಗೆ ಇಂತಹ ಧಾರ್ಮಿಕ ಚಟುವಟಿಕೆಯಲ್ಲಿ ತೊಡಗುವುದು ಸಂತಸದ ವಿಷಯ ಎಂದರು.


ಈ ಸಂದರ್ಭದಲ್ಲಿ ಭಜನಾ ಮಂದಿರ ಅಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷರಾದ ಶ್ರೀ ಸುಧೀರ್ ಕೆ. ಎನ್ ಹಲೇಜಿ ಹಾಗೂ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಪ್ಪೆಟ್ಟಿ ಉಪಸ್ಥಿತರಿದ್ದರು.

ಶ್ರೀ ಪ್ರಕಾಶ್ ವಾದ್ಯ ಕೊಡಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಉಪನ್ಯಾಸಕ ಶ್ರೀ ಸುಧೀರ್ ಕೆ.ಎನ್ ಧನ್ಯವಾದಗೈದರು.