ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆನ್ಲೈನ್ ಮೂಲಕ ‘ಹಿಂದೂ ಸಂಸ್ಕೃತಿ – ನಮ್ಮ ಹೆಮ್ಮೆ’ ಎಂಬ ಕಾರ್ಯಕ್ರಮ ಸಂಪನ್ನ ಹೊಸ ವರ್ಷವನ್ನು ಯುಗಾದಿಯಂದೇ ಆಚರಿಸಲು ಯುವಕ-ಯುವತಿಯರಿಂದ ಪ್ರತಿಜ್ಞೆ !



ಮಂಗಳೂರು: ದಿನಾಂಕ ೨೫.೧೨.೨೦೨೦ ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆನ್ಲೈನ್ ಮೂಲಕ “ಹಿಂದೂ ಸಂಸ್ಕೃತಿ – ನಮ್ಮ ಹೆಮ್ಮೆ” ಎಂಬ ಉಪನ್ಯಾಸ ವನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ೩೫೦ ಕ್ಕೂ ಅಧಿಕ ಯುವಕ ಮತ್ತು ಯುವತಿಯರು ಭಾಗವಹಿಸಿದ್ದರು. ಈ ಉಪನ್ಯಾಸವನ್ನು  ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಇವರು ನೀಡಿದರು, ಹಾಗೆಯೇ ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ರಮೇಶ ರಾಯಚೂರು ಇವರು ಕಾರ್ಯಕ್ರಮದ ನಿರೂಪಣೆಯನ್ನು  ಮಾಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು ೩೫೦ಕ್ಕೂ ಹೆಚ್ಚು ಯುವಕ-ಯುವತಿಯರು ಆನ್‌ಲೈನ್ ಮೂಲಕ ಪಾಲ್ಗೊಂಡು ಡಿಸೆಂಬರ್ ೩೧ ರಂದು ಅಲ್ಲ ಯುಗಾದಿಯಂದೇ ಹೊಸ ವರ್ಷ ಆಚರಿಸಲು ಪ್ರತಿಜ್ಞೆ ಮಾಡಿದರು.

ಈ ವೇಳೆ ಸೌ. ಪೈಯವರು ಮಾತನಾಡುತ್ತಾ “ಜೂಲಿಯಸ್ ಸಿಸರ್ ನಿಂದ ನಿರ್ಮಾಣ ವಾದ ಜನವರಿ ೧ ರಂದು ಆಚರಿಸುವ ಹೊಸ ವರ್ಷ ತುಂಬಾ ಇತ್ತೀಚಿನದ್ದು, ಇದಕ್ಕೆ ಯಾವುದೇ ಐತಿಹಾಸಿಕ, ನೈಸರ್ಗಿಕ ಕಾರಣಗಳು ಇಲ್ಲ. ಅದರ ಬದಲು ಯುಗಾದಿಯಂದು ಹೊಸ ವರ್ಷ ಆಚರಣೆ ಮಾಡುವುದಕ್ಕೆ ಪೌರಾಣಿಕ, ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳು ಇದೆ. ಇದೇ ದಿನ ಬ್ರಹ್ಮ ದೇವರು ಸೃಷ್ಟಿಯನ್ನು ನಿರ್ಮಾಣ ಮಾಡಿದರು, ಶಾಲಿವಾಹನ ಶಕೆ ಪ್ರಾರಂಭವಾದದ್ದು ಕೂಡ ಇದೇ ದಿನ. ವಾತಾವರಣದಲ್ಲಿ ಸಮಶೀತೋಷ್ಣ ಇರುವ ನೈಸರ್ಗಿಕ ಕಾರಣಗಳನ್ನು ಹೊಂದಿರುವ ಯುಗಾದಿಯಂದು ಹೊಸ ಆಚರಣೆ ಮಾಡುವುದು ಭಾರತೀಯ ಹವಾಗುಣ, ಭಾರತದ ಸಂಸ್ಕೃತಿಗೆ ಅತ್ಯಂತ ಪೂರಕವಾಗಿದೆ. ಸೂರ್ಯೋದಯದ ನಂತರ ಪೂಜೆಯೊಂದಿಗೆ ಹೊಸ ವರ್ಷ ಆಚರಣೆ ಮಾಡುವುದು ಭಾರತೀಯ ಸಂಸ್ಕೃತಿಯಾಗಿದೆಯೇ ವಿನಃ ಮಧ್ಯ ರಾತ್ರಿ ಮದ್ಯ ಕುಡಿದು ಹೊಸ ವರ್ಷಾಚರಣೆಯನ್ನು ಮಾಡುವುದಲ್ಲ ಎಂದು ಹೇಳಿದರು.

ಹಿಂದೂಗಳು ಡಿಸೆಂಬರ್ ೩೧ ರ ರಾತ್ರಿ ಹೊಸ ವರ್ಷ ಆಚರಣೆ ಮಾಡುವುದು ಎಂದರೆ ಒಂದು ದಿನದ ಮತಾಂತರವೇ ಆಗಿದೆ. ಅದಕ್ಕಾಗಿ ಯಾರು ಸಹ ಡಿಸೆಂಬರ್ ೩೧ ರಂದು ಹೊಸ ವರ್ಷ ಆಚರಣೆ ಮಾಡಬಾರದು ಅದರ ಬದಲು ಯುಗಾದಿಯಂದು ಹೊಸ ವರ್ಷ ಆಚರಣೆ ಮಾಡಲು ಕರೆ ನೀಡಿದರು. ಅದಕ್ಕೆ ಸ್ಪಂದಿಸಿದ ಯುವಕ ಯುವತಿಯರು  ಡಿಸೆಂಬರ್ ೩೧ ರಂದು ಹೊಸ ವರ್ಷ ಆಚರಣೆ ಮಾಡದೇ, ಯುಗಾದಿಯಂದು ಹೊಸ ವರ್ಷ ಅಚರಣೆ ಮಾಡುತ್ತೇವೆಂದು ಪ್ರತಿಜ್ಞೆ ಮಾಡಿದರು.

ಸೌ. ಲಕ್ಷ್ಮೀ ಪೈಯವರು ಈ ವೇಳೆ ಮುಂದಿನಂತೆ ಪ್ರತಿಜ್ಞೆಯನ್ನು ಮಾಡಿಸಿದರು ‘ನಾವು ಧರ್ಮ ಸಂಸ್ಥಾಪನೆಯ ಕಾರ್ಯ ಮಾಡುವ ಭಗವಾನ್ ಶ್ರೀಕೃಷ್ಣನ ಚರಣದಲ್ಲಿ ಪ್ರತಿಜ್ಞೆ ಮಾಡುತ್ತೇವೆ, ನಾವು ನಮ್ಮ ಸರ್ವಶ್ರೇಷ್ಠ ಪೂರ್ವಜರಾದ ಋಷಿಮುನಿಗಳು ಹಾಕಿಕೊಟ್ಟಿರುವ ಪರಂಪರೆಯನ್ನು ಅಭಿಮಾನದಿಂದ ಪಾಲಿಸುತ್ತೇವೆ.  ನಾವು ಹೊಸ ವರ್ಷವನ್ನು ಡಿಸೆಂಬರ್ ೩೧ ರ ರಾತ್ರಿ ಅಥವಾ ಜನವರಿ ೧ ರಂದು ಆಚರಣೆ ಮಾಡುವುದಿಲ್ಲ. ನಾವು ಹೊಸ ವರ್ಷವನ್ನು ಹಿಂದೂ ಪಂಚಾಂಗದಂತೆ ಯುಗಾದಿಯಂದು ಆಚರಣೆಯನ್ನು ಮಾಡುವೆವು. ಜನವರಿ ೧ ರಂದು ನಾವು ಯಾರಿಗೂ ಶುಭಾಶಯವನ್ನು ಕೋರುವುದಿಲ್ಲ. ಅದರ ಬದಲು ಯುಗಾದಿಯಂದು ಹೊಸ ವರ್ಷದ ಶುಭಾಶಯ ಹೇಳುವೆವು. ನಾವು ನಮ್ಮ ಸ್ನೇಹಿತರಿಗೂ ಹಿಂದೂ ಹೊಸ ವರ್ಷದ ಯುಗಾದಿಯ ಬಗ್ಗೆ ತಿಳಿಸಿ ಧರ್ಮಜಾಗೃತಿ ಮಾಡುವೆವು. ನಾವು ನಮ್ಮ ಪ್ರಾಣ ಇರುವವರೆಗೆ ಆಭಿಮಾನದಿಂದ ನಮ್ಮ ಇತಿಹಾಸ, ಪರಂಪರೆ, ಆಚರಣೆಯನ್ನು ಪಾಲಿಸುವೆವು. ನಮ್ಮ ಪೂರ್ವಜರು ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನಡೆಯುವೆವು’.
ಕೊನೆಯಲ್ಲಿ ಶ್ಲೋಕದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯವಾಯಿತು.

Spread the love
  • Related Posts

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    Belthangady: ತಾಲೂಕಿನ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.Shishila, Kokkada, Dharmasthala, Arasinamakki, Ujire ಹಾಗೂ Nidle ಮೊದಲಾದ ಕಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ತುಂತುರು ಹಾಗೂ ಸಾಮಾನ್ಯ ಮಳೆಯಾಗಿದೆ.ತಾಲೂಕಿನಲ್ಲಿ ಫೆಬ್ರವರಿ 21ರಂದು ಕೆಲವೆಡೆ…

    Spread the love

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಬಂಗಾಡಿ: ಸೂರ್ಯ-ಚಂದ್ರ ಹೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್, ಕರ್ನಾಟಕ ಸರಕಾರ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದೊಂದಿಗೆ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಬಯಲು ಕಂಬಳವು ಶ್ರೀ…

    Spread the love

    You Missed

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    • By admin
    • March 15, 2026
    • 60 views
    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    • By admin
    • March 14, 2026
    • 101 views
    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    • By admin
    • March 14, 2026
    • 43 views
    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ  ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    • By admin
    • March 13, 2026
    • 610 views
    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    • By admin
    • March 10, 2026
    • 150 views
    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ

    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ

    • By admin
    • March 10, 2026
    • 63 views
    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ