ಇಸ್ರೇಲ್-ಅಮೆರಿಕ ದಾಳಿಗೆ ಪ್ರತಿಯಾಗಿ ಯುಎಇ, ಸೌದಿ ಮೇಲೆ ಇರಾನ್ ಕ್ಷಿಪಣಿ ದಾಳಿ ಜಾಗತಿಕ ವಿಮಾನಯಾನ ಸ್ಥಗಿತ:

ದುಬೈ: ಯುದ್ಧದ ಪರಿಸ್ಥಿತಿಯಿಂದಾಗಿ ಇಸ್ರೇಲ್, ಇರಾನ್, ಇರಾಕ್, ಕುವೈತ್ ಮತ್ತು ಕತಾರ್ ದೇಶಗಳು ತಮ್ಮ ವಾಯುಮಾರ್ಗವನ್ನು ಮುಚ್ಚಿವೆ. ಇದರಿಂದಾಗಿ ಭಾರತದ ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ ಹಲವು ಅಂತರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ವಿಮಾನಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಲಾಗಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗಿದ್ದು, ಇಸ್ರೇಲ್ ಮತ್ತು ಅಮೆರಿಕದ ಜಂಟಿ ವೈಮಾನಿಕ ದಾಳಿಗೆ ಪ್ರತಿಕಾರವಾಗಿ ಇರಾನ್ ಶನಿವಾರ ತಡರಾತ್ರಿ ಯುಎಇ, ಕತಾರ್ ಮತ್ತು ಸೌದಿ ಅರೇಬಿಯಾದ ಪ್ರಮುಖ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ‘ಆಪರೇಷನ್ ಎಪಿಕ್ ಫ್ಯೂರಿ’ ಹೆಸರಿನಲ್ಲಿ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಇರಾನ್ ತಿರುಗಿಬಿದ್ದಿದೆ. ಅಬುಧಾಬಿ, ದುಬೈ, ದೋಹಾ ಮತ್ತು ರಿಯಾದ್ ನಗರಗಳನ್ನು ಗುರಿಯಾಗಿಸಿ ಇರಾನ್ ಕ್ಷಿಪಣಿಗಳನ್ನು ಉಡಾಯಿಸಿದೆ.

ಅಬುಧಾಬಿಯಲ್ಲಿ ಸಾವು: ಅಬುಧಾಬಿಯ ವಸತಿ ಪ್ರದೇಶವೊಂದರಲ್ಲಿ ಕ್ಷಿಪಣಿಯ ಅವಶೇಷಗಳು ಬಿದ್ದ ಪರಿಣಾಮ ಏಷ್ಯಾ ಮೂಲದ ಓರ್ವ ನಾಗರಿಕ ಮೃತಪಟ್ಟಿರುವುದಾಗಿ ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ.


ದುಬೈನಲ್ಲಿ ಆತಂಕ: ದುಬೈ ನಿವಾಸಿಗಳು ಭಾರಿ ಸ್ಫೋಟದ ಸದ್ದು ಕೇಳಿಬಂದಿರುವುದಾಗಿ ಮತ್ತು ಆಕಾಶದಲ್ಲಿ ಬೆಂಕಿಯ ಉಂಡೆಗಳಂತೆ ಕ್ಷಿಪಣಿಗಳು ಸಾಗಿದ್ದನ್ನು ನೋಡಿರುವುದಾಗಿ ತಿಳಿಸಿದ್ದಾರೆ.


ಅಮೆರಿಕ ನೆಲೆಗಳ ಮೇಲೆ ಕಣ್ಣು: ಇರಾನ್ ದಾಳಿ ನಡೆಸಿದ ಎಲ್ಲಾ ನಗರಗಳಲ್ಲಿ ಅಮೆರಿಕದ ಮಿಲಿಟರಿ ನೆಲೆಗಳಿವೆ. ಅಬುಧಾಬಿಯ ಅಲ್ ದಫ್ರಾ ಮತ್ತು ದೋಹಾದ ಅಲ್ ಉದೈದ್ ವಾಯುನೆಲೆಗಳು ಅಮೆರಿಕದ ಪ್ರಮುಖ ಕೇಂದ್ರಗಳಾಗಿವೆ.


ಬಹ್ರೇನ್ ಮೇಲೂ ದಾಳಿ: ಮನಾಮದಲ್ಲಿರುವ ಅಮೆರಿಕ ನೌಕಾಪಡೆಯ 5ನೇ ಫ್ಲೀಟ್ ಕೇಂದ್ರ ಕಚೇರಿಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಬಹ್ರೇನ್ ಹೇಳಿದೆ.

ಸೌದಿ ಅರೇಬಿಯಾ ಈ ದಾಳಿಯನ್ನು “ಹೇಡಿಗಳ ಕೃತ್ಯ” ಎಂದು ಖಂಡಿಸಿದ್ದು, ಇರಾನ್‌ಗೆ ಇದರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಅತ್ತ ಇಸ್ರೇಲ್ ಪ್ರಧಾನಿ ನೆತನ್ಯಾಹು, “ಇರಾನ್‌ನಿಂದ ಎದುರಾಗಿರುವ ಅಸ್ತಿತ್ವದ ಭೀತಿಯನ್ನು ಎದುರಿಸಲು ನಾವು ಸಿದ್ಧ” ಎಂದು ಹೇಳಿದ್ದಾರೆ.

Spread the love
  • Related Posts

    ಅಧಿಕೃತ ಆದೇಶವಿದ್ದರೂ ಬಸ್ ನಿಲ್ಲಿಸದೇ ನಿರ್ಲಕ್ಷ್ಯ: “ಬೋರ್ಡ್ ಇದೆ, ಆದೇಶ ಇದೆ… ಬಸ್ ಮಾತ್ರ ನಿಲ್ಲಲ್ಲ!”

    ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸೋಮಂತಡ್ಕ ಬಸ್ ನಿಲುಗಡೆ ವಿಚಾರದಲ್ಲಿ ಗಂಭೀರ ನಿರ್ಲಕ್ಷ್ಯದ ಘಟನೆ ಬೆಳಕಿಗೆ ಬಂದಿದೆ. ಸ್ಥಳದಲ್ಲೇ “ವೇಗದೂತ ಹಾಗೂ ಸಾಮಾನ್ಯ ಬಸ್ ನಿಲುಗಡೆ” ಎಂದು ಬೋರ್ಡ್ ಅಳವಡಿಸಿರುವುದರ ಜೊತೆಗೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದಲೂ ಅಧಿಕೃತ…

    Spread the love

    ಎಕ್ಸೆಲ್ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ಸರಸ್ವತಿ ಗೋ ಮಂದಿರ ಲೋಕಾರ್ಪಣೆ

    ಬೆಳ್ತಂಗಡಿ: ಹಲವು ಶೈಕ್ಷಣಿಕ ದಾಖಲೆಗಳ ಮೂಲಕ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆವರಣ ಇಂದು ಹೊಸ ವಿಷಯಕ್ಕೆ ಗಮನ ಸೆಳೆಯಿತು. ಏಪ್ರಿಲ್ 10 ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರ…

    Spread the love

    You Missed

    ಅಧಿಕೃತ ಆದೇಶವಿದ್ದರೂ ಬಸ್ ನಿಲ್ಲಿಸದೇ ನಿರ್ಲಕ್ಷ್ಯ: “ಬೋರ್ಡ್ ಇದೆ, ಆದೇಶ ಇದೆ… ಬಸ್ ಮಾತ್ರ ನಿಲ್ಲಲ್ಲ!”

    • By admin
    • April 18, 2026
    • 8 views
    ಅಧಿಕೃತ ಆದೇಶವಿದ್ದರೂ ಬಸ್ ನಿಲ್ಲಿಸದೇ ನಿರ್ಲಕ್ಷ್ಯ: “ಬೋರ್ಡ್ ಇದೆ, ಆದೇಶ ಇದೆ… ಬಸ್ ಮಾತ್ರ ನಿಲ್ಲಲ್ಲ!”

    ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ 16 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು

    • By admin
    • April 17, 2026
    • 22 views
    ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ 16 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು

    ಬಳಂಜದಲ್ಲಿ ಭಕ್ತಿಭಾವದಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ

    • By admin
    • April 14, 2026
    • 52 views
    ಬಳಂಜದಲ್ಲಿ ಭಕ್ತಿಭಾವದಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ

    ಕಲ್ಚೆರ್ಪೆ ಗ್ರಾಮದಲ್ಲಿ ಬಾವಿಗೆ ಬಿದ್ದಿದ್ದ ಕಾಡಾನೆಯ ರಕ್ಷಣಾಕಾರ್ಯ ಯಶಸ್ವಿ

    • By admin
    • April 13, 2026
    • 31 views
    ಕಲ್ಚೆರ್ಪೆ ಗ್ರಾಮದಲ್ಲಿ ಬಾವಿಗೆ ಬಿದ್ದಿದ್ದ ಕಾಡಾನೆಯ ರಕ್ಷಣಾಕಾರ್ಯ ಯಶಸ್ವಿ

    ಆಯತಪ್ಪಿ ರಾತ್ರಿ ಬಾವಿಗೆ ಬಿದ್ದ ಕಾಡಾನೆ ಪೆರಾಜೆ ಕಲ್ಲುಚರ್ಪೆಯಲ್ಲಿ ನಡೆದ ಘಟನೆ

    • By admin
    • April 13, 2026
    • 50 views
    ಆಯತಪ್ಪಿ ರಾತ್ರಿ ಬಾವಿಗೆ ಬಿದ್ದ ಕಾಡಾನೆ ಪೆರಾಜೆ  ಕಲ್ಲುಚರ್ಪೆಯಲ್ಲಿ ನಡೆದ ಘಟನೆ

    ಚಾಲಕನ ಅಜಾಗರೂಕತೆಯಿಂದ ಪಾದಾಚಾರಿಗಳ ಮೇಲೆರಗಿದ ಓಮ್ಮಿ ಕಾರು

    • By admin
    • April 12, 2026
    • 93 views
    ಚಾಲಕನ ಅಜಾಗರೂಕತೆಯಿಂದ ಪಾದಾಚಾರಿಗಳ ಮೇಲೆರಗಿದ ಓಮ್ಮಿ ಕಾರು