ಅಧಿಕೃತ ಆದೇಶವಿದ್ದರೂ ಬಸ್ ನಿಲ್ಲಿಸದೇ ನಿರ್ಲಕ್ಷ್ಯ: “ಬೋರ್ಡ್ ಇದೆ, ಆದೇಶ ಇದೆ… ಬಸ್ ಮಾತ್ರ ನಿಲ್ಲಲ್ಲ!”

ಬೆಳ್ತಂಗಡಿ: ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸೋಮಂತಡ್ಕ ಬಸ್ ನಿಲುಗಡೆ ವಿಚಾರದಲ್ಲಿ ಗಂಭೀರ ನಿರ್ಲಕ್ಷ್ಯದ ಘಟನೆ ಬೆಳಕಿಗೆ ಬಂದಿದೆ. ಸ್ಥಳದಲ್ಲೇ “ವೇಗದೂತ ಹಾಗೂ ಸಾಮಾನ್ಯ ಬಸ್ ನಿಲುಗಡೆ” ಎಂದು ಬೋರ್ಡ್ ಅಳವಡಿಸಿರುವುದರ ಜೊತೆಗೆ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದಲೂ ಅಧಿಕೃತ ಆದೇಶ ನೀಡಲಾಗಿದ್ದರೂ ಈ ಆದೇಶವನ್ನು ಕ್ಯಾರೇ ಮಾಡದೇ ಪ್ರಯಾಣಿಕರಿಗೆ ಕೋರಿಕೆ ನಿಲುಗಡೆ ಬಗ್ಗೆ ಕೇಳಿದರೂ ಬಸ್ ನಿಲ್ಲಿಸಿರುವ ಘಟನೆ ಬೆಳಕಿಗೆ ಬಂದಿದೆ.

ನಿಲುಗಡೆ ಬೋರ್ಡ್, ಆದೇಶ ಇದ್ದರೂ ನಿಲ್ಲದ ಬಸ್: KSRTC ವಿರುದ್ಧ ಆಕ್ರೋಶ”

ಮೂಡಿಗೆರೆ ಡಿಪ್ಪೊಗೆ ಸೇರಿದ ಚಿಕ್ಕಮಗಳೂರು–ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆಯ ಮೂಡಿಗೆರೆ ಡಿಪ್ಪೋಗೆ ಸೇರಿದ KA42F2184 ಬಸ್ ಚಾಲಕ ಹಾಗೂ ನಿರ್ವಾಹಕರು ಮುಂಡಾಜೆ/ಸೋಮಂತಡ್ಕ ನಿಲ್ದಾಣದಲ್ಲಿ ದಿನಾಂಕ 18/04/2026ಶನಿವಾರ ರಾತ್ರಿ ಹೊತ್ತಿನಲ್ಲಿ ಸುಮಾರು 8.05ರ ಸಮಯದಲ್ಲಿ ನಿಲ್ಲಿಸದೇ ಮುಂದುವರಿದಿರುವುದು ವರದಿಯಾಗಿದೆ. ಇದರಿಂದ ನಿತ್ಯ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ.

“ನಿಗದಿತ ನಿಲುಗಡೆ ಮೀರಿ 7 ಕಿ.ಮೀ ದೂರದಲ್ಲಿ ಇಳಿಸಿದ ಚಾಲಕ: ಪ್ರಯಾಣಿಕರಿಗೆ ಸಜೆ?”

ಮುಂದಿನ ಸ್ಟೇಜ್ ಗೆ ಟಿಕೆಟ್ ಪಡೆದವರಿಗೆ ಆದರ ಹಿಂದೆ ಎಲ್ಲಿ ಬೇಕಾದರೂ ಇಳಿಯಬಹುದು ಎಂಬುದು ಸಂಸ್ಥೆಯ ನಿಯಮ ಇದ್ದರೂ ಪ್ರಯಾಣಿಕರ ಪ್ರಕಾರ, ಈ ಪ್ರದೇಶದಲ್ಲಿ ಬಸ್ಸನ್ನು ನಿಲುಗಡೆ ಮಾಡದೇ ಸುಮಾರು 7ಕಿ.ಮೀ ದೂರದ ಉಜಿರೆ ಪಟ್ಟಣದವರೆಗೆ ಸಾಗಿಸಲಾಗಿದ್ದು, ಮಧ್ಯದಲ್ಲಿ ಇಳಿಯಬೇಕಿದ್ದವರು ಅನಿವಾರ್ಯವಾಗಿ ದೂರ ಪ್ರಯಾಣಿಸಬೇಕಾಯಿತು. ಈ ಹಿಂದೆ ಮಹಿಳಾ ಪ್ರಯಾಣಿಕರಿಗೂ ರಾತ್ರಿ ವೇಳೆಯಲ್ಲಿ ಇದೇ ರೀತಿ ಆಗಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿತ್ತು.

“ಬೋರ್ಡ್ ಇದೆ, ಆದೇಶ ಇದೆ… ಬಸ್ ಮಾತ್ರ ನಿಲ್ಲಲ್ಲ!”

ಸ್ಥಳದಲ್ಲೇ ನಿಲುಗಡೆ ಬೋರ್ಡ್ ಹಾಗೂ ಸಂಬಂಧಿತ ಪ್ರಾಧಿಕಾರದಿಂದ ಅಧಿಕೃತ ಆದೇಶ ಇದ್ದರೂ ಬಸ್ ನಿಲ್ಲಿಸದಿರುವುದು ಗಂಭೀರ ನಿರ್ಲಕ್ಷ್ಯವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ಚಾಲಕ ಮತ್ತು ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಪ್ರಮುಖ ಪಟ್ಟಣಗಳಲ್ಲಿ ಒಂದಾಗಿರುವ ಸೋಮಂತಡ್ಕ ಸ್ಟೇಜ್ ಯಾಕಿಲ್ಲ!!!?????

ಚಾರ್ಮಾಡಿ, ಕಕ್ಕಿಂಜೆ, ಸೋಮಂತ್ತಡ್ಕ, ಉಜಿರೆ ಇವು ಪ್ರಮುಖ ಪಟ್ಟಣಗಳಲ್ಲಿ ಒಂದಾಗಿದ್ದು ಸೋಮಂತ್ತಡ್ಕ ಪ್ರದೇಶದಲ್ಲಿ ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಬ್ಯಾಂಕ್ ಹಾಗೂ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರುವ ಪ್ರಮುಖ ಪಟ್ಟಣ ಇದಾಗಿದ್ದು ಸಾರಿಗೆ ಸಂಸ್ಥೆಯ ಸ್ಟೇಜ್ ನಲ್ಲಿ ಸೋಮಂತಡ್ಕದ ಹೆಸರನ್ನು ಕೈಬಿಟ್ಟಿದ್ದು ಈ ಪ್ರದೇಶದಲ್ಲಿ ಬಸ್ ಗಳಲ್ಲಿ ಸಂಚರಿಸಬೇಕಾದರೆ ಮುಂದಿನ 7ಕಿ.ಮೀ ದೂರದ ಉಜಿರೆ ಸ್ಟೇಜ್ ಗೆ ಟಿಕೆಟ್ ಪಡೆಯಬೇಕು ಹಾಗೂ ಉಜಿರೆ ಸ್ಟೇಜ್ ಗೆ ಟಿಕೆಟ್ ನೀಡಿದರೂ ಸೋಮಂತ್ತಡ್ಕದಲ್ಲಿ ಬ‌ಸ್ ನಿಲುಗಡೆ ಮಾಡದೇ ದಿವ್ಯನಿರ್ಲಕ್ಷ ವಹಿಸುತ್ತಿದ್ದಾರೆ

ಶಾಲಾಕಾಲೇಜು ಮಕ್ಕಳ ಸಂಚಾರಕ್ಕೂ ವಿಘ್ನ!!!!!

ಈ ಬಗ್ಗೆ ಹಲವು ಬಾರಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರೂ ವೇಗದೂತ ಬಸ್ ಗಳು ಈ ಪ್ರದೇಶದಲ್ಲಿ ನಿಲುಗಡೆ ನೀಡದೇ ಇರುವುದು ವಿಪರ್ಯಾಸವಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಿಂದ ಬರುವ ಬಸ್ ಗಳಲ್ಲಿ ನೇತಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆಯೂ ಕೂಡಲೇ ಸಂಬಂಧಪಟ್ಟವರು ಬೆಳಕು ಚೆಲ್ಲುವ ಪ್ರಯತ್ನ ಮಾಡಬೇಕಾಗಿದೆ.

ಈ ಬಗ್ಗೆ ತೊಂದರೆಗೊಳಗಾದ ಪ್ರಯಾಣಿಕರು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳಿಗೆ ಹಾಗೂ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಸಚಿವರಿಗೂ ಪತ್ರ ಬರೆಯುವ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ.

ಈ ಘಟನೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆಯುಂಟುಮಾಡಿದ್ದು, ಸಂಬಂಧಿತ ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Spread the love
  • Related Posts

    ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಯೆಲ್ಲೊ – ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

    ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಹೊರಡಿಸಿರುವ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು. ಇದೇ ಹವಾಮಾನ ಪರಿಸ್ಥಿತಿಯ ಮುಂದುವರಿಯುವ ಸೂಚನೆಯಿದ್ದು ಜಿಲ್ಲೆಯಾದ್ಯಂತ ಯೆಲ್ಲೊ – ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ…

    Spread the love

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶ

    ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆಯಿಂದ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ (ಜು.18) ನಿಧನ ಹೊಂದಿದರು, ಅವರಿಗೆ 85 ವರ್ಷ ವಯಸ್ಸಾಗಿತ್ತು. ಚೆನ್ನಮ್ಮ ಅವರಿಗೆ ಕಳೆದ ಮೂರು ದಿನಗಳಿಂದ…

    Spread the love

    You Missed

    ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಯೆಲ್ಲೊ – ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

    • By admin
    • July 22, 2026
    • 2 views
    ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಯೆಲ್ಲೊ – ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶ

    • By admin
    • July 18, 2026
    • 7 views
    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ವಿಧಿವಶ

    ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜು.18ರಂದು ರಜೆ ಘೋಷಣೆ

    • By admin
    • July 17, 2026
    • 9 views
    ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಜು.18ರಂದು ರಜೆ ಘೋಷಣೆ

    ಮಹಿಳಾ ಸಬಲೀಕರಣ ಮತ್ತು ಸಮಾಜ ಸೇವೆಗೆ ಜಾಗತಿಕ ಮನ್ನಣೆ: ಹೇಮಾವತಿ ವಿ. ಹೆಗ್ಗಡೆಗೆ ಗೌರವ ಡಾಕ್ಟರೇಟ್

    • By admin
    • July 17, 2026
    • 11 views
    ಮಹಿಳಾ ಸಬಲೀಕರಣ ಮತ್ತು ಸಮಾಜ ಸೇವೆಗೆ ಜಾಗತಿಕ ಮನ್ನಣೆ:  ಹೇಮಾವತಿ ವಿ. ಹೆಗ್ಗಡೆಗೆ ಗೌರವ ಡಾಕ್ಟರೇಟ್

    ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ನೀಟ್ 2026ರಲ್ಲಿ ಐತಿಹಾಸಿಕ ಸಾಧನೆ – ಅಖಿಲ ಭಾರತ ಮಟ್ಟದಲ್ಲಿ 271ನೇ ರ್ಯಾಂಕ್

    • By admin
    • July 17, 2026
    • 10 views
    ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ನೀಟ್ 2026ರಲ್ಲಿ ಐತಿಹಾಸಿಕ ಸಾಧನೆ – ಅಖಿಲ ಭಾರತ ಮಟ್ಟದಲ್ಲಿ 271ನೇ ರ್ಯಾಂಕ್

    ಚಿರಂಜೀವಿ ಯುವಕ ಮಂಡಲ(ರಿ), ಕಾನರ್ಪ ಇದರ 35ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • July 16, 2026
    • 16 views
    ಚಿರಂಜೀವಿ ಯುವಕ ಮಂಡಲ(ರಿ), ಕಾನರ್ಪ ಇದರ 35ನೇ ವರ್ಷದ  ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ