ಪರಿಸರ ಸ್ನೇಹಿ ಮಾಸ್ಕ್ ತಯಾರಿಸಿ ಗಮನ ಸೆಳೆದ ಮಂಗಳೂರಿನ ಯುವಕ..! ಬಳಸಿ ಬಿಸಾಡಿದ್ರೂ ಗಿಡವಾಗುತ್ತೆ ಈ ಮಾಸ್ಕ್….!

ಕೊರೋನಾ ಎರಡನೇ ಅಲೆಯಲ್ಲಿ ಜನರು ಸೋಂಕಿನಿಂದ ನರಳುತ್ತಿದ್ದರೇ ಸಾವಿನ ಸಂಖ್ಯೆಯೂ ಹೆಚ್ಚಿದೆ. ಈ ಮಧ್ಯೆ ಮಾಸ್ಕ್ ಬದುಕಿನ ಅವಿಭಾಜ್ಯ ಅಂಗದಂತಾಗಿದೆ. ಆದರೆ ಕಳೆದ ಒಂದು ವರ್ಷಗಳಿಂದ ಬಳಕೆಯಾಗ್ತಿರೋ ತರೇಹವಾರಿ ಮಾಸ್ಕ್ ಗಳನ್ನು ವಿಲೇವಾರಿ ಮಾಡೋದೆ ದೊಡ್ಡ ತಲೆನೋವು. ಮಾಸ್ಕ್ ನಿಂದಲೇ ಹೊಸ ರೋಗ ಹುಟ್ಟದಿದ್ದರೇ ಸಾಕು ಅನ್ನೋ ಆತಂಕ ಕಾಡುತ್ತಿರುವಾಗಲೇ ಮಂಗಳೂರಿನ ಯುವಕನೊಬ್ಬ ಬಳಸಿ ಬಿಸಾಡಿದ್ರೆ ಗಿಡವಾಗೋ  ಪರಿಸರ ಸ್ನೇಹಿ ಮಾಸ್ಕ್ ತಯಾರಿಸಿ ಗಮನ ಸೆಳೆದಿದ್ದಾನೆ.

ಮಾಸ್ಕ್ ಅನಿವಾರ್ಯವಾಗುತ್ತಿದ್ದಂತೆ ವಿವಿಧ ಬಣ್ಣ,ಬಟ್ಟೆ,ಪ್ಲಾಸ್ಟಿಕ್ ಸೇರಿದಂತೆ ನೂರಾರು ವೈರೈಟಿ,ದರ ಹಾಗೂ ವಿಶೇಷತೆಗಳ ಮಾಸ್ಕ್ ಮಾರುಕಟ್ಟೆಗೆ ಕಾಲಿಟ್ಟಿದೆ. ಆದರೆ ಈ ಮಾಸ್ಕ್ ಗಳು ನಿರ್ವಹಣೆ ಹಾಗೂ ಮರುಬಳಕೆಯೇ ದೊಡ್ಡ ಸವಾಲು. ಈ ಮಾಸ್ಕ್ ಗಳೇ ಹೊಸ ತ್ಯಾಜ್ಯ ಸೃಷ್ಟಿಸುವ ಸ್ಥಿತಿ ಎದುರಾಗುತ್ತಿದೆ.

ಇಂತ ಹೊತ್ತಿನಲ್ಲೇ ಮಂಗಳೂರಿನ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ಉತ್ಸಾಹಿ ಯುವಕ ನಿತಿನ್ ವಾಸ್ ಬಳಸಿ ಬಿಸಾಡಿದ ಬಳಿಕ ಹಸಿರು ಗಿಡವಾಗೋ ಪರಿಸರ ಸ್ನೇಹಿ ಮಾಸ್ಕ್ ತಯಾರಿಸಿ ಗಮನ ಸೆಳೆದಿದ್ದಾರೆ. ಸಸ್ಯದ ಬೀಜಗಳನ್ನು  ಬಳಸಿ ಹತ್ತಿಯಿಂದ ಈ ಮಾಸ್ಕ್ ತಯಾರಿಸಲಾಗಿದ್ದು, ಇದನ್ನು ಬಳಸಿ ಬಿಸಾಡಿದ್ರೆ ಗಿಡವಾಗಿ ಪರಿಸರದ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.  

ಹಣ್ಣು-ಹೂವಿನ ಗಿಡದ ಬೀಜಗಳನ್ನು ಹತ್ತಿಯೊಂದಿಗೆ ಬೆರೆಸಿ ನೀರಿನಲ್ಲಿ ನೆನೆಸಿ, ಬಳಿಕ ಅದನ್ನು ಪೇಪರ್ ರೂಪಕ್ಕೆ ತಂದು 12 ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿ ಕಾಟನ್ ಬಟ್ಟೆ, ಕಾಟನ್ ದಾರ ಬಳಸಿ ಮಾಸ್ಕ್ ಸಿದ್ಧಪಡಿಸಲಾಗುತ್ತದೆ. ಒಮ್ಮೆ ಬಳಸಿ ಬಿಸಾಡುವ  ಈ ಮಾಸ್ಕ್ ಒಂದಕ್ಕೆ 25 ರೂಪಾಯಿ ದರವಿದೆ.

ಇದು ಕಾಟನ್ ಬಟ್ಟೆ ಹಾಗೂ ಹತ್ತಿಯನ್ನು ಒಳಗೊಂಡಿರೋದರಿಂದ ಬಳಕೆಗೂ ಲೈಟ್ ಎನ್ನಿಸುವಂತಿದ್ದು,  ಬಳಸಿದ ಬಳಿಕ ಪರಿಸರಕ್ಕೂ ಪೂರಕವಾಗಿಯೇ ಡಿಸ್ಪೋಸ್ ಆಗಲಿದೆ. ಸದ್ಯ 3 ಸಾವಿರ ಮಾಸ್ಕ್ ಉತ್ಪಾದಿಸಿರುವ ನಿತಿನ್ ವಾಸ್ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸುವ ಚಿಂತನೆಯಲ್ಲಿದ್ದಾರೆ.

ನಿತಿನ್ ವಾಸ್ ಹಾಗೂ ಸ್ನೇಹಿತರು ಪೇಪರ್ ಸೀಡ್ ಎಂಬ ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸುವ ಉದ್ಯಮವನ್ನು ಹೊಂದಿದ್ದಾರೆ. 2017 ರಲ್ಲಿ ಆರಂಭವಾದ  ಈ ಸಂಸ್ಥೆ ಹಳ್ಳಿಯ ಮಹಿಳೆಯರಿಗೆ ಉದ್ಯೋಗ ಒದಗಿಸಿ ಮುನ್ನಡೆಯುತ್ತಿತ್ತು. ಆದರೆ ಲಾಕ್ ಡೌನ್ ಈ ಸಂಸ್ಥೆಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತ್ತು. ‘

ಹೀಗಾಗಿ ಮಾಸ್ಕ್ ನ್ನು ಪರಿಸರ ಸ್ನೇಹಿಯಾಗಿ ಸಿದ್ಧಪಡಿಸುವ ಪ್ರಯತ್ನಕ್ಕೆ ಕೈಹಾಕಿದ ಯುವಕರು ಈಗ ಯಶಸ್ವಿಯಾಗಿದ್ದಾರೆ. ಸಂಪೂರ್ಣ ಹ್ಯಾಂಡ್ ಮೇಡ್ ಆಗಿರುವ  ಈ ಮಾಸ್ಕ್ ಗೆ ಚೈನೈ,ಗುಜರಾತ,ಮುಂಬೈ ಸೇರಿದಂತೆ ಹಲವೆಡೆಯಿಂದ ಬೇಡಿಕೆ ಇದ್ದು, ಅಂದಾಜು 2 ಲಕ್ಷ ಮಾಸ್ಕ್ ಉತ್ಪಾದನೆಗೆ ನಿತಿನ್ ವಾಸ್ ಹಾಗೂ ತಂಡ ಸಜ್ಜಾಗಿದೆ.

ಕೊರೋನಾ ಜೊತೆಗೆ ಬದುಕಬೇಕಾದ ಸಂದಿಗ್ಧದಲ್ಲಿರೋ ಮನುಷ್ಯನಿಗೆ ಇನ್ನಷ್ಟು ವರ್ಷ ಮಾಸ್ಕ್ ಬಳಕೆ ಅನಿವಾರ್ಯ. ಹೀಗಾಗಿ ಮುಂದೊಂದು ದಿನ ಮಾಸ್ಕ್ ನಿರ್ಮೂಲನೆಯೇ ದೊಡ್ಡ ಸಮಸ್ಯೆಯಾಗಿ ಕಾಡೋ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಆ ಸಮಸ್ಯೆಯನ್ನು ತಡೆಯಲು ಈ ಪರಿಸರ ಸ್ನೇಹಿ ಮಾಸ್ಕ್  ಉತ್ತರವಾಗಿದ್ದು, ಜನರು ಇಂಥ ಮಾಸ್ಕ್ ಬಳಕೆಗೆ ಮುಂಧಾಗೋ ಮೂಲಕ ಪರಿಸರ ರಕ್ಷಣೆಯ ಪ್ರಯತ್ನಕ್ಕೆ ಜೀವತುಂಬಬೇಕಿದೆ.

Spread the love
  • Related Posts

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಟೆಂಡರ್ ಕೂಪದ ಭ್ರಷ್ಟಾಚಾರವನ್ನು ಖಂಡಿಸಲು…

    Spread the love

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ ಕಾನರ್ಪ ಕಡಿರುದ್ಯಾವರ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿ ಸಭೆಯನ್ನು ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಪಣಿಕಲ್ ಹಾಗೂ…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 330 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 301 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 201 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 301 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 159 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 90 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ