![](https://kalanirnayanews.com/wp-content/uploads/2021/11/IMG-20211120-WA0058-1.jpg)
ದೊಡ್ಡಪತ್ರೆ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸಸ್ಯಕ್ಕೆ ಪಾಷಾಣ ಭೇಧಿ, ಕರ್ಪೂರವಳ್ಳಿ, ಸಾಂಬಾರು ಬಳ್ಳಿ, ಸಾಂಬ್ರಾಣಿ ಎಲೆ ಎಂದೂ ಕರೆಯುತ್ತಾರೆ. ಇದರ ಎಲೆಗಳು ದೊಡ್ಡದಾಗಿ ಮತ್ತು ದಪ್ಪವಾಗಿದ್ದು ಕಡು ಸುವಾಸನೆ ಹೊಂದಿರುತ್ತದೆ.
![doddapathre](https://i0.wp.com/saakshatv.com/wp-content/uploads/2021/03/images-2021-03-28T235552.796.jpeg?resize=300%2C169)
ಸಾಮಾನ್ಯವಾಗಿ ದೊಡ್ಡಪತ್ರೆಯನ್ನು ಜ್ವರ, ಶೀತ, ಕೆಮ್ಮುಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ.
ದೊಡ್ಡಪತ್ರೆ ಎಲೆಗಳನ್ನು ಜಜ್ಜಿ ರಸ ತೆಗೆದು ಅದನ್ನು ಜೇನಿನೊಂದಿಗೆ ಬೆರೆಸಿ ಕುಡಿಯುವುದರಿಂದ ಕಫ, ಬೇಧಿ ಕಡಿಮೆಯಾಗುತ್ತದೆ.
ಪದೇಪದೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಫ ಕೆಮ್ಮು ಶೀತಕ್ಕೆ 4 ರಿಂದ 5 ಸಾಂಬ್ರಾಣಿ ಎಲೆಗಳನ್ನು ಕೆಂಡದಲ್ಲಿ ಬಾಡಿಸಿ ಅದರ ರಸವನ್ನು ಹಿಂಡಿ ಜೇನಿನ ಜೊತೆ ಸೇರಿಸಿ ಕುಡಿಸಿದರೆ ಕೆಮ್ಮು, ಕಫ ಕಡಿಮೆಯಾಗುತ್ತದೆ. ಶೀತದಿಂದ ಮಕ್ಕಳಿಗೆ ಮಲಬದ್ಧತೆಯಾದರೆ ದೊಡ್ಡಪತ್ರೆ ಎಲೆಯ ರಸಕ್ಕೆ ಜೇನುತುಪ್ಪವನ್ನು ಸೇರಿಸಿ ಕುಡಿಸಬೇಕು.
![doddapathre](https://i1.wp.com/saakshatv.com/wp-content/uploads/2021/03/images-2021-03-28T235605.992.jpeg?resize=300%2C225)
ಚೇಳು ಕಡಿದ ಜಾಗಕ್ಕೆ ದೊಡ್ಡಪತ್ರೆ ರಸವನ್ನು ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.
ದೊಡ್ಡಪತ್ರೆ ಎಲೆಯ ಜೊತೆಗೆ ಉಪ್ಪನ್ನು ಸೇರಿಸಿ ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.
ತುರಿಕೆ, ಕಜ್ಜಿ ಅಥವಾ ಬೆವರುಸಾಲೆ ಬಿದ್ದರೆ, ಆ ಜಾಗಕ್ಕೆ ಹಸಿ ಸಾಂಬ್ರಾಣಿ ಎಲೆಗಳನ್ನು ಅರೆದು ಹಚ್ಚುವುದರಿಂದ ತುರಿಕೆ ಕಡಿಮೆಯಾಗುತ್ತದೆ.
ದೊಡ್ಡಪತ್ರೆ ಎಲೆಯಲ್ಲಿ ವಿಟಮಿನ್ ಎ ಹಾಗೂ ಸಿ ಹೇರಳವಾಗಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಔಷಧೀಯ ಗುಣಗಳನ್ನು ಹೊಂದಿರುವ ದೊಡ್ಡಪತ್ರೆಯ ಎಲೆಗಳಿಂದ ನಾನಾ ಖಾದ್ಯಗಳನ್ನು ಕೂಡ ಸಿದ್ಧಪಡಿಸಬಹುದಾಗಿದೆ.