ಕರಾವಳಿಯ ಹಳ್ಳಿ ಹಳ್ಳಿಗಳಲ್ಲಿ ನೆಟ್ ವರ್ಕ್ ಸಮಸ್ಯೆಯ ಕೂಗು ಬಲು ಜೋರು! ಆನ್ ಲೈನ್ ಕ್ಲಾಸ್ ಗೂ ತಟ್ಟಿದ ನೆಟ್ ವರ್ಕ್ ಬ್ಯುಸಿ ಸಮಸ್ಯೆ

ಕರಾವಳಿಯ ಎಲ್ಲೆಡೆ ಹೋದರು ಅಲ್ಲಲ್ಲಿ ಕಾಣಸಿಗುವುದೇ ಟವರ್ ಗಳ ರಾಶಿ ರಾಶಿ, ಆದರೆ ಇವೆಲ್ಲವೂ ಯಾರಿಗೂ ಸಮಯಕ್ಕೆ ಸರಿಯಾಗಿ ಬಳಕೆ ಮಾಡಲು ಸಾಧ್ಯವಾಗದಷ್ಟು ಕಠಿಣವಾಗಿದೆ.

ಇತ್ತೀಚೆಗಂತೂ ಆನ್ ಲೈನ್ ಕ್ಲಾಸ್ ಗಳು ನಡೆಯುತ್ತಿದ್ದು ಮಕ್ಕಳ ಪರದಾಟಕ್ಕೆ ಕೊನೆಯೇ ಇಲ್ಲದಂತಾಗಿದೆ. ಮೊಬೈಲ್ ನಲ್ಲಿ ಸಿಗ್ನಲ್ ತೋರಿಸಿದರು ನೆಟ್ ಸರಿಯಾಗಿ ಸಿಗದೇ ತೊಂದರೆ ಪಡುವವರ ಸಂಕಷ್ಟ ಅಷ್ಟಿಷ್ಟಲ್ಲ.

ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ಮೊಬೈಲ್ ನೆಟ್ ವರ್ಕ್ ಸೇರಿಸುವುದು ಸೂಕ್ತ:

ಮೂಲಭೂತ ಸೌಕರ್ಯದ ಕೊರತೆಯಲ್ಲಿ ಮೊಬೈಲ್ ನೆಟ್ ವರ್ಕ್ ನ್ನು ಸೇರಿಸಿದರೆ ಉತ್ತಮ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಮಾಡದೇ ಇರುವ ವ್ಯಕ್ತಿಗಳಿಲ್ಲ ಪ್ರತಿ ಕ್ಷಣಕ್ಷಣಕ್ಕೂ ಎಲ್ಲಾ ವಿಚಾರಗಳಿಗೂ ಮೊಬೈಲ್ ಬಳಕೆ ಕಡೆಗೆ ಜನತೆಯ ಒಲವು ಹೆಚ್ಚಾಗುತ್ತಿದ್ದು ಕುಡಿಯುವ ನೀರು, ರಸ್ತೆ ಸಂಪರ್ಕದಂತೆ ಮೂಲಭೂತ ಸೌಕರ್ಯಗಳ ಪಟ್ಟಿಯಲ್ಲಿ ಮೊಬೈಲ್ ನೆಟ್ ವರ್ಕ್ ಗಳನ್ನು ಸೇರಿಸುವ ಅನಿವಾರ್ಯತೆ ಇದೆ.

ಕಣಿವೆ ಪ್ರದೇಶ – ಘಾಟ್ ರಸ್ತೆಗಳಲ್ಲಿಯೂ ನೆಟ್ ವರ್ಕ್ ಗೆ ಬರ!

ಕರಾವಳಿಯನ್ನು ಸಂದಿಸುವ ಚಾರ್ಮಾಡಿ ಘಾಟ್, ಶಿರಾಡಿ ಘಾಟ್ ರಸ್ತೆಗಳಲ್ಲೂ ಹಲವಾರು ಕಿ.ಮೀ ವರೆಗೆ ನೆಟ್ ವರ್ಕ್ ಮಾಯವಾಗಿದೆ. ಈ ಸ್ಥಳದಲ್ಲಿ ಅಫಘಾತಗಳು ಅಥವಾ ವಾಹನಗಳು ಕೆಟ್ಟು ನಿಂತರೇ ಅಲ್ಲಿ ಆಗುವ ನರಕ ವೇದನೆಯನ್ನು ಹೇಳ ತೀರದು. ವಾಸ್ತವಿಕವಾಗಿ ಈ ಪ್ರದೇಶದಲ್ಲಿ ಕಾನೂನಿನ ತೊಡಕು ಇದ್ದರೂ ಇಂತಹ ಸೂಕ್ಷ್ಮ ಪ್ರದೇಶದಲ್ಲಿ ನೆಟ್ ವರ್ಕ್ ಅನಿವಾರ್ಯವಾಗಿ ಬೇಕಾಗುತ್ತದೆ.

ಹಣ ಕೊಟ್ಟು ನದಿ ದಾಟಿದ ಗಾದೆಯಂತಾಗಿದೆ ಇಂದಿನ ನೆಟ್ ವರ್ಕ್ ಪರಿಸ್ಥಿತಿ:

ಹೌದು ಇತ್ತೀಚಿನ ಕೆಲವೋಂದು ನೆಟ್ ವರ್ಕ್ ಕಂಪೆನಿಗಳ ನಿಯಮ ನಿಬಂಧನೆಗಳನ್ನು ಮೊಬೈಲ್ ಬಳಕೆದಾರರು ಸರಿಯಾಗಿ ಪಾಲನೆ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಇಲ್ಲವಾದಲ್ಲಿ ಕ್ಷಣ ಮಾತ್ರದಲ್ಲಿ ಸಂಪರ್ಕ ಕಡಿತವಾಗುತ್ತದೆ. ಪ್ರತಿ ತಿಂಗಳು ಮೂರುತಿಂಗಳು, ಆರು ತಿಂಗಳು, ವರ್ಷದ ಆಫರ್ ಗಳ ಮೇಲೆ ರಿಚಾರ್ಜ್ ಮಾಡಿಸಿ ಕನಿಷ್ಠ ಮಾತನಾಡಲು ಆಗದಂತಹ ಪರಿಸ್ಥಿತಿಗಳು ಬಹುತೇಕರ  ಅನುಭವಕ್ಕೆ ಬಂದಿರಲೂ ಬಹುದು. ಗ್ರಾಮೀಣ ಪರಿಸರದಲ್ಲಂತೂ ಶೇ.90 ರಷ್ಟು ಮಂದಿ ರಿಚಾರ್ಜ್ ಮಾಡಿ ಮೊಬೈಲ್ ಬಳಕೆ ಮಾಡಲಾಗದೆ ಕಂಗೆಟ್ಟಿರೋದಂತು ಸ್ಪಷ್ಟ.

ನೆಟ್ ವರ್ಕ್ ಸಮಸ್ಯೆಗಳಿಗೆ ಮುಕ್ತಿ ಎಂದು: ಹಲವು ದಿನಗಳಿಂದ ಬಿಗಡಾಯಿಸಿದ ಈ ನೆಟ್ ವರ್ಕ್ ಸಮಸ್ಯೆಗೆ ಶಾಶ್ವತ ಮುಕ್ತಿ ಯಾವಾಗ ಎಂಬುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಶೀಘ್ರದಲ್ಲೇ ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಕಾರ್ಯತಂತ್ರ ರೂಪಿಸುವಂತಾಗಲಿ.

Spread the love
  • Related Posts

    ಸಂಚಾರಿ ಸ್ಟೂಡಿಯೋ ಯೂಟ್ಯೂಬರ್ ಕಡಬ ಸಂತೋಷ್ ಪೋಲೀಸ್ ವಶಕ್ಕೆ

    ಬೆಂಗಳೂರು: ನ್ಯಾಯಾಲಯದ ಆದೇಶದ ಉಲಂಘನೆ ಹಿನ್ನೆಲೆಯಲ್ಲಿ ಕಡಬ ತಾಲೂಕಿನ ಸಂಚಾರಿ ಸ್ಟೂಡಿಯೋ ಯೂಟ್ಯೂಬ್ ಚಾನೆಲ್ ಮುಖ್ಯಸ್ಥ ಸಂತೋಷ್ ಕಡಬರವನ್ನು ಬೆಂಗಳೂರು ಪೋಲೀಸರು ಕಡಬದಿಂದ ವಶಕ್ಕೆ ಪಡೆದುಕೊಂಡ ಬಗ್ಗೆ ವರದಿಯಾಗಿದೆ. ಕೋರ್ಟ್ ಆದೇಶ ಉಲ್ಲಂಘನೆ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ಸಂಚಾರಿ ಸ್ಟುಡಿಯೋ…

    Spread the love

    ನಿಡ್ವಾಳದಲ್ಲಿ ಪಂಚಕಲ್ಯಾಣ ಮಹೋತ್ಸವ ಹಾಗೂ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಫೆ.18 ರಿಂದ 22ರವರೆಗೆ ವೈಭವದ ಧಾರ್ಮಿಕ ಕಾರ್ಯಕ್ರಮ

    ಪುದುವೆಟ್ಟು: ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಹಚ್ಚ ಹಸಿರು ಪ್ರಕೃತಿಯ ಮಡಿಲಿನಲ್ಲಿ ನೆಲೆಸಿರುವ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ, ನಿಡ್ವಾಳದಲ್ಲಿ ಫೆಬ್ರವರಿ 18ರಿಂದ 22ರವರೆಗೆ ಪಂಚಕಲ್ಯಾಣ ಮಹೋತ್ಸವ ಹಾಗೂ ಧಾಮ ಸಂಪ್ರೋಕ್ಷಣಾ…

    Spread the love

    You Missed

    ಸಂಚಾರಿ ಸ್ಟೂಡಿಯೋ ಯೂಟ್ಯೂಬರ್ ಕಡಬ ಸಂತೋಷ್ ಪೋಲೀಸ್ ವಶಕ್ಕೆ

    • By admin
    • February 18, 2026
    • 461 views
    ಸಂಚಾರಿ ಸ್ಟೂಡಿಯೋ ಯೂಟ್ಯೂಬರ್ ಕಡಬ ಸಂತೋಷ್  ಪೋಲೀಸ್ ವಶಕ್ಕೆ

    ನಿಡ್ವಾಳದಲ್ಲಿ ಪಂಚಕಲ್ಯಾಣ ಮಹೋತ್ಸವ ಹಾಗೂ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಫೆ.18 ರಿಂದ 22ರವರೆಗೆ ವೈಭವದ ಧಾರ್ಮಿಕ ಕಾರ್ಯಕ್ರಮ

    • By admin
    • February 16, 2026
    • 148 views
    ನಿಡ್ವಾಳದಲ್ಲಿ ಪಂಚಕಲ್ಯಾಣ ಮಹೋತ್ಸವ ಹಾಗೂ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ  ಫೆ.18 ರಿಂದ 22ರವರೆಗೆ ವೈಭವದ ಧಾರ್ಮಿಕ ಕಾರ್ಯಕ್ರಮ

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಡಾ.ಹೆಗ್ಗಡೆಯವರಿಂದ ಚಾಲನೆ

    • By admin
    • February 15, 2026
    • 65 views
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣಕ್ಕೆ ಡಾ.ಹೆಗ್ಗಡೆಯವರಿಂದ ಚಾಲನೆ

    ಅಜ್ಜಿಯ ತಿಥಿ ಕಾರ್ಯಕ್ರಮಕ್ಕೆ ಬಡಿಸಲು ಆಮೆಗಳ ಬೇಟೆ, ಆಮೆಗಳ ಸಹಿತ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

    • By admin
    • February 15, 2026
    • 89 views
    ಅಜ್ಜಿಯ ತಿಥಿ ಕಾರ್ಯಕ್ರಮಕ್ಕೆ ಬಡಿಸಲು ಆಮೆಗಳ ಬೇಟೆ, ಆಮೆಗಳ ಸಹಿತ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

    ಮುಂಡಾಜೆ ಮೈರಣಗುಡ್ಡೆಯಲ್ಲಿ ಕಾಣಿಸಿಕೊಂಡ ಬೆಂಕಿ

    • By admin
    • February 14, 2026
    • 34 views
    ಮುಂಡಾಜೆ ಮೈರಣಗುಡ್ಡೆಯಲ್ಲಿ  ಕಾಣಿಸಿಕೊಂಡ ಬೆಂಕಿ

    ಬೆಳ್ತಂಗಡಿಯ KAF ಕ್ರಿಯೇಟಿವ್ ಶಾಪ್ ನಲ್ಲಿ ಹಿಲಿಯಂ ಗ್ಯಾಸ್ ಬ್ಲಾಸ್ಟ್

    • By admin
    • February 14, 2026
    • 58 views
    ಬೆಳ್ತಂಗಡಿಯ KAF ಕ್ರಿಯೇಟಿವ್ ಶಾಪ್ ನಲ್ಲಿ  ಹಿಲಿಯಂ ಗ್ಯಾಸ್ ಬ್ಲಾಸ್ಟ್