ನಗುವಿನ ನಂದನವನ, ಮಗು ಮನಸ್ಸಿನ ವಾಲ್ಟರ್ ನಂದಳಿಕೆ

250 ರುಪಾಯಿ ಕೊರ‍್ದು ಸಿನಿಮಾ ತೂಪಿನೆಡ್ದ್ ಮೊಬೈಲುಡೇ ಕಾಮೆಡಿ ತೂವೊಲಿ ಎಂದು ಒಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು, ನನಗೆ ಇದು ಹೌದು ಎಂದು ಅನಿಸಿದ್ದು ಮೊನ್ನೆ ವಾಲ್ಟರ್ ನಂದಳಿಕೆ ಅವರ ಪ್ರೆವೇಟ್ ಚಾಲೆಂಜ್ ನಲ್ಲಿ ಬಸ್ ಕಂಡಕ್ಟರ್ ಜತೆಗಿನ ಸಂದರ್ಶನ.

ನನ್ನ ಮೊಬೈಲ್ ನ ಸ್ಕ್ರೀನ್ ನಲ್ಲಿ ಆಗಾಗ ಬರುವ ನಂದಳಿಕೆ- ಬೋಳಾರ್ ಕಾಮಿಡಿ ಸೀರಿಯಲ್‌ಗಳನ್ನುನೋಡಿ ಖುಷಿ ಪಡುವುದುಂಟು.

ಮೊನ್ನೆಯಂತೂ ಬೋಳಾರ್ ಬಸ್ ಕಂಡಕ್ಟರ್ ಪಾತ್ರದಲ್ಲಿ ಕಾಮಿಡಿ ಜತೆ ವಾಸ್ತವವನ್ನು ಬಿಚ್ಚಿಡುವ ಕಾಮಿಡಿ.
ಅದಕ್ಕೆ ಪೂರಕವಾಗಿ ಸಂದರ್ಶಿಸುವ ವಾಲ್ಟರ್ ಅವರ ಮುಗ್ಧತೆಯ ಪ್ರಶ್ನೆಗಳು… ಈ ಜೋಡಿಯ ಮೋಡಿಯನ್ನು ಕಂಡಾಗ ಇದೊಂದು ವರ್ತ್ ಪ್ರೋಗ್ರಾಂ ( ಅಪರೂಪದ ಅಮೂಲ್ಯ ಕಾರ್ಯಕ್ರಮ) ಎಂದೆಣಿಸಿದ್ದು ಸುಳ್ಳಲ್ಲ.
ಒಂದು ಎಪಿಸೋಡ್ ಗೆಎಷ್ಟೊಂದು ಅಧ್ಯಯನ, ತಯಾರಿ?! ಅದನ್ನು ಕಾಮಿಡಿಗೆ ಪರಿವರ್ತಿಸುವ ಚಾಕಚಕ್ಯತೆ, ಎಲ್ಲೆ ಮೀರದ ಪ್ರಸ್ತುತಿ… ಎಲ್ಲವೂ ಒಂದಕ್ಕೊಂದು ಸರಿ ಮಿಗಿಲು.

ಎರಡು ದಶಕಗಳಿಂದ ನಾನು ವಾಲ್ಟರ್ ಅವರನ್ನು ಗಮನಿಸುತ್ತಿದ್ದೇನೆ. ಸರ್ವರ ಜತೆ ಸಮಭಾವ. ಪಕ್ಷಪಾತ ಧೋರಣೆ ಇಲ್ಲದೆ ಸಮಚಿತ್ತವಾಗಿರುವ ವಾಲ್ಟರ್ ನಿಗರ್ವಿ. ಒಂದೆರಡು ಬಾರಿ ವೈಯಕ್ತಿಕವಾಗಿ ಅಭಿನಂದಿಸಿರಬಹುದು. ಅವರು ಮಾಡಿದ ಸಾಧನೆಗೆ ಹಲವು ಬಾರಿ ಅಭಿನಂದಿಸಬೇಕಿತ್ರು. ಆದರೇನು ನಾವು ಹೇಳಿ ಕೇಳಿ ಪತ್ರಕರ್ತರು ನಮ್ಮ ಕಣ್ಣಿಗೆ ನಮ್ಮವರೇ ಆದ ಪತ್ರಕರ್ತರು ಬೀಳುವುದೇ ಇಲ್ಲ. ಬಿದ್ದರೂ ಬೇಕೆಂದೇ ಗಮನಿಸುವುದಿಲ್ಲ.

ಸಾಧನೆ ಮಾಡಿದರೂ “ಅವ್ ದಾದ ಮಲ್ಲ ಕುಂಬುಡನಾ” ಎಂದು ಉದ್ದೇಶಪೂರ್ವಕವಾಗಿ ಉಪೇಕ್ಷಿಸುವುದೇ ಹೆಚ್ಚು!.

ಆದರೆ ಈ ಬಾರಿ ಅವರ ಕಾಮಿಡಿ ಶೋ ನನ್ನ ಮನಸ್ಸನ್ನು ಎಷ್ಟು ಶುಭ್ರಗೊಳಿಸಿತು ಎಂದರೆ ಅಭಿನಂದಿಸಲೇ ಬೇಕು ಎಂದು ಹಠ ಹಿಡಿದು ಮೊದಲ ಬಾರಿಗೆ ತುಸು ದೀರ್ಘವಾಗಿಯೇ ಬರೆದು ಅಭಿನಂದಿಸಿದ್ದೇನೆ, (ಬಾಕಿ ಎಲ್ಲ ಸೇರಿಸಿ).

ಪಿಂಗಾರದ ರೇಮಂಡ್ ತಾಕೊಡೆ ಕಾರ್ಕಳದಲ್ಲಿ ಸಿಕ್ಕಾಗ ದಾಯ್ಜಿದುಬೈಯ ಕಾರ್ಕಳದ ವರದಿಗಾರ ಎಂದು 2002ರಲ್ಲಿ ಹೇಳಿದ ನೆನಪು. ಆಗ ಮೊದಲ ಬಾರಿ ವಾಲ್ಟರ್ ಅವರ ಹೆಸರು ಕೇಳಿದೆ. ನಾನಾಗ ಕಾರ್ಕಳದಲ್ಲಿ ವಿಜಯಕರ್ನಾಟಕ ವರದಿಗಾರನಾಗಿದ್ದೆ.

ದೂರದ ದುಬೈಯತ್ತ..

ಕರಾವಳಿಯ ಎಲ್ಲ ಹುಡುಗರಂತೆ ವಾಲ್ಟರ್ ಕೂಡಾ ಉದ್ಯೋಗ ನಿಮಿತ್ತ ದುಬೈಗೆ ಹೋಗಿದ್ದಾಗ “ನಾನು ವೆಬ್‌ಸೈಟ್ ಮಾಡ್ತಾ ಇದ್ದೇನೆ” ಎಂದು 2000ದಲ್ಲಿ ಗೆಳೆಯರಿಗೆ ಎಪ್ರಿಲ್ ಫೂಲ್ ಇಮೇಲ್ ಮಾಡಿದ್ರಂತೆ !
ಗೆಳೆಯರು ಸಹಜ ಎಂದು ವಿಚಾರಿಸತೊಡಗಿದಾಗ ನಿಜವಾಗಿಯೂ ವೆಬ್‌ಸೈಟ್ ಮಾಡುವ ಯೋಚನೆ ಬಂದು ಆ ಬಗ್ಗೆ ಅಧ್ಯಯನ ಮಾಡಿ ದಾಯ್ಜಿದುಬೈ ಮಾಡಿದರು.
ಬಳಿಕ “ದಾಯ್ಜಿವರ್ಲ್ಡ್ ವೆಬ್‌ಸೈಟ್” ಮೊತ್ತ ಮೊದಲ ಬಾರಿಗೆ ಲಕ್ಷ ಲಕ್ಷ ಹಿಟ್ಸ್ ಪಡೆದ ಕರಾವಳಿಯ ವೆಬ್‌ಸೈಟ್.
ಇದೊಂದು ಲಾಭದಾಯಕ ಉದ್ಯಮ ಎನ್ನುವುದನ್ನು ಕರಾವಳಿಯಲ್ಲಿ ಮಾತ್ರವಲ್ಲ ರಾಜ್ಯದಲ್ಲೂ ತೋರಿಸಿಕೊಟ್ಟಿತು.

ದಾಯ್ಜಿವರ್ಲ್ಡ್24×7 ವಾಹಿನಿಯಂತೂ ಕರಾವಳಿಯಲ್ಲಿ ಮನೆ ಮಾತು. ಲಾಕ್‌ಡೌನ್‌ನಲ್ಲಿ ಎಲ್ಲರೂ ಅಧಃಪತನದತ್ತ ಸಾಗುತ್ತಿದ್ದಾಗ ಫೀನಿಕ್ಸ್ ನಂತೆ ಮೇಲೆದ್ದು ಪ್ರತಿ ಸೋಲು- ಸಮಸ್ಯೆ ಒಂದು ಅವಕಾಶ ಎಂದು ಭಾವಿಸಿ, ಅದನ್ನು ಸವಾಲಿನಂತೆ ಸ್ವೀಕರಿಸಿ ಕೊರೋನ ಗೆಲ್ಲೋಣ ಎಂಬ ಕಾರ್ಯಕ್ರಮದ ಮೂಲಕ ಕರಾವಳಿ ಅಮೂಲ್ಯ ಪ್ರತಿಭೆಗಳನ್ನು ಟಿವಿಯ ಮುಂದೆ ತಂದು ಕರಾವಳಿಗರ ಮನ ತಣಿಸಿ, ಕರಾವಳಿಯಲ್ಲಿ ಮನೆ ಮಾತಾದರು.

ಕೊಂಕಣಿ- ತುಳು ಕಾರ್ಯಕ್ರಮ, ಧರ್ಮಗುರುಗಳ ಸಂದರ್ಶನ, ಯತಿ ಶ್ರೇಷ್ಠರು, ಪಬ್ಲಿಕ್ ಚಾಲೆಂಜ್ ಹೀಗೆ ಅನೇಕ ಜನ ಮೆಚ್ಚುವ ಕಾರ್ಯಕ್ರಮಗಳು.
ಅದರಲ್ಲೂ ಕಾಮಿಡಿ ಶೋ ಪ್ರೈವೇಟ್ ಚಾಲೆಂಜ್ ಜಾಲತಾಣಗಳಲ್ಲಿಯೂ ಮಿಲಿಯಗಟ್ಟಲೆ ವೀವ್ಸ್ ಪಡೆಯುತ್ತಿವೆ.

ಖುಷಿ ಎಂದರೆ ವಾಲ್ಟರ್ ಅವರ ಪಬ್ಲಿಕ್ ಚಾಲೆಂಜ್ ಸೀರೀಸ್ ನಲ್ಲಿ ಅವರ ಒತ್ತಾಯದ ಮೇರೆಗೆ 7 ವರ್ಷಗಳ ಹಿಂದೆ ನಾನು ಕನ್ನಡಪ್ರಭದಲ್ಲಿದ್ದಾಗ ಅತಿಥಿ ಆಂಕರ್ ಆಗಿ ಪದಾರ್ಪಣೆ ಮಾಡಿ ಒಂದು ಎಪಿಸೋಡ್ ಮಾಡಿರುವುದು ಮರೆಯಲಾಗದ ನೆನಪು.

ಸೇವೆ:
ಇವರ ಚಾರಿಟಿ ಸಂಸ್ಥೆ ದಾನಿಗಳ ಮತ್ತು ಫಲಾನುಭವಿಗಳ ಮಧ್ಯವರ್ತಿಯಾಗಿ ಇದುವರೆಗೆ 20 ಕೋಟಿ ರು. ಬಡ- ಜನ ಸಾಮಾನ್ಯರ ಸೇವೆಗೆ ಒದಗಿಸಿರುವುದು ಇವರ ಸೇವಾ ಮನೋಭಾವಕ್ಕೆ ಹಿಡಿದ ಕನ್ನಡಿ.

ಮಾನವೀಯ ವರದಿಗಳಿಗೆ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ರು. ನೆರವು ಬಂದಿರೋದನ್ನ ನಾನು ನೋಡಿದ್ದೇನೆ.

ನನ್ನ ಕಾರ್ಕಳ, I mean ನಮ್ಮ ಕಾರ್ಕಳದ ವಾಲ್ಟರ್ ನಂದಳಿಕೆ- ವಿಲ್ಮಾ ದಂಪತಿಗೆ ಮೂವರು ಮಕ್ಕಳು.

ಕರಾವಳಿ- ವಿಶ್ವ ಕೊಂಕಣಿ, ತುಳು, ಕನ್ನಡಿಗರ ಮನ ಗೆದ್ದಿರುವ ವಾಲ್ಟರ್ ನಂದಳಿಕೆ ಅವರಿಂದ ಸಮಾಜಕ್ಕೆ ಇನ್ನಷ್ಟು ಕೊಡುಗೆ ಬರಲಿ.

✍🏻 JITENDRA Kundeshwara
9945666324
kundeshwara@gmail.com

Spread the love
  • Related Posts

    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸರ್ಕಾರವು ರಾಜ್ಯದ ವಿವಿಧ ಭಾಗಗಳಲ್ಲಿ ನೂತನ 12 ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಸಾರ್ವಜನಿಕರ ಭದ್ರತೆ, ಅಪರಾಧ ನಿಯಂತ್ರಣ ಹಾಗೂ ಪೊಲೀಸ್ ಸೇವೆಗಳನ್ನು ಜನರಿಗೆ ಇನ್ನಷ್ಟು ಸಮೀಪಕ್ಕೆ ತಲುಪಿಸಲು ಈ ಕ್ರಮ…

    Spread the love

    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    ಮುಂಬೈ: ಐಸಿಸಿ ಟಿ–20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸಮಗ್ರ ಆಟದ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ…

    Spread the love

    You Missed

    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    • By admin
    • March 6, 2026
    • 8 views
    ದಕ್ಷಿಣಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ 12ನೂತನ ಪೋಲೀಸ್ ಠಾಣೆಗಳ ಸ್ಥಾಪನೆಗೆ ಸರ್ಕಾರದ ನಿರ್ಧಾರ

    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    • By admin
    • March 5, 2026
    • 14 views
    ಇಂಗ್ಲೆಂಡ್ ವಿರುದ್ಧ ಗೆದ್ದು ಫೈನಲ್‌ಗೆ ಭಾರತ ಪ್ರವೇಶ

    ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ

    • By admin
    • March 5, 2026
    • 39 views
    ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಂದ ಶಾಸಕ ಹರೀಶ್ ಪೂಂಜಾ ರವರ ನಿವಾಸ ಮಿಥಿಲಾಗೆ ಭೇಟಿ

    ಬೆಳ್ತಂಗಡಿ : ಕಡಿರುದ್ಯಾವರ ಅಕ್ರಮ ಮರಳು ಸಾಗಾಟಕ್ಕೆ ಯತ್ನ, ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

    • By admin
    • March 5, 2026
    • 52 views
    ಬೆಳ್ತಂಗಡಿ : ಕಡಿರುದ್ಯಾವರ ಅಕ್ರಮ ಮರಳು ಸಾಗಾಟಕ್ಕೆ ಯತ್ನ, ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

    ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ಲೋಕಾರ್ಪಣೆ, ಊರಿನ ಧಾರ್ಮಿಕ ಕ್ಷೇತ್ರಗಳನ್ನು ನೋಡಿದಾಗ ಊರಿನ ಸ್ಥಿತಿಯನ್ನು ಅರಿಯಬಹುದು: ಡಾ.ಹೆಗ್ಗಡೆ

    • By admin
    • March 5, 2026
    • 23 views
    ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಿಜಯಗೋಪುರ ಲೋಕಾರ್ಪಣೆ,  ಊರಿನ ಧಾರ್ಮಿಕ ಕ್ಷೇತ್ರಗಳನ್ನು ನೋಡಿದಾಗ ಊರಿನ ಸ್ಥಿತಿಯನ್ನು ಅರಿಯಬಹುದು: ಡಾ.ಹೆಗ್ಗಡೆ

    ರಾಜಸ್ಥಾನದಲ್ಲಿ ಅಖಿಲ ಭಾರತ ಮಟ್ಟದ ಬೈಠಕ್

    • By admin
    • March 5, 2026
    • 17 views
    ರಾಜಸ್ಥಾನದಲ್ಲಿ ಅಖಿಲ ಭಾರತ ಮಟ್ಟದ ಬೈಠಕ್