![](https://kalanirnayanews.com/wp-content/uploads/2022/08/IMG-20220808-WA0007-1024x682-1-1.jpg)
ಮಂಗಳೂರು: ಅಮೇರಿಕಾದ ಮಿಚಿಗನ್ನಲ್ಲಿ ಜುಲೈ 30 ರಿಂದ ಆಗಸ್ಟ್ 6 ರವರೆಗೆ ನಡೆದಿರುವ ಅಂತರರಾಷ್ಟ್ರೀಯ ಮಟ್ಟದ ಒಲಂಪಿಕ್ಸ್ ಯುನಿಫೈಡ್ ಫುಟ್ಬಾಲ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯದಿಂದ ಲಯನ್ಸ್ ವಿಶೇಷ ಶಾಲೆ ಸುರತ್ಕಲ್ ನ ವಿಶೇಷ ವಿದ್ಯಾರ್ಥಿಯಾದ ಲಿಖಿತ ಹರೀಶ್ ಮತ್ತು ಪಾರ್ಟ್ನರ್ ಬೆಳಗಾವಿಯ ಧನಶ್ರೀ ಸದಾನಂದ ಇವರು ಭಾರತ ತಂಡವನ್ನು ಪ್ರತಿನಿಧಿಸಿರುತ್ತಾರೆ.
![](https://103.180.45.14/kalanirnaya1/wp-content/uploads/2022/08/IMG-20220808-WA0011-1.jpg)
ಅಮೇರಿಕಾದ ಅಂತರಾಷ್ಟ್ರೀಯ ಯುನಿಫೈಡ್ ಫುಟ್ಬಾಲ್ ಕ್ರೀಡೆಯಲ್ಲಿ ಅನೇಕ ದೇಶಗಳು ಭಾಗವಹಿಸಿದ್ದವು. ಇದರಲ್ಲಿ ಭಾರತ ತೃತೀಯ ಸ್ಥಾನವನ್ನು ತಮ್ಮದಾಗಿಸಿ ಕಂಚಿನ ಪದಕವನ್ನು ತಮ್ಮ ಮುಡಿಗೇರಿಸಿದ್ದಾರೆ ಎಂಬುದು ನಮ್ಮ ದೇಶದ ಹೆಮ್ಮೆಯ ವಿಷಯವಾಗಿದೆ.