ಪಿಎಫ್​​ ಖಾತೆ​​ಯಿಂದ ಅನಗತ್ಯವಾಗಿ ಹಣ ತೆಗೆದು ಕೈ ಸುಟ್ಟುಕೊಳ್ಳಬೇಡಿ; 1 ಲಕ್ಷ ರೂ.ವಿತ್​ಡ್ರಾ ಮಾಡಿದರೆ 11 ಲಕ್ಷ ರೂ. ನಷ್ಟ ಗ್ಯಾರಂಟಿ !

ತಿಂಗಳ ವೇತನದಿಂದ ಭವಿಷ್ಯ ನಿಧಿಗಾಗಿ (PF)ಹಣ ಕಡಿತಗೊಳ್ಳುತ್ತಿದ್ದರೆ ಅದನ್ನು ಸುಮ್ಮನೆ ವಿತ್​ ಡ್ರಾ ಮಾಡಬಾರದು. ತೀರ ಅಗತ್ಯವಿದ್ದರೆ ಮಾತ್ರ ಪಿಎಫ್​ ಅಕೌಂಟ್​​ನಿಂದ ಹಣ ತೆಗೆಯಬೇಕು. ಆದರೆ ಅದೆಷ್ಟೋ ಜನರು, ಸುಮ್ಮನೆ ಹಣವನ್ನು ತೆಗೆದು ಖರ್ಚು ಮಾಡಿಕೊಳ್ಳುತ್ತಾರೆ. ಇದು ಒಳ್ಳೆಯದಲ್ಲ. ಪಿಎಫ್​ ನಿಮ್ಮ ಆಪತ್ಕಾಲಕ್ಕಾಗುವ ಉಳಿತಾಯದ ಹಣ ಆಗಿರುತ್ತದೆ. ಪ್ರತಿ ತಿಂಗಳೂ ಆ ಖಾತೆಯಲ್ಲಿ ಹೆಚ್ಚೆಚ್ಚು ಹಣ ಸಂಗ್ರಹವಾಗುತ್ತದೆ. ಹಾಗೇ ನಿಮ್ಮ ಪಿಎಫ್ ಠೇವಣಿ ಹಣಕ್ಕೆ ಒಳ್ಳೆಯ ಬಡ್ಡಿಯೂ ಸಿಗುತ್ತದೆ.

ಪಿಎಫ್​ ಹಣವನ್ನು ಅನಗತ್ಯವಾಗಿ ತೆಗೆಯಬಾರದು. ತೀರ ಅನಿವಾರ್ಯ ಸಂದರ್ಭವಿದ್ದರೆ ಮಾತ್ರ ವಿತ್​ ಡ್ರಾ ಮಾಡಿ, ಅದಿಲ್ಲದಿದ್ದರೆ ನಿಮ್ಮ ನಿವೃತ್ತಿಯವರೆಗೂ ಉಳಿಸಿಕೊಳ್ಳುವುದು ಒಳಿತು.

ನಿವೃತ್ತಿಗೆ ಮೊದಲೇ ಪಿಎಫ್ ಹಣ ತೆಗೆದರೆ ಖಂಡಿತ ನಿಮಗೆ ದೊಡ್ಡಪ್ರಮಾಣದಲ್ಲಿ ನಷ್ಟವಾಗುತ್ತದೆ. ಉದಾಹರಣೆಗೆ, ನೀವು ನಿವೃತ್ತಿಗೂ ಮೊದಲು 1 ಲಕ್ಷ ರೂಪಾಯಿ ವಿತ್​ ಡ್ರಾ ಮಾಡಿದಿರಿ ಎಂದಾದರೆ, ನಿಮಗೆ 11 ಲಕ್ಷ ರೂಪಾಯಿ ನಷ್ಟ ಆಗುತ್ತದೆ. ಅರೆ ! ಇದು ಹೇಗೆ ಸಾಧ್ಯ? 1 ಲಕ್ಷ ರೂ. ವಿತ್​ಡ್ರಾ ಮಾಡಿದರೆ 11 ಲಕ್ಷ ರೂ. ನಷ್ಟ ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಅದಕ್ಕೆ ಇಲ್ಲಿದೆ ನೋಡಿ ಉತ್ತರ..

ನೀವು ನಿವೃತ್ತರಾಗಲು ಇನ್ನೂ 30ವರ್ಷವಿದೆ ಎಂದಿಟ್ಟುಕೊಳ್ಳೋಣ. ಈಗ ನೀವೇನಾದರೂ 1 ಲಕ್ಷ ರೂ.ವಿತ್​ ಡ್ರಾ ಮಾಡಿದರೆ ನೀವು 11.55 ಲಕ್ಷ ರೂ.ಕಳೆದುಕೊಂಡಂತೆ ಎನ್ನುತ್ತಾರೆ ನಿವೃತ್ತ ಇಪಿಎಫ್​ಒ ನಿವೃತ್ತ ಸಹಾಯಕ ಆಯುಕ್ತ ಎ.ಕೆ. ಶುಕ್ಲಾ. ಒಮ್ಮೆ ಈ ಒಂದು ಲಕ್ಷ ರೂಪಾಯಿ ನಿಮ್ಮ ಪಿಎಫ್​ ಅಕೌಂಟ್​​ನಲ್ಲೇ ಇದ್ದರೆ ಅದಕ್ಕೆ ಬಡ್ಡಿ ಸೇರಿ, 30 ವರ್ಷ, ಅಂದರೆ ನಿಮ್ಮ ನಿವೃತ್ತಿ ಹೊತ್ತಿಗೆ 11.55 ಲಕ್ಷ ರೂ.ಆಗಿರುತ್ತದೆ. ಸದ್ಯ ಪಿಎಫ್​ ಹಣಕ್ಕೆ ಶೇ.8.5ರಷ್ಟು ಬಡ್ಡಿದರ ಇದೆ. ಉಳಿದೆಲ್ಲ ಸಣ್ಣ ಉಳಿತಾಯ ಯೋಜನೆಗಳಲ್ಲಿ, ಪಿಎಫ್​ಗೆ ಇರುವಷ್ಟು ಬಡ್ಡಿದರದ ಪ್ರಮಾಣ ಇನ್ಯಾವುದಕ್ಕೂ ಇಲ್ಲ. ಹೀಗಿರುವಾಗ ಪಿಎಫ್​ನಲ್ಲಿ ನೀವು ಹೆಚ್ಚೆಚ್ಚು ಹಣ ಸಂಗ್ರಹಿಸಿದಂತೆ ಸಹಜವಾಗಿ ಅದರ ಮೊತ್ತವೂ ಜಾಸ್ತಿಯಾಗುತ್ತ ಹೋಗುತ್ತದೆ.

ನಿವೃತ್ತಿಗೆ 20ವರ್ಷವಿದ್ದಾಗ 50 ಸಾವಿರ ತೆಗೆದರೆ ಏನಾಗುತ್ತದೆ? ನಿವೃತ್ತಿಗೆ ಮೊದಲು ಎಷ್ಟೇ ಹಣ ತೆಗೆದರೂ ದೊಡ್ಡ ಪ್ರಮಾಣದ ನಷ್ಟ ಆಗುವುದರಲ್ಲಿ ಸಂದೇಹವಿಲ್ಲ. ಹಾಗೇ, ನಿವೃತ್ತಿಗೆ 20 ವರ್ಷ ಬಾಕಿ ಇದ್ದಾಗ ಒಮ್ಮೆ ನಿಮ್ಮ ಪಿಎಫ್​ ಅಕೌಂಟ್​ನಿಂದ 50 ಸಾವಿರ ರೂ. ವಿತ್​ಡ್ರಾ ಮಾಡಿದಿರಿ ಎಂದಾದರೆ ಏನಿಲ್ಲವೆಂದರೂ 2 ಲಕ್ಷದ 5 ಸಾವಿರ ರೂ.ನಷ್ಟ ಅನುಭವಿಸುತ್ತೀರಿ. ಹಾಗೇ 1 ಲಕ್ಷ ರೂ.ತೆಗೆದರೆ 5.11 ಲಕ್ಷ ರೂ., 2 ಲಕ್ಷ ರೂ.ಕ್ಕೆ 10.22 ಲಕ್ಷ ರೂ. ಮತ್ತು 3 ಲಕ್ಷಕ್ಕೆ 15.33 ಲಕ್ಷ ರೂ. ನಷ್ಟ ಉಂಟಾಗುವುದು ಗ್ಯಾರಂಟಿ. ಇದೇ ಕಾರಣಕ್ಕೆ ಪಿಎಫ್ ಹಣವನ್ನು ನಿವೃತ್ತಿಗೆ ಮೊದಲು ಅನಗತ್ಯವಾಗಿ ತೆಗೆಯುವ ಮೊದಲು ಒಮ್ಮೆ ಯೋಚಿಸುವುದು ಒಳ್ಳೆಯದು.

Spread the love
  • Related Posts

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ನವದೆಹಲಿ: ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಮೂವರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರನ್ನು ನವದೆಹಲಿಗೆ ಕರೆಸಿ, ಅವರ ಜತೆಯಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ…

    Spread the love

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಧರ್ಮಸ್ಥಳ: ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರಕ್ಕೆ ಮುಂಚಾನ ಶ್ರೀ ಮಹಾದೇವಿಕೃಪಾ ಮನೆಯ ಸುಕನ್ಯಾ ಮತ್ತು ಜಯರಾಮ ರಾವ್ ಮತ್ತು ಮಕ್ಕಳು ಸಮರ್ಪಿಸಲಿರುವ ನೂತನ ಶಿಲಾಮಯ ಧ್ವಜಸ್ಥಂಭವು ಕಾರ್ಕಳದಿಂದ ಹೊರಟು ಬೆಳ್ತಂಗಡಿ ಮಾರ್ಗವಾಗಿ ಡಿ.4ರಂದು ಧರ್ಮಸ್ಥಳ ತಲುಪಿ ಧರ್ಮಸ್ಥಳ ಅಣ್ಣಪ್ಪ ಬೆಟ್ಟದಲ್ಲಿ…

    Spread the love

    You Missed

    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    • By admin
    • December 8, 2025
    • 16 views
    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    • By admin
    • December 4, 2025
    • 34 views
    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    • By admin
    • December 4, 2025
    • 53 views
    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    • By admin
    • December 4, 2025
    • 35 views
    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    • By admin
    • December 4, 2025
    • 42 views
    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ

    • By admin
    • December 2, 2025
    • 71 views
    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ