🙏 ಪುಟ್ಟ ಶಿವಾನಿಯ ಚಿಕಿತ್ಸೆಗೆ ನೆರವಾಗಿ
ನಿಮ್ಮ ಸಣ್ಣ ಸಹಾಯವೂ ಒಂದು ಜೀವ ಉಳಿಸಬಹುದು.
“ಸಹಾಯಹಸ್ತ ನೀಡಲು ಇಲ್ಲಿ ಕ್ಲಿಕ್ ಮಾಡಿ”
upi://pay?pa=107044785044457@cnrb&pn=PADMARAJA&mc=5198&tr=1234567887654321&am=0&mam=0&cu=INR
ಬೆಳ್ತಂಗಡಿ, ಆ. 9: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನಿವಾಸಿಗಳಾದ ಪದ್ಮರಾಜ್ ಹಾಗೂ ಚಂದ್ರಾವತಿ ದಂಪತಿಗಳ ಕೇವಲ 2 ತಿಂಗಳ ಹೆಣ್ಣು ಮಗು ಶಿವಾನಿ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಜನಿಸಿದ ಕೆಲವೇ ದಿನಗಳಲ್ಲಿ ಮಗುವಿನ ಆರೋಗ್ಯದಲ್ಲಿ ತೀವ್ರ ಸಮಸ್ಯೆಗಳು ಕಾಣಿಸಿಕೊಂಡಿದ್ದು, ವೈದ್ಯರ ಸಲಹೆಯಂತೆ ತುರ್ತು ಚಿಕಿತ್ಸೆ ಆರಂಭಿಸಲಾಗಿದೆ. ಮಗುವಿಗೆ ನಿರಂತರ ವೈದ್ಯಕೀಯ ಆರೈಕೆ, ವಿಶೇಷ ಚಿಕಿತ್ಸಾ ವಿಧಾನಗಳು ಹಾಗೂ ಹಲವು ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದ್ದು, ಇದಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ. ಇದರಿಂದ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಸಾಮಾನ್ಯ ಕುಟುಂಬಕ್ಕೆ ಸೇರಿದ ಪದ್ಮರಾಜ್–ಚಂದ್ರಾವತಿ ದಂಪತಿಗಳಿಗೆ ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಅತ್ಯಂತ ಕಷ್ಟಕರವಾಗಿದ್ದು, ತಮ್ಮ ಮಗುವಿನ ಜೀವ ಉಳಿಸಲು ಸಮಾಜದ ಸಹೃದಯರು, ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ನೆರವಿಗಾಗಿ ಮನವಿ ಮಾಡಿದ್ದಾರೆ.
“ಒಂದು ಪುಟ್ಟ ಜೀವವನ್ನು ಉಳಿಸಲು ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ” ಎಂದು ಕುಟುಂಬದವರು ಕೋರಿದ್ದಾರೆ. ಸಣ್ಣ ಮೊತ್ತದ ಸಹಾಯವೂ ಮಗುವಿನ ಚಿಕಿತ್ಸೆಗೆ ದೊಡ್ಡ ಬೆಂಬಲವಾಗಲಿದೆ.
ಬ್ಯಾಂಕ್ ಖಾತೆ ವಿವರಗಳು
ಖಾತೆದಾರರ ಹೆಸರು: Padmaraj
ಖಾತೆ ಸಂಖ್ಯೆ: 01982200044457
IFSC: CNRB0010198
ಸಂಪರ್ಕ ಸಂಖ್ಯೆ
📞 7899136055
📞 9036090276

ಸಹಾಯ ಮಾಡಲು ಇಚ್ಛಿಸುವವರು ಪೋಸ್ಟರ್ನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ ಅಥವಾ ಮೇಲಿನ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಬಹುದು.
ಮಾನವೀಯತೆಯ ಕೈಹಿಡಿಯೋಣ… ಒಂದು ಪುಟ್ಟ ಜೀವ ಉಳಿಸಲು ನಮ್ಮ ಕೈಲಾದ ನೆರವು ನೀಡೋಣ.





