ರಾಜ್ಯ ಬಿ.ಜೆ.ಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ, ಬಿಜೆಪಿ ರಾಜ್ಯ ವಕ್ತಾರರಾಗಿ ಕ್ಯಾ.ಗಣೇಶ್ ಕಾರ್ಣಿಕ್ ನೇಮಕ

ಬೆಂಗಳೂರು : ಬಿಜೆಪಿ ರಾಜ್ಯ ವಕ್ತಾರರಾಗಿ ಕ್ಯಾ.ಗಣೇಶ್ ಕಾರ್ಣಿಕ್ ರವರನ್ನು ಹಾಗೂ ಬಿಜೆಪಿ ಯುವ ಮೋರ್ಚಾ ಗಾದಿಗೆ ಡಾ.ಸಂದೀಪ್ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಭಾರತೀಯ ಜನತಾ ಪಾರ್ಟಿಯಿಂದ ರಾಜ್ಯ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ವಿ ವೈ ವಿಜಯೇಂದ್ರ, ಅರವಿಂದ್ ಲಿಂಬಾವಳಿ, ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕರಿಗೆ ಸ್ಥಾನವನ್ನು ನೀಡಲಾಗಿದೆ.

READ ALSO

ಈ ಕುರಿತಂತೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷರ ಪಟ್ಟಿ ಬಿಡುಗಡೆ

  • ಅರವಿಂದ ಲಿಂಬಾವಳಿ.
  • ನಿರ್ಮಲ್‌ಕುಮಾರ್ ಸುರಾನಾ.
  • ಶೋಭಾ ಕರಂದ್ಲಾಜೆ.
  • ತೇಜಸ್ವಿನಿ ಅನಂತ್‌ಕುಮಾರ್.
  • ಪ್ರತಾಪ್ ಸಿಂಹ.
  • ಎಂ.ಬಿ.ನಂದೀಶ್.
  • ಮಾಲೀಕಯ್ಯ ಗುತ್ತೇದಾರ್.
  • ಎಂ.ಶಂಕರಪ್ಪ.
  • ಎಂ.ರಾಜೇಂದ್ರ.
  • ವೈ.ವಿಜಯೇಂದ್ರ

ರಾಜ್ಯ ಪ್ರಧಾನ ಕಾರ್ಯದರ್ಶಿಗಳು.

  • ಎನ್‌.ರವಿಕುಮಾರ್. – ದಾವಣಗೆರೆ.
  • ಸಿದ್ದರಾಜು- ಮೈಸೂರು ಗ್ರಾಮಾಂತರ.
  • ಅಶ್ವತ್‌ನಾರಾಯಣ್‌- ಬೆಂಗಳೂರು ಕೇಂದ್ರ.
  • ಮಹೇಶ್ ಟೆಂಗಿನಕಾಯಿ – ಹುಬ್ಬಳ್ಳಿ-ಧಾರವಾಡ ಮಹಾನಗರ

ಮೋರ್ಚಾ ರಾಜ್ಯ ಅಧ್ಯಕ್ಷರು:

  • ಬಿಜೆಪಿ ಯುವ ಮೋರ್ಚಾ- ಡಾ.ಸಂದೀಪ್
  • ಮಹಿಳಾ ಮೋರ್ಚಾ -ಗೀತಾ ವಿವೇಕಾನಂದ
  • ರೈತ ಮೋರ್ಚಾ -ಈರಣ್ಣ ಕಡಾಡಿ
  • ಹಿಂದುಳಿದ ವರ್ಗಗಳ ಮೋರ್ಚಾ -ಅಶೋಕ್ ಗಸ್ತಿ
  • ಎಸ್.ಸಿ‌.ಮೋರ್ಚಾ- ಚಲುವಾದಿ ನಾರಾಯಣಸ್ವಾಮಿ
  • ಎಸ್.ಟಿ.ಮೋರ್ಚಾ -ತಿಪ್ಪರಾಜು ಹವಾಲ್ದಾರ್
  • ಅಲ್ಪಸಂಖ್ಯಾತ ಮೋರ್ಚಾ -ಮುಜಾಮಿಲ್ ಬಾಬು