ಕಡಲ ತಡಿ ಯಲ್ಲಿ ಮುಂದುವರೆದ ಕೊರೋನ ಮರಣ ಮೃದಂಗ! ಇಂದು ಮೂವರನ್ನು ಬಲಿಪಡೆದ ಮಹಾಮಾರಿ!

READ ALSO

ಮಂಗಳೂರು ಕೋವಿಡ್ 19 ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ ಮೂವರು ಸಾವನ್ನಪ್ಪಿದ್ದಾರೆ. ದಿನೇ ದಿನ ಕೊರೊನಾ ಮಹಾ ಮಾರಿ ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಸಾವುಗಳ ಸಂಖ್ಯೆ ಕೂಡ ಹೆಚ್ಚುತ್ತಿದ್ದು ಬೆಳ್ಳಂಬೆಳಗ್ಗೆ ಸುಳ್ಯ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದು ಇದೀಗ ಮತ್ತಿಬ್ಬರು ಮಹಮಾರಿ ರುದ್ರನರ್ತನಕ್ಕೆ ಬಲಿಯಾಗಿರುವ ಬಗ್ಗೆ ವರದಿಯಾಗಿದೆ. ಎರಡು ಮಹಿಯರು ಒರ್ವ ಪುರುಷ ಸೇರಿದಂತೆ ಮೂವರು ಬಲಿಯಾಗಿದ್ದು ಜಿಲ್ಲೆಯಲ್ಲಿ ಮೃತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.