![](https://kalanirnayanews.com/wp-content/uploads/2020/12/vijaya-karnataka6-1.jpg)
ಬೆಳ್ತಂಗಡಿ: ಉಜಿರೆ ರಥಬೀದಿ ಸಮೀಪ ಆಟವಾಡುತ್ತಿದ್ದ 8 ವರ್ಷದ ಮಗುವೊಂದನ್ನು ಅಪಹರಣ ನಡೆಸಿದ ಘಟನೆ ನಡೆದಿದೆ.
ಉಜಿರೆ ಉದ್ಯಮಿಯೋರ್ವರ ಮಗ ಉಜಿರೆ ರಥಬೀದಿ ಸಮೀಪದಲ್ಲಿ ಆಟವಾಡುತ್ತಿರುವ ಸಂದರ್ಭ ಇಂಡಿಕಾ ಕಾರಿನಲ್ಲಿ ಬಂದ ನಾಲ್ವರು ಅಪಹರಿಸಿದ ಕುರಿತು ಮಾಹಿತಿ ಲಭ್ಯವಾಗಿದೆ.
ಮಗು ಅಪಹರಣದ ಕುರಿತು ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಲಾರಂಬಿಸಿದ್ದು
ಚಾರ್ಮಾಡಿ ರಸ್ತೆಯಾಗಿ ತೆರಳಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ಪೊಲೀಸರು ಈ ಬಗ್ಗೆ ಶೋಧಕಾರ್ಯ ಮುಂದುವರೆಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.