ವಾತ್ಸಲ್ಯ ಮನೆ ನಿರ್ಮಾಣದಿಂದ ವೃದ್ಧರ ಮುಖದಲ್ಲಿ ಕಾಣುವ ನಗು, ಯೋಜನೆಯ ಸಿಬ್ಬಂದಿ ಶ್ರಮ ಸಾರ್ಥಕವಾಗಿರುವುದಕ್ಕೆ ಸಾಕ್ಷಿಯಾಗಿದೆ: ಶ್ರದ್ಧಾ ಅಮಿತ್

ಸಕಲೇಶಪುರ: ನಿರ್ಗತಿಕ ವೃದ್ಧರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅಭಿವೃದ್ಧಿಯೊಂದಿಗೆ ಸೂರು ಇಲ್ಲದೇ ಇರುವ ನಿರ್ಗತಿಕರಿಗೆ ಆಸರೆಗಾಗಿ ಸ್ವಂತ ಸೂರು ಒದಗಿಸುವುದೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜಯೆ ಉದ್ದೇಶ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಹಾಗೂ ಕ್ಷೇಮವನದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಶ್ರದ್ಧಾ ಅಮಿತ್ ಹೇಳಿದರು.

ಅವರು ತಾಲೂಕಿನ ಬಾಳುಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ಗ್ರಾಮದ ವೃದ್ಧೆ ಲಕ್ಷ್ಮಮ್ಮ ರವರಿಗೆ ಶುಕ್ರವಾರ ವಾತ್ಸಲ್ಯ ಯೋಜನೆಯಡಿ ನೂತನ ವಾತ್ಸಲ್ಯ ಸೂರನ್ನು ಹಸ್ತಾಂತರಿಸಿ ಶುಭಹಾರೈಸಿದರು.

ಸೂರಿಲ್ಲದೆ ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿ ಬದುಕುತ್ತಿರುವ ನಿರ್ಗತಿಕರನ್ನು ಗುರುತಿಸಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮನೆಗಳನ್ನು ನಿರ್ಮಿಸಿ ವಸತಿ ಕಲ್ಪಿಸಲಾಗುತ್ತಿದೆ. ಇದರೊಂದಿಗೆ ಪ್ರತಿ ತಿಂಗಳು 1,000ದಿಂದ 3000ದವರೆಗೆ ಮಾಸಾಶನ ಹಾಗೂ ದಿನನಿತ್ಯದ ಬಳಕೆ ವಸ್ತುಗಳನ್ನು ವಿತರಿಸಲಾಗುತ್ತಿದೆ. ಈ ಯೋಜನೆ ವಸ್ತುಗಳನ್ನು ಒಳಗೊಂಡ ವಾತ್ಸಲ್ಯ ಕಿಟ್ ಬಡವರಿಗೆ ಆಶಾಕಿರಣವಾಗಿದೆ ಎಂದು ಹೇಳಿದರು.

ಇಲ್ಲಿವರೆಗೆ 684 ಮನೆಗಳನ್ನು ಹಸ್ತಾಂತರಿಸಲಾಗಿದ್ದು, ಇನ್ನೂ ನೂರಾರು ಮನೆಗಳು ನಿರ್ಮಾಣ ಹಂತದಲ್ಲಿವೆ. 666ನೇ ವಾತ್ಸಲ್ಯ ಮನೆ ಹಸ್ತಾಂತರವನ್ನು ಶೃಂಗೇರಿ ಪೀಠದ ಶ್ರೀಗಳು ತಮ್ಮ ಅಮೃತ ಹಸ್ತದಿಂದ ನೆರವೇರಿಸಿರುವುದು ಯೋಜನೆಗೆ ವಿಶೇಷ ಗರಿಮೆಯಾಗಿದೆ ಎಂದು ತಿಳಿಸಿದರು.

ವಾತ್ಸಲ್ಯ ಮನೆ ನಿರ್ಮಾಣದಿಂದ ನಿರ್ಗತಿಕ ವೃದ್ಧರ ಮುಖದಲ್ಲಿ ಕಾಣುವ ನಗು, ಯೋಜನೆಯ ಸಿಬ್ಬಂದಿ ಶ್ರಮ ಸಾರ್ಥಕವಾಗಿರುವುದಕ್ಕೆ ಸಾಕ್ಷಿಯಾಗಿದೆ. ಅದಕ್ಕಿಂತ ದೊಡ್ಡ ಆತ್ಮತೃಪ್ತಿ ಮತ್ತೊಂದಿಲ್ಲ. ಕೊನೆಗಾಲದಲ್ಲಿ ಯಾರ ಮೇಲೂ ಅವಲಂಬಿತರಾಗದೇ ಸ್ವಾಭಿಮಾನದಿಂದ ಬದುಕುವ ಆಶಯವನ್ನು ಈ ಯೋಜನೆ ಸಾಕಾರಗೊಳಿಸುತ್ತಿದೆ ಎಂದು ಶ್ರದ್ದಾ ಅಮಿತ್ ಹೇಳಿದರು.

ಶಾಸಕ ಸಿಮೆಂಟ್ ಮಂಜು ಅವರ ಧರ್ಮಪತ್ನಿ ಪ್ರತಿಭಾ ಮಂಜುನಾಥ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಬಡ ಹಾಗೂ ನಿರ್ಗತಿಕ ಮಹಿಳೆಯರ ಬದುಕಿನಲ್ಲಿ ಆತ್ಮಸ್ಥೆರ್ಯ ತುಂಬುವ ಮಹತ್ವದ ಕೆಲಸ ಮಾಡುತ್ತಿದೆ. ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಮಾಜದ ಬಗ್ಗೆ ಅಪಾರ ಕಾಳಜಿ ವಹಿಸುತ್ತಿರುವ ಸಂಸ್ಥೆಯ ಕಾರ್ಯಗಳು ಪ್ರೇರಣಾದಾಯಕ ಹಾಗೂ ಮಾದರಿಯಾಗಿದೆ. ಈ ಕಾರ್ಯಕ್ಕಾಗಿ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಪ್ರಾದೇಶಿಕ ನಿರ್ದೇಶಕರಾದ ಜಯಂತ್ ಪೂಜಾರಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ.ನವೀನ್ ಚಂದ್ರ ಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಗಿರೀಶ್ ಮಂಜುನಾಥ್, ಉಮಾನಾಥ ಸುವರ್ಣ, ಗ್ರಾ.ಪಂ.ಅಧ್ಯಕ್ಷೆ ಲತಾ, ನೇತ್ರಾವತಿ ಮಂಜುನಾಥ್, ಬಬಿತಾ ವಿಶ್ವನಾಥ್, ಗ್ರಾ.ಪಂ.ಸದಸ್ಯ ರಾಜೇಶ್, ತಾಲೂಕು ಯೋಜನಾಧಿಕಾರಿ ರಾಜೇಶ.ಎಂ, ಜ್ಞಾನ ವಿಕಾಸ ಯೋಜನಾಧಿಕಾರಿ ಮೂಕಾಂಬಿಕಾ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರುಗಳಾದ ಜ್ಯೋತಿ, ಮಂಜುಳಾ, ಚಿರಾಂತ್, ಶೌರ್ಯ ಘಟಕದ ಮಧುವರನ್, ಮಂಜುನಾಥ್, ಪ್ರಸನ್ನ, ಪ್ರಕಾಶ್, ರವಿ, ಸೇವಾ ಪ್ರತಿನಿಧಿಗಳಾದ ನಳಿನಿ,ಕೋಮಲ, ಪುನಿತ್, ರಮ್ಯ, ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಊರಿನ ಗಣ್ಯರು ಉಪಸ್ಥಿತರಿದ್ದರು.

Spread the love
  • Related Posts

    ಕರ್ನಾಟಕ ಟಿವಿಯ ‘ಜನನಾಯಕ ಲೀಡರ್’ ಪ್ರಶಸ್ತಿಗೆ ಭಾಜನರಾದ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ

    ಪುತ್ತೂರು: ಸಮಾಜಮುಖಿ ಕಾರ್ಯಗಳು, ಹಿಂದೂ ಸಂಘಟನಾ ಚಟುವಟಿಕೆಗಳು ಹಾಗೂ ಜನಸೇವೆಯಲ್ಲಿ ಸಲ್ಲಿಸಿರುವ ಗಮನಾರ್ಹ ಕೊಡುಗೆಯನ್ನು ಪರಿಗಣಿಸಿ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರಿಗೆ ಕರ್ನಾಟಕ ಟಿವಿ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಜನನಾಯಕ ಲೀಡರ್’ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಾಜ್ಯದ…

    Spread the love

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ, “ಧರ್ಮಸ್ಥಳದ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಂಡು ಅಂತರಂಗದ ಕಣ್ಣು ತೆರೆಯಿರಿ: ನವೀನ್ ಚಂದ್ರ ಶೆಟ್ಟಿ”

    ಸಕಲೇಶಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ಸಕಲೇಶಪುರ ವತಿಯಿಂದ ತಾಲೂಕಿನ ಶುಕ್ರವಾರಸಂತೆ ವಲಯದ ಯಡವರನಹಳ್ಳಿ (ನಲ್ಲುಳ್ಳಿ) ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ಕಣ್ಣಿನ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಹಾಸನ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ…

    Spread the love

    You Missed

    ಕರ್ನಾಟಕ ಟಿವಿಯ ‘ಜನನಾಯಕ ಲೀಡರ್’ ಪ್ರಶಸ್ತಿಗೆ ಭಾಜನರಾದ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ

    • By admin
    • June 20, 2026
    • 22 views
    ಕರ್ನಾಟಕ ಟಿವಿಯ ‘ಜನನಾಯಕ ಲೀಡರ್’ ಪ್ರಶಸ್ತಿಗೆ ಭಾಜನರಾದ ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ, “ಧರ್ಮಸ್ಥಳದ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಂಡು ಅಂತರಂಗದ ಕಣ್ಣು ತೆರೆಯಿರಿ: ನವೀನ್ ಚಂದ್ರ ಶೆಟ್ಟಿ”

    • By admin
    • June 20, 2026
    • 106 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ, “ಧರ್ಮಸ್ಥಳದ ಪುಣ್ಯ ಕಾರ್ಯಗಳಲ್ಲಿ ಪಾಲ್ಗೊಂಡು ಅಂತರಂಗದ ಕಣ್ಣು ತೆರೆಯಿರಿ: ನವೀನ್ ಚಂದ್ರ ಶೆಟ್ಟಿ”

    ಶಿರಾಡಿ ಘಾಟ್‌ನಲ್ಲಿ ಬಾಕ್ಸೈಟ್ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ

    • By admin
    • June 20, 2026
    • 22 views
    ಶಿರಾಡಿ ಘಾಟ್‌ನಲ್ಲಿ ಬಾಕ್ಸೈಟ್ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ

    ಕರಾವಳಿಯಲ್ಲಿ ಕೈಕೊಟ್ಟ ಮುಂಗಾರು, ಹೆಚ್ಚಿದ ನೀರಿನ ಬಿಕ್ಕಟ್ಟಿನ ಆತಂಕ; ನದಿಯ ಒಡಲು ಹೇಳುತ್ತಿದೆ ಎಚ್ಚರಿಕೆಯ ಸಂದೇಶ:

    • By admin
    • June 20, 2026
    • 53 views
    ಕರಾವಳಿಯಲ್ಲಿ ಕೈಕೊಟ್ಟ ಮುಂಗಾರು, ಹೆಚ್ಚಿದ ನೀರಿನ ಬಿಕ್ಕಟ್ಟಿನ ಆತಂಕ; ನದಿಯ ಒಡಲು ಹೇಳುತ್ತಿದೆ ಎಚ್ಚರಿಕೆಯ ಸಂದೇಶ:

    ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯ ಸೋಮಂತ್ತಡ್ಕದಿಂದ ಹೇಡ್ಯಾ ವರೆಗಿನ ರಸ್ತೆ ನವೀಕರಣಕ್ಕೆ ಅನುದಾನ ಮಂಜೂರು

    • By admin
    • June 18, 2026
    • 56 views
    ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯ ಸೋಮಂತ್ತಡ್ಕದಿಂದ ಹೇಡ್ಯಾ ವರೆಗಿನ ರಸ್ತೆ ನವೀಕರಣಕ್ಕೆ ಅನುದಾನ ಮಂಜೂರು

    “ಸಿ.ಎಂ.-ಡಿಕೆಶಿ ಮೊದಲ ಪರೀಕ್ಷೆಯಲ್ಲಿ ಸಕ್ಸಸ್: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 5 ಸ್ಥಾನ” ಜೆಡಿಎಸ್ ಅಭ್ಯರ್ಥಿಗೆ ಸೋಲು, ಅಡ್ಡಮತದಾನ ಚರ್ಚೆಗೆ ಗ್ರಾಸ

    • By admin
    • June 18, 2026
    • 46 views
    “ಸಿ.ಎಂ.-ಡಿಕೆಶಿ ಮೊದಲ ಪರೀಕ್ಷೆಯಲ್ಲಿ ಸಕ್ಸಸ್: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 5 ಸ್ಥಾನ” ಜೆಡಿಎಸ್ ಅಭ್ಯರ್ಥಿಗೆ ಸೋಲು, ಅಡ್ಡಮತದಾನ ಚರ್ಚೆಗೆ ಗ್ರಾಸ