![](https://kalanirnayanews.com/wp-content/uploads/2020/06/1590242815311.jpg)
ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ‘ಮಹಾ’ ಸ್ಪೋಟವಾಗಿದ್ದು, ಇಂದು ದಾಖಲೆಯತ್ತ ಕೊರೋನ ಮುನ್ನುಗ್ಗಿದ್ದು ಕರಾವಳಿಯ ಉಡುಪಿ ಜಿಲ್ಲೆಯಲ್ಲಿ150 ಜನರಿಗೆ ಸೋಂಕು ಕಾಣಿಸಿಕೊಂಡರೆ ಕಲಬುರ್ಗಿಯಲ್ಲೂ ಶತಕದ ಗುರಿ ತಲುಪಿದ ಮಹಾಮಾರಿ ರಾಜ್ಯದ 17ಜಿಲ್ಲೆಗಳಲ್ಲಿ ತನ್ನ ರುದ್ರನರ್ತನವನ್ನು ಮುಂದುವರಿಸಿದೆ.
ಕರ್ನಾಟಕದಲ್ಲಿಂದು 388 ಮಂದಿಗೆ ಸೋಂಕು ತಗುಲಿದ್ದು ರಾಜ್ಯದಲ್ಲಿ 3796ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
![](https://kalanirnayanews.com/wp-content/uploads/2020/06/Screenshot_2020_0602_213859-1024x622.png)
ರಾಜ್ಯದಲ್ಲಿ ಇವತ್ತು ಒಂದೇ ದಿನ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗಿರುವುದು ಆತಂಕ ಮೂಡಿಸಿದೆ.
388 ಸೋಂಕಿತರ ಪೈಕಿ 367ಜನ ಹೊರ ರಾಜ್ಯದಿಂದ ಬಂದವರಾಗಿರುತ್ತಾರೆ.
ಜಿಲ್ಲಾವಾರು ಸೋಂಕಿತರ ವಿವರಗಳು:
ಉಡುಪಿ 150
ಕಲಬುರ್ಗಿ 100
ಬೆಳಗಾವಿ 51
ರಾಯಚೂರು 16
ಬೆಂಗಳೂರು 15
ಬೀದರ್ 10
ಹಾಸನ 09
ಬಾಗಲಕೋಟೆ 09
ದಾವಣಗೆರೆ 07
ಯಾದಗಿರಿ 05
ಮಂಡ್ಯ 04
ವಿಜಯಪುರ 04
ಚಿಕ್ಕಬಳ್ಳಾಪುರ 02
ಧಾರವಾಡ 02
ತುಮಕೂರು 02
ಕೋಲಾರ 01
ಹಾವೇರಿ 01