ಇಂದಿನಿಂದ ಶ್ರದ್ಧಾಕೇಂದ್ರಗಳನ್ನು ಶ್ರದ್ಧೆ ಭಕ್ತಿಯಿಂದ ತೆರೆಯಲು ಅವಕಾಶ

ಬೆಂಗಳೂರು: ಇಂದಿನಿಂದ ಹಲವು ಷರತ್ತುಗಳೊಂದಿಗೆ ಶ್ರದ್ಧಾಕೇಂದ್ರಗಳನ್ನು ಶ್ರದ್ಧೆ ಭಕ್ತಿಯಿಂದ ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ದೇವಾಲಯ, ಪ್ರಾರ್ಥನಾ ಮಂದಿರ ತೆರೆಯಲು ಹಲವು ಶರತ್ತುಬದ್ಧ ಮಾರ್ಗಸೂಚಿಗಳು ಈ ಕೆಳಗಿನಂತಿದೆ.

ಉಸಿರಾಟದ ತೊಂದರೆ ಜ್ವರ, ಕೆಮ್ಮು, ನೆಗಡಿ, ಅಂತಹ ರೋಗ ಲಕ್ಷಣಗಳನ್ನು ಹೊಂದಿರುವವರು ಶ್ರದ್ಧಾಕೇಂದ್ರಗಳ ಪ್ರದೇಶಕ್ಕೆ ಕಡ್ಡಾಯವಾಗಿ ಬರುವಂತಿಲ್ಲ.

ಸ್ಮಾರ್ಟ್ ಫೋನ್ ಹೊಂದಿರುವವರು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಅಳವಡಿಸಿಕೊಳ್ಳುವುದು.

ದೇವಾಲಯಗಳ ಮಾರ್ಗಸೂಚಿಗಳು:

● ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಾಗೂ ಪ್ರತಿ ದಿನ ದೇವಾಲಯದ ಒಳ ಮತ್ತು ಹೊರ ಆವರಣಗಳನ್ನು ಕೋವಿಡ್ ವೈರಾಣು ತಡೆಗಟ್ಟಲು ಡಿಸ್ ಇನ್ಪೆಕ್ಟೆಂಟ್ ಗಳನ್ನು ಸಿಂಪಡಿಸುವುದು.

● ದೇವಾಲಯಗಳಿಗೆ ಹೆಚ್ಚುವರಿ ಸಿಬ್ಬಂದಿಗಳ ಅವಶ್ಯಕತೆ ಇದ್ದಲ್ಲಿ, ದೇವಾಲಯದ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕವಾಗಿ ಎರಡು ತಿಂಗಳ ಅವಧಿಗೆ ನೇಮಿಸಿಕೊಳ್ಳುವುದು ಹಾಗೂ ಹೆಚ್ಚುವರಿ ಸೆಕ್ಯೂರಿಟಿ ಗಾರ್ಡ್ ಗಳ ವ್ಯವಸ್ಥೆಗೆ ತಗುಲುವ ವೆಚ್ಚವನ್ನು ದೇವಾಲಯದ ನಿಧಿಯಿಂದ ಭರಿಸುವುದು.

● ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ದೇವಾಲಯಕ್ಕೆ ಪ್ರವೇಶಿಸುವ ದ್ವಾರಗಳಲ್ಲಿ ಕಡ್ಡಾಯವಾಗಿ ದೇಹದ ಉಷ್ಣತೆಯನ್ನು ತಪಾಸಣೆ ಮಾಡುವುದು ಹಾಗೂ ಕೈಗಳಿಗೆ ಸ್ಯಾನಿಟೈಸರ್ ನೀಡುವುದು.

● ಭಕ್ತಾಧಿಗಳಲ್ಲಿ ದೇಹದ ಉಷ್ಣತೆ ಹೆಚ್ಚಾಗಿರುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಯು ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುವಂತಿಲ್ಲ.

● ಭಕ್ತಾಧಿಗಳು ಮಾಸ್ಕ್ ಗಳನ್ನು ಅಥವಾ ಬಾಯಿ ಮತ್ತು ಮೂಗನ್ನು ಮುಚ್ಚುವಂತೆ ಕರವಸ್ತ್ರಗಳನ್ನು ಕಡ್ಡಾಯವಾಗಿ ಧರಿಸಿರುವವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ಕಲ್ಪಿಸುವುದು.

● ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡು ನಿಟ್ಟಿನಲ್ಲಿ ದೇವಾಲಯದಲ್ಲಿ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

● ದೇವಾಲದಯ ಶೌಚಾಲಯಗಳನ್ನು ಆಗಿಂದ್ದಾಗ್ಗೆ ಸ್ವಚ್ಛಗೊಳಿಸುವುದು ಮತ್ತು ಕೋವಿಡ್ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನುಕೈಗೊಳ್ಳುವುದು.

● ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ದರ್ಶನಕ್ಕೆ ಬರುವವರು ಹೂ, ಹಣ್ಣು, ಕಾಯಿ ಮುಂತಾದ ಪೂಜಾ ಸಾಮಗ್ರಿಗಳನ್ನು ತರುವಂತಿಲ್ಲ.

● 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಕರಿಗೆ ಹಾಗೂ 10 ವರ್ಷದ ಕೆಳಗಿನ ಮಕ್ಕಳು ಮತ್ತು ಗರ್ಭಿಣಿಯರು ಪ್ರವೇಶ ಮಾಡುವಂತಿಲ್ಲ.

● ಭಕ್ತಾದಿಗಳು ಪಾದರಕ್ಷೆಯನ್ನು ತಮ್ಮ ವಾಹನದಲ್ಲೇ ಬಿಟ್ಟು ಬರುವುದು, ದೇವಸ್ಥಾನದ ಆವರಣದಲ್ಲಿ ಉಗುಳುವಂತಿಲ್ಲ.

ಮಸೀದಿಗಳಲ್ಲಿ ಮಾರ್ಗಸೂಚಿಗಳು:

● ಮುಸಲ್ಮಾನರು ನಮಾಜ್ ಗೆ ತಮ್ಮದೇ ಸ್ವಂತ ಮ್ಯಾಟ್ ತರಬೇಕು.

● ಮಸೀದಿಗಳ ಮುಂಭಾಗದಲ್ಲಿ ಕೊರೋನಾ ನಿಯಮಗಳಿರುವ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.

● ನಮಾಜ್ ಗೂ ಮುನ್ನ ಮೈಕ್‌ಗಳಲ್ಲಿ ಕೊರೋನಾ ಜಾಗೃತಿ ಬಗ್ಗೆ ಅನೌನ್ಸಮೆಂಟ್ ಮಾಡಬೇಕು.

● ರಾತ್ರಿ ಕೊನೆಯ ನಮಾಜ್ ಮಾಡಿದ ಬಳಿಕ , ನಮಾಜ್ ಮಾಡಿದ ಸ್ಥಳವನ್ನ ಕಡ್ಡಾಯವಗಿ ಸ್ವಚ್ಛತೆ ಮಾಡಬೇಕು.

● ಮಸೀದಿಗಳಲ್ಲಿ ನಮಾಜ್ ವೇಳೆ ಸಾಮಾಜಿಕ ಅಂತರ ಕಡ್ಡಾಯ 6 ಅಡಿ ಅಂತರದಲ್ಲಿ ನಮಾಜ್, ನಮಾಜ್ ಮಾಡುವ ಜಾಗವನ್ನ ಸಾಮಾಜಿಕ ಅಂತರದಲ್ಲಿ ಮಾರ್ಕ್ ಮಾಡಬೇಕು.

● ಮಸೀದಿ ಹೊರಗೆ ಚಪ್ಪಲಿಗಳನ್ನು ಸುರಕ್ಷಿತವಾಗಿ ಇಡಲು ವ್ಯವಸ್ಥೆ.

● ನಮಾಜ್ ಮಾಡಿವ ಸ್ಥಳ ಭರ್ತಿಯಾದ ತಕ್ಷಣ ಗೇಟ್ ಕ್ಲೋಜ್ ಮಾಡಬೇಕು.

● ಶುಕ್ರವಾರ ಹೆಚ್ಚು ಜನ ಇರೋದ್ರಿಂದ ಮೂರು ಸಲ ಪ್ರಾರ್ಥನೆ ಮಾಡಲು ಸೂಚನೆ(ಪ್ರತಿ ನಮಾಜ್ ಗೂ ಅರ್ಥ ಗಂಟೆ ಮಿಸಲು)

● ಮಸೀದಿಗಳಲ್ಲಿ ಮುಂದಿನ ಆದೇಶದವರೆಗೂ ಮದ್ರಸಾ ನಡೆಸುವಂತಿಲ್ಲ

● ಮಸೀದಿಯಲ್ಲಿ ಖುರಾನ್ ಸೇರಿದಂತೆ ಧಾರ್ಮಿಕ ಪುಸ್ತಕಗಳನ್ನು ಒದುವಂತಿಲ್ಲ.

● ಮಸೀದಿಗಳಲ್ಲಿ ನಿಕಾ(ಮದುವೆಗಳಿಗೆ) ವ್ಯವಸ್ಥೆಗೆ ನಿರ್ಬಂಧ, ಪರಸ್ಪರ ಹ್ಯಾಂಡ್ ಶೇಕ್, ಆಲಿಂಗನ ಮಾಡಿಕೊಳ್ಳಲು ಅವಕಾಶವಿಲ್ಲ.

ದರ್ಗಾಗಳಿಗೆ ಮಾರ್ಗಸೂಚಿಗಳು:

● ದರ್ಗಾಗಳನ್ನು ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ಮಾತ್ರ ತೆರೆಯಬೇಕು.

● ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕ್ಯೂ ವ್ಯವಸ್ಥೆ ಮಾಡಿರಬೇಕು.

● ಅಡಿ ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ.

● ದರ್ಗಾಗಳಲ್ಲಿ ಮಾಲಾರ್ಪಣೆ, ಹೂ ಹಾಕುವುದು ನಿಷೇಧ
ದರ್ಗಾದಲ್ಲಿ ಹರಕೆಗಳನ್ನ ತೀರಿಸಲು ಮಾತ್ರ ಅವಕಾಶ.

● ದರ್ಗಾದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುರಕ್ಷತೆಯಲ್ಲಿರಬೇಕು.

● ದರ್ಗಾಗಳಲ್ಲಿ ಹಸಿರು ಧ್ವಜ ಕಟ್ಟಲು ನಿರ್ಬಂಧ.

ಚರ್ಚ್ ಗಳಲ್ಲಿ ಮಾರ್ಗಸೂಚಿಗಳು:

● ಭಾನುವಾರದ ವಿಶೇಷ ಪ್ರಾರ್ಥನೆಯನ್ನು ಶನಿವಾರದಿಂದ ಆರಂಭಿಸಬೇಕು.

● ಭಾನುವಾರದ ವಿಶೇಷ ಪ್ರಾರ್ಥನೆಗಳನ್ನು ಜನ ಜಾಸ್ತಿ ಇದ್ರೆ ವಾರದ ದಿನಗಳಲ್ಲೂ ವಿಸ್ತರಣೆಗೆ ಮಾಡುವಂತೆ ಸೂಚನೆ.

● ಚರ್ಚ್ ಗಳ ಒಳಗೆ ಪ್ರೇಯರ್ ಗೆ ಕೂರಲು 6 ಅಡಿ ಸಾಮಾಜಿಕ ಅಂತರ ಕಡ್ಡಾಯ.

● ಚರ್ಚ್ ಗಳಲ್ಲಿ ಕೊರೋನಾ ಮಾರ್ಗಸೂಚಿಗಳ ಫಲಕಗಳ ಪ್ರದರ್ಶನ ಮಾಡಬೇಕು.

● ಚರ್ಚ್ ನಲ್ಲಿ ಗಂಟೆಗಳನ್ನು ಮತ್ತು ಇನ್ನಿತರೆ ವಸ್ತುಗಳನ್ನ ಮುಟ್ಟುವುದಕ್ಕೆ ನಿರ್ಬಂಧ.

● ಚರ್ಚ್ ನಲ್ಲಿ ಕ್ರೈಸ್ತ ಪ್ರಾರ್ಥನಾ ಗೀತೆಗಳಿಗೆ ಎಲ್ ಸಿಡಿ ಪ್ರೊಜೆಕ್ಟರ್ ಬಳಸಿ.

● ಚರ್ಚ್ ಗಳಲ್ಲಿನ ಪ್ರಾರ್ಥನೆಯನ್ನ ಲೈವ್ ಸ್ಟ್ರಿಮಿಂಗ್ ಮಾಡಿ ಮನೆಯಲ್ಲಿ ವೀಕ್ಷಣೆ ಮಾಡುವಂತೆ ಮಾಡುವುದು.

ಸಿಖ್ಖರ ಗುರುದ್ವಾರಗಳಿಗೆ ಮಾರ್ಗಸೂಚಿಗಳು:

● ಭಾನುವಾರದಂದು ಗುರುದ್ವಾರಗಳನ್ನು ತೆರೆಯಲು ಸಮಯ‌ ನಿಗದಿ.

● ಭಾನುವಾರದ ಪ್ರಾರ್ಥನೆಗಳಿಗೆ ದಿನದ ಮೂರು ಹೊತ್ತಿನಲ್ಲಿ ಪ್ರಾರ್ಥನೆಗೆ ಅವಕಾಶ.

● ಭಾನುವಾರದ ಬೆಳಗ್ಗೆ 8 ರಿಂದ 9, ಬೆಳಗ್ಗೆ 11.30 ರಿಂದ ಮಧ್ಯಾಹ್ನ 12.30, ಸಂಜೆ 6.30 ರಿಂದ 7.30 ವರೆಗೆ ಪ್ರಾರ್ಥನೆಗೆ ಸಮಯ ನಿಗದಿ.

● ಗುರುದ್ವಾರಗಳಲ್ಲಿ‌ ಪವಿತ್ರ ಗ್ರಂಥಗಳ ಪಠಣೆಗೆ ನಿರ್ಬಂಧ
ಗುರುದ್ವಾರಗಳ ಒಳಗೆ ಸಾಮಾಜಿಕ ಅಂತರದಲ್ಲಿ ಪ್ರಾರ್ಥನೆ ಮಾಡಬೇಕು.

● ಸಾಮಾಜಿಕ‌ ಅಂತರ, ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ.

ಜೈನ ಬಸದಿಗಳಲ್ಲಿ‌ ಮಾರ್ಗಸೂಚಿಗಳು:

● ಜೈನ ಬಸದಿಗಳಲ್ಲಿ ನಿತ್ಯದ ಪ್ರಾರ್ಥನೆಗೆ ಸಮಯ ನಿಗದಿ
ಬೆಳಗ್ಗೆ 7 ರಿಂದ 9 ರೊಳಗೆ ಪ್ರಾರ್ಥನೆ, ಪ್ರಾರ್ಥನೆ ಗಳ ಆನ್ ಲೈನ್ ನೇರ ಪ್ರಸಾರಕ್ಕೆ ಸೂಚನೆ.

● ಜೈನಬಸದಿಗಳಲ್ಲಿ ಎಲ್ಲ ಕೊರೋನಾ ಸುರಕ್ಷತಾ‌ ನಿಯಮಗಳ ಪಾಲನೆ ಕಡ್ಡಾಯ.

● ಭಕ್ತಾದಿಗಳು ಯಾವುದೇ ಕಾರಣಕ್ಕೂ ಶೇಕ್ ಹ್ಯಾಂಡ್ಸ್ ಕೊಡಬಾರದು.

● ಪವಿತ್ರ ಗ್ರಂಥಗಳನ್ನ ಸುರಕ್ಷಿತವಾಗಿ ಇಡಬೇಕಾಗುತ್ತದೆ.

Spread the love
  • Related Posts

    ಮನ ಮುದಗೊಳಿಸಿದ ಫ್ರೆಂಡ್ಸ್ ಸಮಾಗಮ

    ಬೆಳ್ತಂಗಡಿ: ಫ್ರೆಂಡ್ಸ್ ವ್ಯಾಟ್ಸಾಪ್ ಗ್ರೂಪ್ ನ 13ವರ್ಷಗಳ ನಂತರ ಮೊದಲ ಬಾರಿಗೆ ಸ್ನೇಹಿತರನ್ನೆಲ್ಲ ಒಗ್ಗೂಡಿಸಿ ಫ್ರೆಂಡ್ಸ್ ಸಮಾಗಮ -2025 ಕಾರ್ಯಕ್ರಮವನ್ನು ತಾಲೂಕಿನ ಬಲಿಪ ರೆಸಾರ್ಟ್ ನಲ್ಲಿ ನಡೆಸಲಾಯಿತು. 2013ರಲ್ಲಿ ಪ್ರಾರಂಭಗೊಂಡ ಈ ಗ್ರೂಫ್ ನಲ್ಲಿ ವಕೀಲರು, ಉಪನ್ಯಾಸಕರು, ಇಲಾಖಾ ಅಧಿಕಾರಿಗಳು, ಪ್ರಗತಿಪರ…

    Spread the love

    ಬೆಳ್ತಂಗಡಿ : “ಸಾಲ್ಯಾನ್ ಎಲ್ ಇಡಿ, ಧ್ವನಿ ನ್ಯೂಸ್ ಮಾಲಕ ಸುದೀಪ್ ಸಾಲ್ಯಾನ್’ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಗರಿಮೆ

    ಬೆಳ್ತಂಗಡಿ : ತಾಲೂಕು ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಬಹಳಷ್ಟು ಖ್ಯಾತಿ ಪಡೆದಿರುವ “ಸಾಲ್ಯಾನ್ ಎಲ್ ಇಡಿ” ಇಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಪ್ರಮಾಣಪತ್ರವನ್ನು ತನ್ನದಾಗಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ ದಿ| ಕಿಶೋರ್‌ಕುಮಾರ್‌ ಹಾಡುಗಳ ಗಾಯನ ದಾಖಲೆ, 100 ಗಾಯಕರು, ನಿರಂತರ 40…

    Spread the love

    You Missed

    ಮನ ಮುದಗೊಳಿಸಿದ ಫ್ರೆಂಡ್ಸ್ ಸಮಾಗಮ

    • By admin
    • December 15, 2025
    • 176 views
    ಮನ ಮುದಗೊಳಿಸಿದ ಫ್ರೆಂಡ್ಸ್ ಸಮಾಗಮ

    ಬೆಳ್ತಂಗಡಿ : “ಸಾಲ್ಯಾನ್ ಎಲ್ ಇಡಿ, ಧ್ವನಿ ನ್ಯೂಸ್ ಮಾಲಕ ಸುದೀಪ್ ಸಾಲ್ಯಾನ್’ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಗರಿಮೆ

    • By admin
    • December 13, 2025
    • 61 views
    ಬೆಳ್ತಂಗಡಿ : “ಸಾಲ್ಯಾನ್ ಎಲ್ ಇಡಿ, ಧ್ವನಿ ನ್ಯೂಸ್ ಮಾಲಕ ಸುದೀಪ್ ಸಾಲ್ಯಾನ್’ಗೆ  ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಗರಿಮೆ

    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    • By admin
    • December 8, 2025
    • 24 views
    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    • By admin
    • December 4, 2025
    • 43 views
    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    • By admin
    • December 4, 2025
    • 66 views
    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    • By admin
    • December 4, 2025
    • 40 views
    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ