ಇಂದಿನ ರಾಶಿಫಲ ಯಾರಿಗೆ ಶುಭ ಯಾರಿಗೆ ಆಶುಭ ಫಲ!

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ
ದಕ್ಷಿಣಾಯನ ಪುಣ್ಯಕಾಲ
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಬುಧವಾರ, ವಿಶಾಖ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:30 ರಿಂದ 2:05
ಗುಳಿಕಕಾಲ: ಬೆಳಗ್ಗೆ 10:55 ರಿಂದ 12:30
ಯಮಗಂಡಕಾಲ: ಬೆಳಗ್ಗೆ 7:45 ರಿಂದ 9:20

ಮೇಷ

ಅನಾವಶ್ಯಕ ಖರ್ಚು ಸಂಭವಿಸಬಹುದು. ಮಾನಸಿಕ ಉದ್ವೇಗದಿಂದ ಉದ್ಯೋಗದಲ್ಲಿ ತೊಡಕು. ಅಜೀರ್ಣ ಮುಂತಾದ ತೊಂದರೆ ಬಂದೊದಗಬಹುದು. ನೀರು ಆಹಾರದ ವಿಷಯದಲ್ಲಿ ಜಾಗೃತೆ ಅಗತ್ಯ.

ವೃಷಭ

ಮದುವೆ ಮಂಗಳಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ. ನೌಕರಸ್ಥರಿಗೆ ಬಡ್ತಿಯೊಂದಿಗೆ ಉದ್ಯೋಗದಲ್ಲಿ ಬದಲಾವಣೆ. ಆರ್ಥಿಕ ಅನುಕೂಲತೆ ಒದಗಿಬರುವುದು. ಬಂಧುಗಳಿಂದ ಅಶುಭ ಸಮಾಚಾರ ಸಿಗಲಿದೆ.

ಮಿಥುನ

ಹಿರಿಯರೊಂದಿಗೆ ಶಾಂತತೆಯಿಂದ ವ್ಯವಹರಿಸುವುದು ಉತ್ತಮ. ವೃಥಾ ಖರ್ಚು. ಸಾಮಾಜಿಕ ಕಾರ್ಯಗಳಲ್ಲಿ ಹೊಂದಾಣಿಕೆ ಅವಶ್ಯ. ಕಿವಿ, ಗಂಟಲು ನೋವುಗಳು ನಿಮ್ಮನ್ನು ಪೀಡಿಸುವ ಸಾಧ್ಯತೆ.

ಕಟಕ

ವ್ಯವಹಾರಗಳಲ್ಲಿ ಉತ್ತಮ ಪ್ರಗತಿಯಿಂದಾಗಿ ಉತ್ತಮ ಆದಾಯ. ಪ್ರತಿಯೊಂದು ವಿಷಯದಲ್ಲೂ ನೀವು ತೆಗೆದುಕೊಳ್ಳುವ ನಿರ್ಧಾರವೇ ಸರಿಯಾಗಿರುವುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ನಿರೀಕ್ಷೆ.

ಸಿಂಹ

ಆರ್ಥಿಕ ಪ್ರಗತಿ ಉತ್ತಮಗೊಂಡು ಸಂತೋಷ ಮೂಡುವುದು. ಶತ್ರುಗಳ ವಿರುದ್ಧ ಜಯ. ಬಹಳ ದಿನಗಳ ಸಮಸ್ಯೆಗಳು ಪರಿಹಾರವಾಗಿ ನಿರಾಳತೆ ತಲೆದೋರುವುದು. ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡುವಿರಿ.

ಕನ್ಯಾ

ಸಂಕಷ್ಟಗಳು ಪರಿಹಾರವಾಗಲಿವೆ. ಹಿಂದಿನ ಕೆಲಸಗಳಿಗೆ ಪುನಃ ಚಾಲನೆ ದೊರೆತು ಪ್ರಗತಿ ಪಥದಲ್ಲಿ ಸಾಗುವವು. ದುಡುಕುತನದಿಂದಾಗಿ ಉದ್ವೇಗಗೊಳ್ಳುವುದರಿಂದ ಸಮಸ್ಯೆಗಳು ತಲೆದೋರಬಹುದು. ದುರ್ಗಾಸ್ತೋತ್ರ ಪಠಿಸಿ.

ತುಲಾ

ಕೆಲಸ–ಕಾರ್ಯಗಳಲ್ಲಿ ಮಂದಗತಿ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ. ಹೊಸ ಕೆಲಸಗಳನ್ನು ಪ್ರಾರಂಭಿಸುವುದು ಬೇಡ. ಅಪವಾದಕ್ಕೆ ತುತ್ತಾಗುವ ಸಾಧ್ಯತೆ ಇದ್ದು ಧೃತಿಗೆಡಬೇಕಾಗಿಲ್ಲ.

ವೃಶ್ಚಿಕ

ಕಣ್ಣು ಅಥವಾ ತಲೆನೋವು ತೀವ್ರವಾಗಿ ಕಾಡುವ ಸಾಧ್ಯತೆ. ವೃಥಾ ವಾದವಿವಾದದಿಂದಾಗಿ ಅನಗತ್ಯ ವೈರತ್ವ ಉಂಟಾಗಬಹುದು. ಅಯೋಗ್ಯರೊಂದಿಗೆ ಯಾವುದೇ ಕಾರಣಕ್ಕೂ ವ್ಯವಹಾರ ಬೇಡ.

ಧನು

ಆರ್ಥಿಕ ಸುಧಾರಣೆ. ಧಾರ್ಮಿಕ ಕಾರ್ಯಗಳಿಗೆ ಖರ್ಚುಮಾಡುವ ಸಾಧ್ಯತೆ ಇದ್ದು ಕೈಗೊಳ್ಳುವ ಕಾರ್ಯದಲ್ಲಿ ಯಶಸ್ಸು ಸಾಧಿಸಿ ಕೀರ್ತಿ ಸಂಪಾದನೆ. ಧೈರ್ಯದಿಂದ ಎದುರಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

ಮಕರ

ಸ್ವಂತ ಉದ್ಯೋಗಿಗಳು ಹಾಗೂ ನೌಕರಿಯಲ್ಲಿರುವವರು ತಮ್ಮ ನಡೆ ನುಡಿ, ಕೆಲಸಗಳ ಬಗ್ಗೆ ಜಾಗ್ರತೆಯಿಂದಿರುವುದು ಸೂಕ್ತ. ಚಿಕ್ಕ ತಪ್ಪಿಗೂ ಮಹತ್ತರ ದಂಡ ತೆರಬೇಕಾದೀತು. ಉತ್ತಮ ಅವಕಾಶಗಳು ಬಂದೊದಗುವವು.

ಕುಂಭ

ಅಶುಭ ಸ್ವಪ್ನಗಳಿಂದಾಗಿ ಮಾನಸಿಕ ಚಂಚಲತೆ. ನಿರಾಸೆಯಿಂದಾಗಿ ದುಃಖದ ಅನುಭವ. ಸಂಗಾತಿಯ ಆರೋಗ್ಯದ ಬಗ್ಗೆ ಗಮನವಿರಲಿ. ಬೇರೆಯವರ ಅಪಹಾಸ್ಯಕ್ಕೆ ಒಳಗಾಗುವ ಸಾಧ್ಯತೆ. ಈಶ್ವರನ ಆರಾಧನೆ ಮಾಡಿ.

ಮೀನ

ಆದಾಯ ಮತ್ತು ಉಳಿಕೆಗಳಲ್ಲಿ ಪ್ರಗತಿಯಿರುವುದು. ಆರೋಗ್ಯದಲ್ಲಿ ಸುಧಾರಣೆ. ಸಂಬಂಧಿಗಳಲ್ಲಿ ವಂಶವೃದ್ಧಿಯ ಶುಭ ಸಂದೇಶ ಕೇಳಲಿದ್ದೀರಿ. ನಿಂತುಹೋದ ಕೆಲಸಗಳಿಗೆ ಮರುಚಾಲನೆ ದೊರೆಯುವ ಸಾಧ್ಯತೆ.

Spread the love
  • Related Posts

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮರಳು ಹಾಗೂ ಕೆಂಪು ಕಲ್ಲು ಪೂರೈಕೆಯಲ್ಲಿ ಆಗಿರುವ ತೊಂದರೆಯ ಕುರಿತು ಹಾಗೂ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಟೆಂಡರ್ ಕೂಪದ ಭ್ರಷ್ಟಾಚಾರವನ್ನು ಖಂಡಿಸಲು…

    Spread the love

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ಬೆಳ್ತಂಗಡಿ: ಚಿರಂಜೀವಿ ಯುವಕ ಮಂಡಲ ಕಾನರ್ಪ ಕಡಿರುದ್ಯಾವರ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿ ಸಭೆಯನ್ನು ಯುವಕ ಮಂಡಲದ ವಠಾರದಲ್ಲಿ ನಡೆಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಭಟ್ ಪಣಿಕಲ್ ಹಾಗೂ…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 330 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 301 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 201 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 301 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 159 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 90 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ