ಕೇರಳ ವಿಮಾನ ದುರಂತ ಇಬ್ಬರು ಪೈಲಟ್ ಸಹಿತ 16 ಮಂದಿ ಸಾವು!

ತಿರುವನಂತಪುರ: ದುಬೈ ನಿಂದ ಕೋಯಿಕ್ಕೋಡ್ ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿದ ವಿಮಾನ 35 ಅಡಿ ಆಳದ ಪ್ರಪಾಾತಕ್ಕೆ ಬಿದ್ದಿದೆ ಎಂದು ನಿರ್ದೇಶಕ ಅರುಣ್ ಕುಮಾರ್ ಮಾಹಿತಿಯನ್ನು ನೀಡಿದ್ದಾರೆ

ವಂದೇ ಮಾತರಂ ವಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏರ್ ಇಂಡಿಯಾ ವಿಮಾನ 191 ಮಂದಿ ಪ್ರಯಾಣಿಕರನ್ನು ಹೊತ್ತು ತಾಯ್ನಾಡಿಗೆ ಮರಳುತ್ತಿತ್ತು. ಕೊಯೀಂಕೋಡ್ ನ ಕರೀಪುರ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಆಗುವ ವೇಳೆಯಲ್ಲಿ ವಿಮಾನ ನೆಲಕ್ಕೆ ಉರುಳಿದ್ದು, ದುರ್ಘಟನೆ ಸಂಭವಿಸಿದೆ.

READ ALSO

“ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಐಎಕ್ಸ್ 1344 ಬಿ -737 ವಿಮಾನವಾಗಿತ್ತು.

174ಮಂದಿ ಪ್ರಯಾಣಿಕರು 10 ಹಸುಗೂಸು, 2ಪೈಲಟ್ ಸೇರಿದಂತೆ 5ಮಂದಿ ಸಿಬ್ಬಂದಿಗಳು ಸೇರಿ 191 ಜನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

10ವರ್ಷದೊಳಗಿನ 41 ಮಕ್ಕಳು ಇದ್ದು ಇದರಲ್ಲಿ 5 ವರ್ಷದೊಳಗಿನ28 ಮಕ್ಕಳು ಇದ್ದರೆಂದು ತಿಳಿದು ಬಂದಿದೆ

ಈ ದುರಂತದಲ್ಲಿ ಇಬ್ಬರು ಪೈಲಟ್ ಸಹಿತ 16 ಮಂದಿ ಸಾವನ್ನಪ್ಪಿದ್ದು ಇನ್ನು 123ಮಂದಿಗೆ ಗಾಯಗೊಂಡಿದ್ದು. 15 ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

HELPLINE NUMBERS: 0495-2376901 (Helpline number for relatives of passengers); 0483-2719493 (Control room number at Kozhikode airport); 0097165970303 (Control room number at Sharjah airport in UAE); 009710565463903 (Control room number at Dubai airport); 009710543090572 (Control room number at Dubai airport)