ಕಳೆದ ವರ್ಷದ ಕರಿಛಾಯೆ ಮಾಸುವ ಮುನ್ನವೇ ಮತ್ತೊಮ್ಮೆ ಜನರಿಗೆ ಶಾಕ್ ನೀಡಿದ ವರುಣ!

ಮಂಗಳೂರು: ಪಶ್ಚಿಮ ಘಟ್ಟದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಕಳೆದ ವರ್ಷದ ಕರಿಛಾಯೆ ಮಾಸುವ ಮುನ್ನವೇ ಮತ್ತೊಮ್ಮೆ ಜನರಿಗೆ ಶಾಕ್ ನೀಡಿದೆ ತಡರಾತ್ರಿ ಸುರಿದ ಧಾರಕಾರ ಮಳೆಗೆ ಬೆಳ್ತಂಗಡಿಯ ಪಶ್ಚಿಮ ಘಟ್ಟದ ತಪ್ಪಲಿನ ದಿಡುಪೆ ಪ್ರದೇಶಗಳಲ್ಲಿ ನೀರು ನುಗ್ಗಿದ್ದು ಜನ ಜೀವನ ಅಸ್ಥವ್ಯಸ್ಥವಾಗಿದೆ.

ಮಲವಂತಿಗೆ ಗ್ರಾಮ,ದಿಡುಪೆಯ ಕಲ್ಬೆಟ್ಟು ಎಂಬಲ್ಲಿ ನೇತ್ರಾವತಿ ಕಿನಾರೆಯ ಸೇತುವೆ ಅಪಾಯದಲ್ಲಿದೆ. ದಿನಾಂಕ 08/08/2020 ರಂದು ಸುರಿದ ಮಳೆಗೆ ತುಂಬಾ ಹಾನಿಗೊಳಗಾಗಿದೆ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಮತ್ತು ಹೈನಗಾರಿಕೆಯವರಿಗೆ ಹಾಗೂ ಕೃಷಿಕರಿಗೆ ಸಂಕಷ್ಟ ಎದುರಾಗಿದೆ.

READ ALSO

ಸುಮಾರು 100 ರಿಂದ 150 ಕುಟುಂಬಕ್ಕೂ ಹೆಚ್ಚು ಜನ ಕೊಲ್ಲಿ ದೇವಸ್ಥಾನದಿಂದ ದಿಡುಪೆಗೆ ಪಕ್ಕದ ಸಂಪರ್ಕ ಮಾಡುತ್ತಿರುವ ನೇತ್ರಾವತಿ ಕಿನಾರೆಯ ಕಲ್ಬೆಟ್ಟು ಎಂಬಲ್ಲಿನ ಸೇತುವೆ ಸಂಪೂರ್ಣ ಅಪಾಯದಲ್ಲಿ ಇದೆ.

ಸಾರ್ವಜನಿಕರಿಗೆ ಇನ್ನಷ್ಟು ತುಂಬಾ ತೊಂದರೆ ಆಗುವ ಸಂಭವವಿದ್ದು, ದಿಡುಪೆಯ ಮಲವಂತಿಗೆ ಹಾಗೂ ಮಿತ್ತಬಾಗಿಲು ಗ್ರಾಮಸ್ಥರ ಕೆಲವೊಂದು ಮನೆಗಳ ಸುತ್ತ ಮುತ್ತ ನೇತ್ರಾವತಿಯ ನೀರು ಈಗಾಲೇ ಹರಿಯುತಿದ್ದು ಮಲವಂತಿಗೆ ಗ್ರಾಮದ ಕಲ್ಬೆಟ್ಟು ಆನಂದ ಗೌಡ, ಜಯವರ್ಮ ಗೌಡ ಹಾಗೂ ಕುಂಞಣ್ಣ ಮತ್ತು ಪರಾರಿ ರಾಮಣ್ಣ ಗೌಡ ಆನಂದ ಗೌಡ ಇನ್ನಷ್ಟು ಜನರ ತೋಟಕ್ಕೆ ನೇತ್ರಾವತಿಯ ನದಿಯ ನೀರು ಹರಿದು ಕೃಷಿಗೆ ಹಾನಿಯಾಗಿದೆ.

ಮಿತ್ತಬಾಗಿಲು ಗ್ರಾಮದ ಕೆಳಗಿನಮನೆ ಕುಶಾಲಪ್ಪ ಗೌಡ ಕೃಷ್ಣಪ್ಪ ಗೌಡ ನಾರಾಯಣ ಗೌಡ ಇವರ ಮನೆಯ ಸುತ್ತ ಮುತ್ತ ನೀರು ಈಗಾಗಲೇ ಬಂದು ಇನ್ನಷ್ಟು ನೀರಿನ ಪ್ರಮಾಣ ಜಾಸ್ತಿ ಆಗುವ ಲಕ್ಷಣ ಇದೆ. ಆದ್ದರಿಂದ ಗ್ರಾಮಸ್ಥರು ಜಾಗೃತರಾಗಬೇಕು ನದಿಯ ಅಕ್ಕ ಪಕ್ಕದ ಜನರನ್ನು ಸ್ಥಳಾಂತರಿಸುವುದು ಒಳ್ಳೆಯದು ಎಂದು ನೆಹರು ಯುವ ಕೇಂದ್ರ ಬೆಳ್ತಂಗಡಿ ತಾಲೂಕ್ ಸಂಯೋಜಕರಾದ ತೀಕ್ಷಿತ್.ಕೆ ದಿಡುಪೆ ಸ್ಪಷ್ಟ ಪಡಿಸಿದ್ದಾರೆ.