ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪಮಾನವು ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ತೀವ್ರ ಉಷ್ಣತೆಯಿಂದ ಮಾನವರ ಜೊತೆಗೆ ಪ್ರಾಣಿ–ಪಕ್ಷಿಗಳೂ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿವೆ. ವಿಶೇಷವಾಗಿ ನೀರಿನ ಕೊರತೆಯಿಂದ ಅನೇಕ ಪಕ್ಷಿಗಳು ಹಾಗೂ ಪ್ರಾಣಿಗಳು ಜೀವಕ್ಕೆ ಹಾನಿಯಾಗುವ ಪರಿಸ್ಥಿತಿ ಎದುರಿಸುತ್ತಿವೆ.

ಈ ಹಿನ್ನೆಲೆದಲ್ಲಿ ಸಮಾಜದ ಪ್ರತಿಯೊಬ್ಬರೂ ಮಾನವೀಯತೆ ತೋರಿಸಿ ಪ್ರಾಣಿ–ಪಕ್ಷಿಗಳಿಗೆ ನೀರು ಒದಗಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಮನೆಗಳ ಮುಂಭಾಗ, ರಸ್ತೆ ಬದಿಗಳು, ಮರಗಳ ನೆರಳು ಪ್ರದೇಶಗಳಲ್ಲಿ ಮಣ್ಣಿನ ಪಾತ್ರೆಗಳು ಅಥವಾ ನೀರಿನ ಪಾತ್ರೆಗಳನ್ನು ಇಟ್ಟು ಸ್ವಚ್ಛವಾದ ನೀರನ್ನು ತುಂಬುವುದು ಅತ್ಯಂತ ಸರಳವಾದರೂ ಪರಿಣಾಮಕಾರಿ ಕಾರ್ಯವಾಗಿದೆ.
ಪಕ್ಷಿಗಳಿಗೆ ಸಣ್ಣ ಪಾತ್ರೆಗಳಲ್ಲಿ ನೀರು ಇಡುವುದರಿಂದ ಅವುಗಳಿಗೆ ಸುಲಭವಾಗಿ ನೀರು ಕುಡಿಯಲು ಸಾಧ್ಯವಾಗುತ್ತದೆ.
ಅದೇ ರೀತಿ, ಬೀದಿ ನಾಯಿಗಳು, ಹಸುಗಳು ಹಾಗೂ ಇತರ ಪ್ರಾಣಿಗಳಿಗೆ ಸ್ವಲ್ಪ ದೊಡ್ಡ ಪಾತ್ರೆಗಳಲ್ಲಿ ನೀರು ಇಡುವುದು ಅವುಗಳ ಜೀವ ರಕ್ಷಿಸಲು ಸಹಾಯಕವಾಗುತ್ತದೆ.
ಈ ಕಾರ್ಯದಲ್ಲಿ ಮಕ್ಕಳನ್ನೂ, ಯುವಕರನ್ನೂ ಸೇರಿಸಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಶಾಲೆಗಳು, ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಸಮಿತಿಗಳು ಸಹ ಈ ಕಾರ್ಯಕ್ಕೆ ಕೈಜೋಡಿಸಿ ಸಮಾಜದಲ್ಲಿ ಒಳ್ಳೆಯ ಸಂದೇಶವನ್ನು ಹರಡಬಹುದು.
ಒಂದು ಪಾತ್ರೆ ನೀರು ಅನೇಕ ಜೀವಗಳಿಗೆ ಜೀವದಾನವಾಗಬಹುದು.
ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಊರುಗಳಲ್ಲಿ ಈ ಸಣ್ಣ ಆದರೆ ಮಹತ್ವದ ಕಾರ್ಯವನ್ನು ಕೈಗೆತ್ತಿಕೊಳ್ಳೋಣ. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಪ್ರಾಣಿ–ಪಕ್ಷಿಗಳಿಗಾಗಿ ನೀರು ಇಡುವುದು ನಮ್ಮ ಸಾಮಾಜಿಕ ಹೊಣೆಗಾರಿಕೆಯಾಗಿದೆ.
ತಾವು ಮಾಡುವ ಮಹತ್ಕಾರ್ಯದ ಪೋಟೋ ವೀಡಿಯೋಗಳನ್ನು ವಿವರಗಳೊಂದಿಗೆ ನಮಗೆ ಕಳುಹಿಸಿ
kalanirnayanews@gmail.com
https://wa.me/qr/ZWQBUQQED3GBM1






