ಕೊರೋನಾ ವಿಷಾಣುವಿನ ಸಂಕಟದಿಂದಾಗಿ ಉದ್ಭವಿಸಿದ ಆಪತ್ಕಾಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ಹೇಗೆ ಮಾಡಬೇಕು ?

ಪ್ರತಿವರ್ಷ ಭಾರತದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ.
ಉತ್ಸವವನ್ನು ಆಚರಿಸುವಾಗ ಪ್ರಾಂತಗಳಿಗನುಸಾರ ಉತ್ಸವವನ್ನು ಆಚರಿಸುವ ಪದ್ಧತಿಯಲ್ಲಿ ಭಿನ್ನತೆ ಇರುತ್ತದೆ. ಉತ್ಸವದ ನಿಮಿತ್ತ ಬಹಳಷ್ಟು ಜನರು ಒಟ್ಟು ಸೇರಿ ಭಕ್ತಿಭಾವದಿಂದ ಈ ಉತ್ಸವವನ್ನು ಆಚರಿಸುತ್ತಾರೆ. ಈ ವರ್ಷ ಕೊರೋನಾ ವಿಷಾಣುಗಳ ಸಂಕಟದಿಂದಾಗಿ ಸಂಚಾರ ಸಾರಿಗೆ ನಿರ್ಬಂಧವಿದ್ದುದರಿಂದ ಮನೆಯಿಂದ ಹೊರಗೆ ಬರಲು ಅನೇಕ ಬಂಧನಗಳಿವೆ.

ಕೊರೋನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಈ ಉತ್ಸವವನ್ನು ಆಚರಿಸುವಲ್ಲಿ ಮಿತಿ ಬಂದಿದೆ. ಕೊರೋನಾ ವೈರಾಣುಗಳ ಹರಡುವಿಕೆಯಿಂದಾಗಿ ಎಲ್ಲಿ ಸಂಚಾರಸಾರಿಗೆ ನಿರ್ಬಂಧವಿದೆಯೋ (ಲಾಕ್‌ಡೌನ್) ಅಲ್ಲಿ ಒಟ್ಟಾಗಿ ಸೇರಿ ಪೂಜೆ ಮಾಡುವುದು ಅಸಾಧ್ಯವಿದೆ. ಆದರೆ ಎಲ್ಲಿ ಕೊರೋನಾ ವಿಷಾಣುಗಳ ಹರಡುವಿಕೆ ಕಡಿಮೆಯಿರುವುದರಿಂದ ಸಂಚಾರಸಾರಿಗೆ ನಿರ್ಬಂಧದ ನಿಯಮವು ಕೆಲವು ಪ್ರಮಾಣದಲ್ಲಿ ಸಡಿಲ ಗೊಳಿಸಲಾಗಿದೆಯೋ, ಅಲ್ಲಿ ಸರಕಾರವು ಕೊರೋನಾ ಸಂದರ್ಭದಲ್ಲಿ ಹೇಳಿದ ಮಾರ್ಗದರ್ಶಕ ಅಂಶಗಳನ್ನು ಪಾಲಿಸಿ ಕಡಿಮೆ ಜನರು ಸೇರಿ ಈ ಜನ್ಮೋತ್ಸವವನ್ನು ಆಚರಿಸಬೇಕು. ಇದರಿಂದ ಒಟ್ಟಿಗೆ ಸೇರದಿದ್ದರೂ ನಮ್ಮ ನಮ್ಮ ಮನೆಯಲ್ಲಿಯೇ ಶ್ರೀಕೃಷ್ಣಜನ್ಮಾಷ್ಟಮಿಯ ಪೂಜೆಯನ್ನು ಹೇಗೆ ಮಾಡಬಹುದು ಎಂಬ ಬಗ್ಗೆ ಈ ಲೇಖನದಲ್ಲಿ ಮುಖ್ಯವಾಗಿ ವಿಚಾರ ಮಾಡಲಾಗಿದೆ. ಹಿಂದೂ ಧರ್ಮವು ಹೇಳಿದ ‘ಆಪದ್ಧರ್ಮದ ಭಾಗವೆಂದು ಲೇಖನದಲ್ಲಿ ವಿವೇಚನೆಯನ್ನು ಮಾಡಲಾಗಿದೆ.

ಪ್ರತಿ ವರ್ಷ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಈ ವರ್ಷ 11.8.2020 ಈ ದಿನದಂದು ‘ಶ್ರೀಕೃಷ್ಣ ಜನ್ಮಾಷ್ಟಮಿ ಇದೆ.

೧. ಶ್ರೀಕೃಷ್ಣನ ಪೂಜೆಯ ಸಮಯ : ಶ್ರೀಕೃಷ್ಣನ ಜನ್ಮದ ಸಮಯವು ರಾತ್ರಿ 12 ಗಂಟೆಗಿರುತ್ತದೆ. ಆದುದರಿಂದ ಅದಕ್ಕೂ ಮೊದಲು ಪೂಜೆಯ ಎಲ್ಲ ತಯಾರಿಯನ್ನು ಮಾಡಿಟ್ಟು ಕೊಳ್ಳಬೇಕು. ರಾತ್ರಿ 12 ಗಂಟೆಗೆ ಸಾಧ್ಯವಿದ್ದರೆ ಶ್ರೀಕೃಷ್ಣಜನ್ಮದ ಜೋಗುಳವನ್ನು (ಹಾಡನ್ನು) ಹಚ್ಚಬೇಕು.

೨. ಶ್ರೀಕೃಷ್ಣನ ಪೂಜೆ

೨ ಅ. ಶ್ರೀಕೃಷ್ಣಜನ್ಮದ ಜೋಗುಳವಾದ ನಂತರ ಶ್ರೀಕೃಷ್ಣನ ಮೂರ್ತಿ ಅಥವಾ ಚಿತ್ರದ ಪೂಜೆಯನ್ನು ಮಾಡಬೇಕು.

೨ ಆ. ಷೋಡಷೋಪಚಾರ ಪೂಜೆ : ಯಾರಿಗೆ ಶ್ರೀಕೃಷ್ಣನ ‘ಷೋಡಷೋಪಚಾರ ಪೂಜೆ’ಯನ್ನು ಮಾಡುವುದು ಸಾಧ್ಯವಿದೆಯೋ, ಅವರು ಷೋಡಷೋಪಚಾರ ಪೂಜೆಯನ್ನು ಮಾಡಬೇಕು.

೨ ಇ. ಪಂಚೋಪಚಾರ ಪೂಜೆ : ಯಾರಿಗೆ ಶ್ರೀಕೃಷ್ಣನ ‘ಷೋಡಷೋಪಚಾರ ಪೂಜೆ’ಯನ್ನು ಮಾಡುವುದು ಸಾಧ್ಯವಿಲ್ಲವೋ, ಅವರು ‘ಪಂಚೋಪಚಾರ ಪೂಜೆ’ಯನ್ನು ಮಾಡಬೇಕು. ಪೂಜೆಯನ್ನು ಮಾಡುವಾಗ ‘ಸಪರಿವಾರಾಯ ಶ್ರೀಕೃಷ್ಣಾಯ ನಮಃ |’ ಈ ನಾಮಮಂತ್ರವನ್ನು ಹೇಳುತ್ತಾ ಒಂದೊಂದು ಉಪಚಾರವನ್ನು ಶ್ರೀಕೃಷ್ಣ ನಿಗೆ ಅರ್ಪಿಸಬೇಕು. ಶ್ರೀಕೃಷ್ಣನಿಗೆ ಮೊಸರವಲಕ್ಕಿ ಮತ್ತು ಬೆಣ್ಣೆಯ ನೈವೇದ್ಯವನ್ನು ತೋರಿಸಬೇಕು. ತದನಂತರ ಶ್ರೀಕೃಷ್ಣನಿಗೆ ಆರತಿಯನ್ನು ಮಾಡಬೇಕು. (ಪಂಚೋಪಚಾರ ಪೂಜೆ : ಗಂಧ, ಅರಿಶಿಣ-ಕುಂಕುಮ, ಪುಷ್ಪ, ಧೂಪ, ದೀಪ ಮತ್ತು ನೈವೇದ್ಯ ಈ ಕ್ರಮದಲ್ಲಿ ಪೂಜೆಯನ್ನು ಮಾಡಬೇಕು.)

೩. ಶ್ರೀಕೃಷ್ಣನ ಮಾನಸಪೂಜೆ
ಏನಾದರೂ ಕಾರಣದಿಂದ ಶ್ರೀಕೃಷ್ಣನ ಪ್ರತ್ಯಕ್ಷ ಪೂಜೆಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಶ್ರೀಕೃಷ್ಣನ ‘ಮಾನಸಪೂಜೆ’ಯನ್ನು ಮಾಡಬೇಕು. (‘ಮಾನಸಪೂಜೆ’ ಎಂದರೆ ಪೂಜೆಯ ಎಲ್ಲ ಉಪಚಾರಗಳನ್ನು ಮನಸ್ಸಿನಿಂದ ಶ್ರೀಕೃಷ್ಣನಿಗೆ ಅರ್ಪಿಸುವುದು.)

೪. ಪೂಜೆಯ ನಂತರ ನಾಮಜಪ ಮಾಡುವುದು
ಪೂಜೆಯಾದ ನಂತರ ಕೆಲವು ಸಮಯ ಶ್ರೀಕೃಷ್ಣನ ‘ಓಂ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಓಂ |’ ಈ ನಾಮಜಪವನ್ನು ಮಾಡಬೇಕು.

೫. ‘ಅರ್ಜುನನಂತೆ ಅಪಾರ ಭಕ್ತಿ ನಿರ್ಮಾಣವಾಗಲಿ’, ಎಂದು ಶ್ರೀಕೃಷ್ಣನಿಗೆ ಮನಃಪೂರ್ವಕ ಪ್ರಾರ್ಥನೆ ಮಾಡುವುದು.
ಇದರ ನಂತರ ಶ್ರೀಕೃಷ್ಣನು ಶ್ರೀಮದ್ಭಗವದ್ಗೀತೆ ಯಲ್ಲಿ ನೀಡಿದ ‘ನ ಮೇ ಭಕ್ತಃ ಪ್ರಣಶ್ಯತಿ |’ ಅಂದರೆ ‘ನನ್ನ ಭಕ್ತರ ನಾಶವಾಗುವುದಿಲ್ಲ.’ ಈ ವಚನವನ್ನು ಸ್ಮರಿಸಿ ನಮ್ಮಲ್ಲಿ ‘ಅರ್ಜುನನಂತೆ ಅಪಾರ ಭಕ್ತಿ ನಿರ್ಮಾಣವಾಗಲಿ’, ಎಂದು ಶ್ರೀಕೃಷ್ಣನಿಗೆ ಮನಃಪೂರ್ವಕ ಪ್ರಾರ್ಥನೆಯನ್ನು ಮಾಡಬೇಕು.

ಸೌಜನ್ಯ : ಸನಾತನ ಸಂಸ್ಥೆ

Spread the love
  • Related Posts

    ಕ್ಯಾನ್ಸರ್ ಪೀಡಿತ ರೋಗಿಗಳ ಪರವಾಗಿ ಸದನದಲ್ಲಿ ಧ್ವನಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

    ಬೆಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇಂದು ಸದನದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಅನುಕೂಲ ಆಗುವಂತೆ ಕೆಲವು ನಿಯಮಾವಳಿಗಳನ್ನು ತರುವಂತೆ ಆಗ್ರಹಿಸಿದರು ಕೇಂದ್ರ ಸರ್ಕಾರವು ಬಡವರಿಗೋಸ್ಕರ ಯೋಜಿಸಿರುವ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯನ್ನು ಪಡೆಯಲು ಮಂಗಳೂರಿನಲ್ಲಿರುವ ಪ್ರಸಿದ್ಧ ಕ್ಯಾನ್ಸರ್ ಆಸ್ಪತ್ರೆ…

    Spread the love

    ಮಳೆಗಾಳಿ ಲೆಕ್ಕಿಸದೆ ತಡರಾತ್ರಿಯಲ್ಲೂ ಕಾರ್ಯಪ್ರವೃತ್ತರಾದ ಮೇಸ್ಕಾಂ ಸಿಬ್ಬಂದಿ

    ಬೆಳ್ತಂಗಡಿ: ಮೆಸ್ಕಾಂ ಎಂದರೆ ದೂರುವರೇ ಹೆಚ್ಚು ದಿನಬೇಳಗಾದ್ರೆ ಮನೆ ಮನೆಗಳಲ್ಲಿ ನಿರಂತರ ಬೆಳಕು ಉರಿಯುತ್ತಲೆ ಇರಬೇಕು ಇಲ್ಲದಿದ್ದರೆ ಮನೆ ಮಾಲೀಕನಿಂದ ಹಿಡಿದು ಕುಟುಂಬದ ಎಲ್ಲಾ ಸದಸ್ಯರು ಹಿಡಿಶಾಪ ಹಾಕೋದು ಮಾತ್ರ ಮೆಸ್ಕಾಂ ಇಲಾಖೆ ಅಥವಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆದರೆ ಯಾವತ್ತೂ…

    Spread the love

    You Missed

    ಕ್ಯಾನ್ಸರ್ ಪೀಡಿತ ರೋಗಿಗಳ ಪರವಾಗಿ ಸದನದಲ್ಲಿ ಧ್ವನಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

    • By admin
    • July 23, 2024
    • 56 views
    ಕ್ಯಾನ್ಸರ್ ಪೀಡಿತ ರೋಗಿಗಳ ಪರವಾಗಿ ಸದನದಲ್ಲಿ ಧ್ವನಿಯಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ

    ಮಳೆಗಾಳಿ ಲೆಕ್ಕಿಸದೆ ತಡರಾತ್ರಿಯಲ್ಲೂ ಕಾರ್ಯಪ್ರವೃತ್ತರಾದ ಮೇಸ್ಕಾಂ ಸಿಬ್ಬಂದಿ

    • By admin
    • July 22, 2024
    • 147 views
    ಮಳೆಗಾಳಿ ಲೆಕ್ಕಿಸದೆ ತಡರಾತ್ರಿಯಲ್ಲೂ ಕಾರ್ಯಪ್ರವೃತ್ತರಾದ ಮೇಸ್ಕಾಂ ಸಿಬ್ಬಂದಿ

    ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ

    • By admin
    • July 21, 2024
    • 65 views
    ಶಿರೂರು ಗುಡ್ಡ ಕುಸಿತ  ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ  ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ

    ಮಾಣಿಯಲ್ಲಿ ಶ್ರೀಲಲಿತೆ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

    • By admin
    • July 21, 2024
    • 15 views
    ಮಾಣಿಯಲ್ಲಿ ಶ್ರೀಲಲಿತೆ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ

    ಉಜಿರೆಯ ಕಿರಣ್ ಅಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರದ ಕೊಡುಗೆ

    • By admin
    • July 21, 2024
    • 18 views
    ಉಜಿರೆಯ ಕಿರಣ್ ಅಗ್ರೋಟೆಕ್ ನಿಂದ ಸೇವಾಭಾರತಿಗೆ ಸೂಪರ್ ಗೋಲ್ಡ್ ಸ್ಪ್ರೇಯರ್(ಫಾಗ್) ಯಂತ್ರದ ಕೊಡುಗೆ

    ಮಂಗಳ ಲಕ್ಷದ್ವೀಪ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸುರಿದ ನೀರು ಪ್ರಯಾಣಿಕರು ಕಂಗಾಲು

    • By admin
    • July 21, 2024
    • 148 views
    ಮಂಗಳ ಲಕ್ಷದ್ವೀಪ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸುರಿದ ನೀರು ಪ್ರಯಾಣಿಕರು ಕಂಗಾಲು