ಕೊರೋನಾ ವಿಷಾಣುವಿನ ಸಂಕಟದಿಂದಾಗಿ ಉದ್ಭವಿಸಿದ ಆಪತ್ಕಾಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪೂಜೆಯನ್ನು ಹೇಗೆ ಮಾಡಬೇಕು ?

ಪ್ರತಿವರ್ಷ ಭಾರತದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ.
ಉತ್ಸವವನ್ನು ಆಚರಿಸುವಾಗ ಪ್ರಾಂತಗಳಿಗನುಸಾರ ಉತ್ಸವವನ್ನು ಆಚರಿಸುವ ಪದ್ಧತಿಯಲ್ಲಿ ಭಿನ್ನತೆ ಇರುತ್ತದೆ. ಉತ್ಸವದ ನಿಮಿತ್ತ ಬಹಳಷ್ಟು ಜನರು ಒಟ್ಟು ಸೇರಿ ಭಕ್ತಿಭಾವದಿಂದ ಈ ಉತ್ಸವವನ್ನು ಆಚರಿಸುತ್ತಾರೆ. ಈ ವರ್ಷ ಕೊರೋನಾ ವಿಷಾಣುಗಳ ಸಂಕಟದಿಂದಾಗಿ ಸಂಚಾರ ಸಾರಿಗೆ ನಿರ್ಬಂಧವಿದ್ದುದರಿಂದ ಮನೆಯಿಂದ ಹೊರಗೆ ಬರಲು ಅನೇಕ ಬಂಧನಗಳಿವೆ.

ಕೊರೋನಾದಂತಹ ಆಪತ್ಕಾಲದ ಹಿನ್ನೆಲೆಯಲ್ಲಿ ಎಲ್ಲರೂ ಸೇರಿ ಈ ಉತ್ಸವವನ್ನು ಆಚರಿಸುವಲ್ಲಿ ಮಿತಿ ಬಂದಿದೆ. ಕೊರೋನಾ ವೈರಾಣುಗಳ ಹರಡುವಿಕೆಯಿಂದಾಗಿ ಎಲ್ಲಿ ಸಂಚಾರಸಾರಿಗೆ ನಿರ್ಬಂಧವಿದೆಯೋ (ಲಾಕ್‌ಡೌನ್) ಅಲ್ಲಿ ಒಟ್ಟಾಗಿ ಸೇರಿ ಪೂಜೆ ಮಾಡುವುದು ಅಸಾಧ್ಯವಿದೆ. ಆದರೆ ಎಲ್ಲಿ ಕೊರೋನಾ ವಿಷಾಣುಗಳ ಹರಡುವಿಕೆ ಕಡಿಮೆಯಿರುವುದರಿಂದ ಸಂಚಾರಸಾರಿಗೆ ನಿರ್ಬಂಧದ ನಿಯಮವು ಕೆಲವು ಪ್ರಮಾಣದಲ್ಲಿ ಸಡಿಲ ಗೊಳಿಸಲಾಗಿದೆಯೋ, ಅಲ್ಲಿ ಸರಕಾರವು ಕೊರೋನಾ ಸಂದರ್ಭದಲ್ಲಿ ಹೇಳಿದ ಮಾರ್ಗದರ್ಶಕ ಅಂಶಗಳನ್ನು ಪಾಲಿಸಿ ಕಡಿಮೆ ಜನರು ಸೇರಿ ಈ ಜನ್ಮೋತ್ಸವವನ್ನು ಆಚರಿಸಬೇಕು. ಇದರಿಂದ ಒಟ್ಟಿಗೆ ಸೇರದಿದ್ದರೂ ನಮ್ಮ ನಮ್ಮ ಮನೆಯಲ್ಲಿಯೇ ಶ್ರೀಕೃಷ್ಣಜನ್ಮಾಷ್ಟಮಿಯ ಪೂಜೆಯನ್ನು ಹೇಗೆ ಮಾಡಬಹುದು ಎಂಬ ಬಗ್ಗೆ ಈ ಲೇಖನದಲ್ಲಿ ಮುಖ್ಯವಾಗಿ ವಿಚಾರ ಮಾಡಲಾಗಿದೆ. ಹಿಂದೂ ಧರ್ಮವು ಹೇಳಿದ ‘ಆಪದ್ಧರ್ಮದ ಭಾಗವೆಂದು ಲೇಖನದಲ್ಲಿ ವಿವೇಚನೆಯನ್ನು ಮಾಡಲಾಗಿದೆ.

ಪ್ರತಿ ವರ್ಷ ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಈ ವರ್ಷ 11.8.2020 ಈ ದಿನದಂದು ‘ಶ್ರೀಕೃಷ್ಣ ಜನ್ಮಾಷ್ಟಮಿ ಇದೆ.

೧. ಶ್ರೀಕೃಷ್ಣನ ಪೂಜೆಯ ಸಮಯ : ಶ್ರೀಕೃಷ್ಣನ ಜನ್ಮದ ಸಮಯವು ರಾತ್ರಿ 12 ಗಂಟೆಗಿರುತ್ತದೆ. ಆದುದರಿಂದ ಅದಕ್ಕೂ ಮೊದಲು ಪೂಜೆಯ ಎಲ್ಲ ತಯಾರಿಯನ್ನು ಮಾಡಿಟ್ಟು ಕೊಳ್ಳಬೇಕು. ರಾತ್ರಿ 12 ಗಂಟೆಗೆ ಸಾಧ್ಯವಿದ್ದರೆ ಶ್ರೀಕೃಷ್ಣಜನ್ಮದ ಜೋಗುಳವನ್ನು (ಹಾಡನ್ನು) ಹಚ್ಚಬೇಕು.

೨. ಶ್ರೀಕೃಷ್ಣನ ಪೂಜೆ

೨ ಅ. ಶ್ರೀಕೃಷ್ಣಜನ್ಮದ ಜೋಗುಳವಾದ ನಂತರ ಶ್ರೀಕೃಷ್ಣನ ಮೂರ್ತಿ ಅಥವಾ ಚಿತ್ರದ ಪೂಜೆಯನ್ನು ಮಾಡಬೇಕು.

೨ ಆ. ಷೋಡಷೋಪಚಾರ ಪೂಜೆ : ಯಾರಿಗೆ ಶ್ರೀಕೃಷ್ಣನ ‘ಷೋಡಷೋಪಚಾರ ಪೂಜೆ’ಯನ್ನು ಮಾಡುವುದು ಸಾಧ್ಯವಿದೆಯೋ, ಅವರು ಷೋಡಷೋಪಚಾರ ಪೂಜೆಯನ್ನು ಮಾಡಬೇಕು.

೨ ಇ. ಪಂಚೋಪಚಾರ ಪೂಜೆ : ಯಾರಿಗೆ ಶ್ರೀಕೃಷ್ಣನ ‘ಷೋಡಷೋಪಚಾರ ಪೂಜೆ’ಯನ್ನು ಮಾಡುವುದು ಸಾಧ್ಯವಿಲ್ಲವೋ, ಅವರು ‘ಪಂಚೋಪಚಾರ ಪೂಜೆ’ಯನ್ನು ಮಾಡಬೇಕು. ಪೂಜೆಯನ್ನು ಮಾಡುವಾಗ ‘ಸಪರಿವಾರಾಯ ಶ್ರೀಕೃಷ್ಣಾಯ ನಮಃ |’ ಈ ನಾಮಮಂತ್ರವನ್ನು ಹೇಳುತ್ತಾ ಒಂದೊಂದು ಉಪಚಾರವನ್ನು ಶ್ರೀಕೃಷ್ಣ ನಿಗೆ ಅರ್ಪಿಸಬೇಕು. ಶ್ರೀಕೃಷ್ಣನಿಗೆ ಮೊಸರವಲಕ್ಕಿ ಮತ್ತು ಬೆಣ್ಣೆಯ ನೈವೇದ್ಯವನ್ನು ತೋರಿಸಬೇಕು. ತದನಂತರ ಶ್ರೀಕೃಷ್ಣನಿಗೆ ಆರತಿಯನ್ನು ಮಾಡಬೇಕು. (ಪಂಚೋಪಚಾರ ಪೂಜೆ : ಗಂಧ, ಅರಿಶಿಣ-ಕುಂಕುಮ, ಪುಷ್ಪ, ಧೂಪ, ದೀಪ ಮತ್ತು ನೈವೇದ್ಯ ಈ ಕ್ರಮದಲ್ಲಿ ಪೂಜೆಯನ್ನು ಮಾಡಬೇಕು.)

೩. ಶ್ರೀಕೃಷ್ಣನ ಮಾನಸಪೂಜೆ
ಏನಾದರೂ ಕಾರಣದಿಂದ ಶ್ರೀಕೃಷ್ಣನ ಪ್ರತ್ಯಕ್ಷ ಪೂಜೆಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಶ್ರೀಕೃಷ್ಣನ ‘ಮಾನಸಪೂಜೆ’ಯನ್ನು ಮಾಡಬೇಕು. (‘ಮಾನಸಪೂಜೆ’ ಎಂದರೆ ಪೂಜೆಯ ಎಲ್ಲ ಉಪಚಾರಗಳನ್ನು ಮನಸ್ಸಿನಿಂದ ಶ್ರೀಕೃಷ್ಣನಿಗೆ ಅರ್ಪಿಸುವುದು.)

೪. ಪೂಜೆಯ ನಂತರ ನಾಮಜಪ ಮಾಡುವುದು
ಪೂಜೆಯಾದ ನಂತರ ಕೆಲವು ಸಮಯ ಶ್ರೀಕೃಷ್ಣನ ‘ಓಂ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಓಂ |’ ಈ ನಾಮಜಪವನ್ನು ಮಾಡಬೇಕು.

೫. ‘ಅರ್ಜುನನಂತೆ ಅಪಾರ ಭಕ್ತಿ ನಿರ್ಮಾಣವಾಗಲಿ’, ಎಂದು ಶ್ರೀಕೃಷ್ಣನಿಗೆ ಮನಃಪೂರ್ವಕ ಪ್ರಾರ್ಥನೆ ಮಾಡುವುದು.
ಇದರ ನಂತರ ಶ್ರೀಕೃಷ್ಣನು ಶ್ರೀಮದ್ಭಗವದ್ಗೀತೆ ಯಲ್ಲಿ ನೀಡಿದ ‘ನ ಮೇ ಭಕ್ತಃ ಪ್ರಣಶ್ಯತಿ |’ ಅಂದರೆ ‘ನನ್ನ ಭಕ್ತರ ನಾಶವಾಗುವುದಿಲ್ಲ.’ ಈ ವಚನವನ್ನು ಸ್ಮರಿಸಿ ನಮ್ಮಲ್ಲಿ ‘ಅರ್ಜುನನಂತೆ ಅಪಾರ ಭಕ್ತಿ ನಿರ್ಮಾಣವಾಗಲಿ’, ಎಂದು ಶ್ರೀಕೃಷ್ಣನಿಗೆ ಮನಃಪೂರ್ವಕ ಪ್ರಾರ್ಥನೆಯನ್ನು ಮಾಡಬೇಕು.

ಸೌಜನ್ಯ : ಸನಾತನ ಸಂಸ್ಥೆ

Spread the love
  • Related Posts

    ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ಉಚಿತ ಮೊಬೈಲ್‌ ಫೋನ್‌ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

    ಉಜಿರೆ: ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಮೊಬೈಲ್‌ ಫೋನ್‌ ರಿಪೇರಿ ತರಬೇತಿಯನ್ನು ಆಯೋಜಿಸಿದ್ದು ದಿನಾಂಕ: 17.03.2025 ರಿಂದ 15.04.2025ರ ವರೆಗೆ (30ದಿನ) ತರಬೇತಿ ನಡೆಯುತ್ತದೆ. ತರಬೇತಿಯು ಊಟ, ವಸತಿಯೊಂದಿಗೆ ಉಚಿತವಾಗಿದ್ದು 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ ಭಾಗವಹಿಸಿಸುವವರು ಈ ಕೆಳಗಿನ ಲಿಂಕ್…

    Spread the love

    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    ಮಡಿಕೇರಿ:- ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಶ್ರೀ ಕಾವೇರಿ ಕೃಪಾ ವಿಶ್ವಕಲ್ಯಾಣ ಸೇವಾ ಸಮಿತಿ(ರಿ.), ಅಶ್ವಿನಿ ಆಸ್ಪತ್ರೆ ಮಡಿಕೇರಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕೊಡಗು ಶಾಖೆ…

    Spread the love

    You Missed

    ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ಉಚಿತ ಮೊಬೈಲ್‌ ಫೋನ್‌ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

    • By admin
    • March 15, 2025
    • 68 views
    ರುಡ್ ಸೆಟ್ ಸಂಸ್ಥೆ ಉಜಿರೆಯಲ್ಲಿ ಉಚಿತ ಮೊಬೈಲ್‌ ಫೋನ್‌ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ

    ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

    • By admin
    • February 21, 2025
    • 54 views
    ಯನಪೋಯ ಆರ್ಟ್ಸ್ ಸೈನ್ಸ್ ಕಾಮರ್ಸ್ ಪದವಿ ವಿದ್ಯಾರ್ಥಿಗಳಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರಳಿಕಟ್ಟೆಯಲ್ಲಿ ಎನ್ ಎಸ್ ಎಸ್ ಶಿಬಿರ

    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    • By admin
    • February 15, 2025
    • 63 views
    ಸೇವಾಧಾಮ – ಸೇವಾಭಾರತಿ ಕೊಡಗು ಜಿಲ್ಲೆ ಇದರ ಆಶ್ರಯದಲ್ಲಿ ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ

    ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ’ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ’

    • By admin
    • February 15, 2025
    • 231 views
    ಗ್ರಾಮಗಳಲ್ಲಿ ಕಿರು ಉದ್ದಿಮೆಗಳ ಮೂಲಕ ಲಕ್ಷಾಂತರ ಸ್ವ ಉದ್ಯೋಗಗಳನ್ನು ಸೃಷ್ಟಿಸಿದ ಗ್ರಾಮಾಭಿವೃದ್ಧಿ ಯೋಜನೆಗೆ’ ಎಂ.ಎಸ್.ಎಂ.ಇ. ಬ್ಯಾಂಕಿಂಗ್ ಶ್ರೇಷ್ಠತಾ ಪ್ರಶಸ್ತಿ’

    ತುಳುನಾಡಿನ ಕೆಡ್ಡಸ ಹಬ್ಬದ ಆಚರಣೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ತುಳುನಾಡ ಕಂಪನ್ನು ರಾಷ್ಟ್ರ ರಾಜಧಾನಿಯಲ್ಲಿ ಪಸರಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟರು

    • By admin
    • February 12, 2025
    • 85 views
    ತುಳುನಾಡಿನ ಕೆಡ್ಡಸ ಹಬ್ಬದ ಆಚರಣೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ತುಳುನಾಡ ಕಂಪನ್ನು ರಾಷ್ಟ್ರ ರಾಜಧಾನಿಯಲ್ಲಿ ಪಸರಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟರು

    ಕಡಿರುದ್ಯಾವರ ಗ್ರಾಮದ ಬೆಳ್ಳೂರು ಕ್ರಾಸ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ

    • By admin
    • February 12, 2025
    • 160 views
    ಕಡಿರುದ್ಯಾವರ ಗ್ರಾಮದ ಬೆಳ್ಳೂರು ಕ್ರಾಸ್ ಬಳಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ