ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ರಜತ ಸಂಭ್ರಮ ಕಾರ್ಯಕ್ರಮ ಹಾಗೂ ನೂತನ ವಿಸ್ತೃತ ಕಟ್ಟಡದ ಲೋಕಾರ್ಪಣೆ

ಉಜಿರೆ : ಉಜಿರೆಯ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೂತನ ವಿಸ್ತೃತ ಕಟ್ಟಡದ ಲೋಕಾರ್ಪಣೆ ಮತ್ತು ರಜತ ಸಂಭ್ರಮ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಈ ಭಾಗದ ಜನರ ಆಯುಷ್ಯ ಹೆಚ್ಚು ಮಾಡುವಲ್ಲಿ ಬೆನಕ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ವೈದ್ಯರು ಮತ್ತು ಬಳಗದೊಂದಿಗೆ ಕೆಲಸ ಮಾಡುತ್ತಿದ್ದಾರೆ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಗ್ರಾಮೀಣ ಭಾಗದ ಜನರು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಹೋಗಬೇಕಾಗುತ್ತೆ. ಅಂಥಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಆರೋಗ್ಯ ಸೇವೆಯನ್ನು ಈ ದಂಪತಿ ವೈದ್ಯರು ನೀಡುತ್ತಿದ್ದಾರೆ. ಅದ್ಭುತವಾದ ತುರ್ತು ನಿಗಾ ಘಟಕ ಇದೆ, ಎಲ್ಲವೂ ವ್ಯವಸ್ಥಿತವಾಗಿದೆ ಪ್ರಸ್ತುತ 130 ಅಲ್ಲ 500 ಹಾಸಿಗೆಯ ಆಸ್ಪತ್ರೆ ಆಗಲಿ ಎಂದು ಇದೇ ವೇಳೆ ಹಾರೈಸಿದರು. ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ ಕಟ್ಟಿದ್ದೀರಾ ಅಂದ್ರೆ ಬಡವರಿಗಾಗಿ ಮಾಡಿದ್ದೀರಾ ಅನ್ನೋದು ಗೊತ್ತಾಗುತ್ತೆ , ಬಡ ಜನರ ಬಗ್ಗೆ ಗಮನ ಇಟ್ಟುಕೊಂಡು ನಿಮ್ಮ ಆಸ್ಪತ್ರೆ ಮುಂದುವರೆಯಲಿ ಎಂದು ಮನವಿ ಮಾಡಿದರು.

ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾತನಾಡಿದ ಕುಟುಂಬದ ಸದಸ್ಯರೆಲ್ಲ ಸೇರಿ ಈ ತಾಲೂಕಿನ ಜನರ ಆರೋಗ್ಯ ಸೇವೆಯನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ, ಇದು ನಿಜಕ್ಕೂ ದೊಡ್ಡ ಶ್ಲಾಘಿಸಿಬೇಕಾದ ಸಾಧನೆ ಎಂದರು. ಗ್ರಾಮೀಣ ಪ್ರದೇಶವಾದಂತಹ ಉಜಿರೆಯಲ್ಲಿ ಒಂದು ದೊಡ್ಡ ಆಸ್ಪತ್ರೆ ಕಟ್ಟಿ ಕೆಲಸ ಮಾಡುತ್ತಿದ್ದೀರಾ ನಿಮಗೆ ನನ್ನ ಮೊದಲ ಅಭಿನಂದನೆ ಎಂದರು. ಬೆನಕ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳನ್ನು ಅತ್ಯಂತ ಪ್ರೀತಿ ಇಂದ ನಗು ಮುಖದಿಂದ ನೋಡುತ್ತಾರೆ ಸಿಬ್ಬಂದಿಗಳಿಗೂ ನನ್ನ ಅಭಿನಂದನೆ ಎಂದರು.

ವಿಸ್ತೃತ ಕಟ್ಟಡ ಉದ್ಘಾಟನೆ

ನೂತನ ವಿಸ್ತರಣಾ ಕಟ್ಟಡದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ನಡೆಸಿದರು. ನೂತನ ಕಟ್ಟಡದ ಕ್ಯಾಶುವಲ್ಟಿ ವಿಭಾಗ, ಡೇ ಕೇರ್ ವಿಭಾಗ, ಮಕ್ಕಳ ವಿಭಾಗ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಬೆನಕ ಆಸ್ಪತ್ರೆಯ ಎಂ.ಡಿ. ಡಾ. ಗೋಪಾಲಕೃಷ್ಣ ಸ್ವಾಗತಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ , ಬೆಸ್ಟ್ ಫೌಂಡೇಶನ್ ನಿರ್ದೇಶಕ ರಕ್ಷಿತ್ ಶಿವರಾಮ್ , ಐಎಎಸ್ ಅಧಿಕಾರಿ ನವೀನ್ ಭಟ್ , ಡಾ. ಭಾರತಿ , ಡಾ. ಅಂಕಿತಾ ಭಟ್ , ಡಾ. ರೋಹಿತ್ ಭಟ್ , ಡಾ.ಆದಿತ್ಯ ರಾವ್ , ಉಜಿರೆ ಪಂಚಾಯತ್ ಅಧಕ್ಷೆ ಉಷಾ ಕಾರಂತ್ , ರವಿ ಬರಮೇಲು ಮತ್ತಿತರು ಉಪಸ್ಥಿತರಿದ್ದರು.

Spread the love
  • Related Posts

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ವತಿಯಿಂದ ಕು.ಪ್ರಾಪ್ತಿ ಎಂ ಗೌಡರಿಗೆ ಗೌರವ ಸನ್ಮಾನ

    ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಸ್ವಸ್ತಿ ನಿಲಯದ ಬೆಳ್ತಂಗಡಿ ವಾಣಿ ಕಾಲೇಜಿನ ಉಪನ್ಯಾಸಕ ದಂಪತಿಗಲಾದ ಶ್ರೀಮತಿ ಮೀನಾಕ್ಷಿ ಮತ್ತು ಮಹಾಬಲ ಗೌಡ ಇವರ ಸುಪುತ್ರಿ ಕು.ಪ್ರಾಪ್ತಿ ಎಂ ಗೌಡ ಇವರು ನೃತ್ಯ ಕಲೆ ಹಾಗೂ ಭಾಷಣ ಕಲೆಯಲ್ಲಿ ಸಾಧನೆಯನ್ನು ಮಾಡಿ 2025-26…

    Spread the love

    SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 6ಸ್ಥಾನ ಪಡೆದ ಪ್ರಾಪ್ತಿ.ಎಂ ಗೌಡ, ಪ್ರಗತಿ ಸಂಘದಿಂದ ವಿದ್ಯಾರ್ಥಿನಿಗೆ ಸನ್ಮಾನ

    ಬೆಳ್ತಂಗಡಿ: 2025-26ನೇ ಸಾಲಿನ SSLC ಪರೀಕ್ಷೆಯಲ್ಲಿ ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕುವೆಟ್ಟು ಗ್ರಾಮದ ಶಕ್ತಿನಗರ ನಿವಾಸಿ ಪ್ರಗತಿ ಸ್ವ-ಸಹಾಯ ಸಂಘದ ಸದಸ್ಯರಾಗಿರುವ ಮಿನಾಕ್ಷಿ ಮತ್ತು ಮಹಾಬಲಗೌಡ ದಂಪತಿಯ ಪುತ್ರಿ ಕುIಪ್ರಾಪ್ತಿ ಎಂ. ಗೌಡ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ, ಜಿಲ್ಲಾ…

    Spread the love

    You Missed

    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ವತಿಯಿಂದ ಕು.ಪ್ರಾಪ್ತಿ ಎಂ ಗೌಡರಿಗೆ ಗೌರವ ಸನ್ಮಾನ

    • By admin
    • April 28, 2026
    • 23 views
    ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ವತಿಯಿಂದ ಕು.ಪ್ರಾಪ್ತಿ ಎಂ ಗೌಡರಿಗೆ ಗೌರವ ಸನ್ಮಾನ

    SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 6ಸ್ಥಾನ ಪಡೆದ ಪ್ರಾಪ್ತಿ.ಎಂ ಗೌಡ, ಪ್ರಗತಿ ಸಂಘದಿಂದ ವಿದ್ಯಾರ್ಥಿನಿಗೆ ಸನ್ಮಾನ

    • By admin
    • April 28, 2026
    • 57 views
    SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 6ಸ್ಥಾನ ಪಡೆದ ಪ್ರಾಪ್ತಿ.ಎಂ ಗೌಡ, ಪ್ರಗತಿ ಸಂಘದಿಂದ ವಿದ್ಯಾರ್ಥಿನಿಗೆ ಸನ್ಮಾನ

    ಮಾಲಾಡಿ–ಪುರಿಯ ರಸ್ತೆ ಡಾಮರೀಕರಣ ಕಾಮಗಾರಿಗೆ ಚಾಲನೆ: ಶಾಸಕ ಹರೀಶ್ ಪೂಂಜ

    • By admin
    • April 27, 2026
    • 19 views
    ಮಾಲಾಡಿ–ಪುರಿಯ ರಸ್ತೆ ಡಾಮರೀಕರಣ ಕಾಮಗಾರಿಗೆ ಚಾಲನೆ: ಶಾಸಕ ಹರೀಶ್ ಪೂಂಜ

    ಚಾರ್ಮಾಡಿ ಘಾಟ್ ನಲ್ಲಿ ಗೂಡ್ಸ್ ವಾಹನ ಪಲ್ಟಿ

    • By admin
    • April 26, 2026
    • 77 views
    ಚಾರ್ಮಾಡಿ ಘಾಟ್ ನಲ್ಲಿ ಗೂಡ್ಸ್ ವಾಹನ ಪಲ್ಟಿ

    ಜಾಗಕ್ಕೆ ಅಕ್ರಮ ಪ್ರವೇಶಗೈದು ಪರವಾನಿಗೆ ಇಲ್ಲದ ಗನ್ ನಿಂದ ಹಲ್ಲೆ!! 8ಮಂದಿಯ ವಿರುದ್ಧ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು

    • By admin
    • April 26, 2026
    • 74 views
    ಜಾಗಕ್ಕೆ ಅಕ್ರಮ ಪ್ರವೇಶಗೈದು ಪರವಾನಿಗೆ ಇಲ್ಲದ ಗನ್ ನಿಂದ ಹಲ್ಲೆ!! 8ಮಂದಿಯ ವಿರುದ್ಧ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು

    ಬೆಳ್ತಂಗಡಿ : ಗರ್ಡಾಡಿ ಖಾಸಗಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಲ್ಲೆ, ವಕೀಲೆ ಸಮೇತ ಮೂವರ ವಿರುದ್ಧ ಪ್ರಕರಣ ದಾಖಲು

    • By admin
    • April 25, 2026
    • 78 views
    ಬೆಳ್ತಂಗಡಿ : ಗರ್ಡಾಡಿ ಖಾಸಗಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಲ್ಲೆ, ವಕೀಲೆ ಸಮೇತ ಮೂವರ ವಿರುದ್ಧ ಪ್ರಕರಣ ದಾಖಲು