ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ರಜತ ಸಂಭ್ರಮ ಕಾರ್ಯಕ್ರಮ ಹಾಗೂ ನೂತನ ವಿಸ್ತೃತ ಕಟ್ಟಡದ ಲೋಕಾರ್ಪಣೆ

ಉಜಿರೆ : ಉಜಿರೆಯ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೂತನ ವಿಸ್ತೃತ ಕಟ್ಟಡದ ಲೋಕಾರ್ಪಣೆ ಮತ್ತು ರಜತ ಸಂಭ್ರಮ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಈ ಭಾಗದ ಜನರ ಆಯುಷ್ಯ ಹೆಚ್ಚು ಮಾಡುವಲ್ಲಿ ಬೆನಕ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ವೈದ್ಯರು ಮತ್ತು ಬಳಗದೊಂದಿಗೆ ಕೆಲಸ ಮಾಡುತ್ತಿದ್ದಾರೆ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಗ್ರಾಮೀಣ ಭಾಗದ ಜನರು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಹೋಗಬೇಕಾಗುತ್ತೆ. ಅಂಥಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಆರೋಗ್ಯ ಸೇವೆಯನ್ನು ಈ ದಂಪತಿ ವೈದ್ಯರು ನೀಡುತ್ತಿದ್ದಾರೆ. ಅದ್ಭುತವಾದ ತುರ್ತು ನಿಗಾ ಘಟಕ ಇದೆ, ಎಲ್ಲವೂ ವ್ಯವಸ್ಥಿತವಾಗಿದೆ ಪ್ರಸ್ತುತ 130 ಅಲ್ಲ 500 ಹಾಸಿಗೆಯ ಆಸ್ಪತ್ರೆ ಆಗಲಿ ಎಂದು ಇದೇ ವೇಳೆ ಹಾರೈಸಿದರು. ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ ಕಟ್ಟಿದ್ದೀರಾ ಅಂದ್ರೆ ಬಡವರಿಗಾಗಿ ಮಾಡಿದ್ದೀರಾ ಅನ್ನೋದು ಗೊತ್ತಾಗುತ್ತೆ , ಬಡ ಜನರ ಬಗ್ಗೆ ಗಮನ ಇಟ್ಟುಕೊಂಡು ನಿಮ್ಮ ಆಸ್ಪತ್ರೆ ಮುಂದುವರೆಯಲಿ ಎಂದು ಮನವಿ ಮಾಡಿದರು.

ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾತನಾಡಿದ ಕುಟುಂಬದ ಸದಸ್ಯರೆಲ್ಲ ಸೇರಿ ಈ ತಾಲೂಕಿನ ಜನರ ಆರೋಗ್ಯ ಸೇವೆಯನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ, ಇದು ನಿಜಕ್ಕೂ ದೊಡ್ಡ ಶ್ಲಾಘಿಸಿಬೇಕಾದ ಸಾಧನೆ ಎಂದರು. ಗ್ರಾಮೀಣ ಪ್ರದೇಶವಾದಂತಹ ಉಜಿರೆಯಲ್ಲಿ ಒಂದು ದೊಡ್ಡ ಆಸ್ಪತ್ರೆ ಕಟ್ಟಿ ಕೆಲಸ ಮಾಡುತ್ತಿದ್ದೀರಾ ನಿಮಗೆ ನನ್ನ ಮೊದಲ ಅಭಿನಂದನೆ ಎಂದರು. ಬೆನಕ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳನ್ನು ಅತ್ಯಂತ ಪ್ರೀತಿ ಇಂದ ನಗು ಮುಖದಿಂದ ನೋಡುತ್ತಾರೆ ಸಿಬ್ಬಂದಿಗಳಿಗೂ ನನ್ನ ಅಭಿನಂದನೆ ಎಂದರು.

ವಿಸ್ತೃತ ಕಟ್ಟಡ ಉದ್ಘಾಟನೆ

ನೂತನ ವಿಸ್ತರಣಾ ಕಟ್ಟಡದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ನಡೆಸಿದರು. ನೂತನ ಕಟ್ಟಡದ ಕ್ಯಾಶುವಲ್ಟಿ ವಿಭಾಗ, ಡೇ ಕೇರ್ ವಿಭಾಗ, ಮಕ್ಕಳ ವಿಭಾಗ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಬೆನಕ ಆಸ್ಪತ್ರೆಯ ಎಂ.ಡಿ. ಡಾ. ಗೋಪಾಲಕೃಷ್ಣ ಸ್ವಾಗತಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ , ಬೆಸ್ಟ್ ಫೌಂಡೇಶನ್ ನಿರ್ದೇಶಕ ರಕ್ಷಿತ್ ಶಿವರಾಮ್ , ಐಎಎಸ್ ಅಧಿಕಾರಿ ನವೀನ್ ಭಟ್ , ಡಾ. ಭಾರತಿ , ಡಾ. ಅಂಕಿತಾ ಭಟ್ , ಡಾ. ರೋಹಿತ್ ಭಟ್ , ಡಾ.ಆದಿತ್ಯ ರಾವ್ , ಉಜಿರೆ ಪಂಚಾಯತ್ ಅಧಕ್ಷೆ ಉಷಾ ಕಾರಂತ್ , ರವಿ ಬರಮೇಲು ಮತ್ತಿತರು ಉಪಸ್ಥಿತರಿದ್ದರು.

Spread the love
  • Related Posts

    ಮೀನುಗಾರರ ಬದುಕಲ್ಲಿ ಪವಾಡ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ 770 ಗ್ರಾಂ ಬೆಳ್ಳಿಯ ಬೆಳ್ಳಿಯ ‘ರಾಣಿ ಮೀನು’ ಹಾರ ಅರ್ಪಣೆ

    ಧರ್ಮಸ್ಥಳ, ಆ. 4: ಶ್ರೀ ಕ್ಷೇತ್ರ ಧರ್ಮಸ್ಥಳದ ಅಧಿದೈವ ಶ್ರೀ ಮಂಜುನಾಥ ಸ್ವಾಮಿಯ ಮೇಲಿನ ಅಚಲ ಭಕ್ತಿ ಮತ್ತು ಕೃತಜ್ಞತೆಯ ಸಂಕೇತವಾಗಿ ಉಡುಪಿ ಕರಾವಳಿಯ ಆಳಸಮುದ್ರ ಟ್ರಾಲ್ ಬೋಟ್ ಮೀನುಗಾರರು 770 ಗ್ರಾಂ ತೂಕದ ಬೆಳ್ಳಿಯ ‘ರಾಣಿ ಮೀನು’ ಹಾರವನ್ನು ಸಮರ್ಪಿಸಿದ್ದಾರೆ.…

    Spread the love

    ಸಕಲೇಶಪುರ: ಬೈಕೆರೆ ಗ್ರಾಮದಲ್ಲಿ 300 ಹಣ್ಣಿನ ಗಿಡಗಳ ನೆಡುವ ಮೂಲಕ ಪ್ರಾಣಿ–ಪಕ್ಷಿಗಳ ಆಹಾರ ಸಂರಕ್ಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ವಿಶೇಷ ಅಭಿಯಾನ

    ಸಕಲೇಶಪುರ, ಆ. 3: ಕಾಡು ಪ್ರಾಣಿಗಳು ಹಾಗೂ ಪಕ್ಷಿಗಳು ಆಹಾರ ಅರಸಿ ಕಾಡಿನಿಂದ ಗ್ರಾಮಗಳಿಗೆ ಬರುತ್ತಿರುವುದರಿಂದ ಮಾನವ–ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಹಾಗೂ ವನ್ಯಜೀವಿಗಳಿಗೆ ಕಾಡಿನಲ್ಲೇ ಆಹಾರ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಶ್ರೀ…

    Spread the love

    You Missed

    ಮೀನುಗಾರರ ಬದುಕಲ್ಲಿ ಪವಾಡ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ 770 ಗ್ರಾಂ ಬೆಳ್ಳಿಯ ಬೆಳ್ಳಿಯ ‘ರಾಣಿ ಮೀನು’ ಹಾರ ಅರ್ಪಣೆ

    • By admin
    • August 4, 2026
    • 2 views
    ಮೀನುಗಾರರ ಬದುಕಲ್ಲಿ ಪವಾಡ – ಧರ್ಮಸ್ಥಳ ಮಂಜುನಾಥ ಸ್ವಾಮಿಗೆ 770 ಗ್ರಾಂ ಬೆಳ್ಳಿಯ ಬೆಳ್ಳಿಯ ‘ರಾಣಿ ಮೀನು’ ಹಾರ ಅರ್ಪಣೆ

    ಸಕಲೇಶಪುರ: ಬೈಕೆರೆ ಗ್ರಾಮದಲ್ಲಿ 300 ಹಣ್ಣಿನ ಗಿಡಗಳ ನೆಡುವ ಮೂಲಕ ಪ್ರಾಣಿ–ಪಕ್ಷಿಗಳ ಆಹಾರ ಸಂರಕ್ಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ವಿಶೇಷ ಅಭಿಯಾನ

    • By admin
    • August 3, 2026
    • 7 views
    ಸಕಲೇಶಪುರ: ಬೈಕೆರೆ ಗ್ರಾಮದಲ್ಲಿ 300 ಹಣ್ಣಿನ ಗಿಡಗಳ ನೆಡುವ ಮೂಲಕ ಪ್ರಾಣಿ–ಪಕ್ಷಿಗಳ ಆಹಾರ ಸಂರಕ್ಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ವಿಶೇಷ ಅಭಿಯಾನ

    ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

    • By admin
    • August 2, 2026
    • 8 views
    ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

    ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಮುಚ್ಚಿರಡ್ಕದಲ್ಲಿ ದಾರುಣ ಘಟನೆ

    • By admin
    • August 1, 2026
    • 6 views
    ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಮುಚ್ಚಿರಡ್ಕದಲ್ಲಿ ದಾರುಣ ಘಟನೆ

    ಬೆಳ್ತಂಗಡಿಯಲ್ಲಿ ಭಾರಿ ಮಾದಕವಸ್ತು ಬೇಟೆ: ₹15.41 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ಜಪ್ತಿ – ದುಬೈಗೆ ತೆರಳಬೇಕಿದ್ದ ಯುವಕ ಜೈಲುಪಾಲು

    • By admin
    • July 30, 2026
    • 10 views
    ಬೆಳ್ತಂಗಡಿಯಲ್ಲಿ ಭಾರಿ ಮಾದಕವಸ್ತು ಬೇಟೆ: ₹15.41 ಲಕ್ಷ ಮೌಲ್ಯದ ಗಾಂಜಾ, ಎಂಡಿಎಂಎ ಜಪ್ತಿ – ದುಬೈಗೆ ತೆರಳಬೇಕಿದ್ದ ಯುವಕ ಜೈಲುಪಾಲು

    ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ವಸಂತ ಗೌಡರ ತುರ್ತು ಚಿಕಿತ್ಸೆಗೆ ನೆರವಿಗಾಗಿ ಮನವಿ

    • By admin
    • July 30, 2026
    • 16 views
    ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ವಸಂತ ಗೌಡರ ತುರ್ತು ಚಿಕಿತ್ಸೆಗೆ  ನೆರವಿಗಾಗಿ ಮನವಿ