ಬೆಳ್ತಂಗಡಿ: ಮಾವನ ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ಆಕ್ಟೀವಾ ವಾಹನ ಕಳವುಗೈದ ಅಳಿಯ!

ಬೆಳ್ತಂಗಡಿ: ಉಜಿರೆ ಕಕ್ಕೆಜಾಲು ಎಂಬಲ್ಲಿ ಮನೆ ಮಾಲೀಕ ಹಾಗೂ ಕುಟುಂಬದ ಸದಸ್ಯರು ಜನವರಿ 22 ರಂದು ತನ್ನ ಮನೆಗೆ ಬೀಗ ಭದ್ರತೆಯನ್ನು ಮಾಡಿಕೊಂಡು ಕುಟುಂಬ ಸಮೇತ ಭದ್ರಾವತಿಗೆ ಹೋಗಿದ್ದರು. ಮರುದಿನ ವಾಪಾಸು ಬಂದು ನೋಡಿದಾಗ ಮನೆಯ ಸಿಟೌಟ್ ನಲ್ಲಿ ಇರಿಸಿದ್ದ ಆಕ್ಟೀವಾ 6 ಜಿ ಕೆಎ ದ್ವಿ ಚಕ್ರ ವಾಹನ ಇಲ್ಲದೇ ಇದ್ದು, ಮನೆಯ ಒಳಗೆ ಬಂದು ನೋಡಿದಾಗ ಮನೆಯ ಮಾಡಿನ ಹಂಚನ್ನು ಯಾರೋ ಕಳ್ಳರು ತೆಗೆದು ಒಳ ಪ್ರವೇಶಿಸಿ ಗೋಡ್ರೇಜ್ ಚೆಲ್ಲಾಪಿಲ್ಲಿಯಾಗಿದ್ದು, ಗೋಡ್ರೇಜ್ ನಲ್ಲಿದ್ದ ನಗದು ರೂ 60,000, 1 ಜೊತೆ ಕಿವಿಯೋಲೆ, 2 ಉಂಗುರಗಳು , ನೋಕಿಯಾ ಕಂಪೆನಿಯ ಸಣ್ಣ ಮೊಬೈಲ್ ಹಾಗೂ ಒಳಗಿದ್ದ ಆಕ್ಟೀವಾ 6ಜಿ ದ್ವಿ ಚಕ್ರ ವಾಹನದ ಕೀಯನ್ನು ಕದ್ದು ಮನೆಯ ಸಿಟೌಟ್ ನಲ್ಲಿದ್ದ ಆಕ್ಟೀವಾ 6ಜಿ ಸಮೇತ ಕಳವು ಮಾಡಿಕೊಂಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೋಲೀಸರು ಅಳಿಯನನ್ನು ಮಾಲು ಸಮೇತರಾಗಿ ವಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮುಂಡಾಜೆ ಗ್ರಾಮದ ಚೆನ್ನಿಗುಡ್ಡೆ ನಿವಾಸಿ ಇಂತಿಯಾಜ್ ಎಂಬಾತನನ್ನು ವಶಕ್ಕೆ ಪಡೆದು ಆರೋಪಿತನಿಂದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

READ ALSO