ಬೆಳ್ತಂಗಡಿ: ಆರೋಗ್ಯ ಬಿಂದು ಕಾರ್ಯಕ್ರಮ ಉದ್ಘಾಟನೆ

ಬೆಳ್ತಂಗಡಿ: ಸೇವಾಭಾರತಿ ಕಾರ್ಯಾಲಯ ಸೇವಾನಿಕೇತನದಲ್ಲಿ ಉದ್ಯಮಿ ಹಾಗೂ ದಾನಿಗಳು ತಮ್ಮ ಹುಟ್ಟುಹಬ್ಬವನು ವಿಶಿಷ್ಟ ವಾಗಿ ಆಚರಿಸಿದರು.

READ ALSO

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಬೆನ್ನು ಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ವೈದ್ಯಕೀಯ ವಸ್ತುಗಳನ್ನು ಅತಿ ಕಡಿಮೆ ದರದಲ್ಲಿ ಅವರ ಮನೆ ಬಾಗಿಲಿಗೆ ತಲುಪಿಸುವ ಹಾಗೂ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು. ದಾನಿಗಳು ರೂ 25,000 ಮೊತದ ವೈದ್ಯಕೀಯ ವಸ್ತುಗಳನ್ನು ಖರೀದಿಸಲು ಈ ಮೂಲಕ ವಿನಂತಿಸಿದರು.

ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ವಿಸ್ತರಿಸುವ ಯೋಜನೆಯನ್ನು ಕೂಡ ಹಾಕಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಸೇವಾಭಾರತಿಯ ಅಧ್ಯಕ್ಷರಾದ ಶ್ರೀ ಕೆ ವಿನಾಯಕ ರಾವ್, ಶ್ರೀಮತಿ ಸಹನಾ ಭೀಡೆ ಹಾಗೂ ಸೇವಾಭಾರತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೆ ಚರಣ್ ಕುಮಾರ್ ಅವರು ನಿರೂಪಿಸಿ ಹಾಗೂ ಅಕ್ಷತಾ ಭಟ್ ಧನ್ಯವಾದವಿತರು