ಮೂರ್ಖರ ದಿನದ ಮುನ್ನಾ ದಿನವೇ ಮೂರ್ಖತನ ತೋರಿದ ದುಷ್ಕರ್ಮಿಗಳು! ದನಕಳ್ಳರೆಂದು ನೈತಿಕ ಪೊಲೀಸ್ ಗಿರಿ ಮಾಡಿದ ಅಪರಿಚಿತರ ತಂಡ

ಬೆಳ್ತಂಗಡಿ : ಪಿಕಪ್ ವಾಹನದಲ್ಲಿ ಸಂಬಂಧಿಕರ ಮನೆಗೆ ಹೋಗಿ ಟ ಮಾಡಿ ವಾಪಸ್ ಬರುವಾಗ ದನ ಕಳ್ಳರು ಎಂದು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಪಿಕಪ್ ವಾಹನ ಹೊಂದಿರುವ ರಹಿಮಾನ್(55) ನಿನ್ನೆ ಬುಧವಾರ ಸಂಜೆ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಪಿಕಪ್ ಬಾಡಿ ಕೆಲಸ ಮಾಡಿಸಲು ಬಂದಿದ್ದು ಜೊತೆಗೆ ಕುಪ್ಪೆಟ್ಟಿಯ ಮುಸ್ತಾಫಾ(40) ಕರೆದುಕೊಂಡು ಬಂದಿದ್ದರು ಆದ್ರೆ ಕೆಲಸ ಮಾಡಲು ಅಗಿಲ್ಲ ನಂತರ ರಹಿಮಾನ್ ತನ್ನ ಸಂಬಂಧಿಕರ ಮನೆಯಾದ ಸವಣಾಲಿಗೆ ಹೋಗಿ ಊಟ ಮಾಡಿ ವಾಪಸ್ ಬರುವಾಗ ಸವಣಾಲಿನಿಂದ ಬೈಕ್ ,ಕಾರುಗಳಲ್ಲಿ ಬೆನ್ನಟ್ಟಿದ್ದಾರೆ ಮೇಲಂತಬೆಟ್ಟು ಬರುತ್ತಿದ್ದಂತೆ ಎದುರಿನಿಂದ ಬೈಕ್ ನಲ್ಲಿ ಬರುತ್ತಿದ್ದ ದುಷ್ಪರ್ಮಿಗಳು ಪಿಕಪ್ ಅಡ್ಡಗಟ್ಟಿ ನೀವು ದನ ಕಳ್ಳರು ನಮ್ಮ ಊರಿನಿಂದ ದನ ಕಳ್ಳತನ ಮಾಡಲು ಬಂದಿದ್ದಿರಿ ಎಂದು ಅವ್ಯಾಚ ಶಬ್ದಗಳಿಂದ ನಿಂದಿಸಿ ಪಿಕಪ್ ನಲ್ಲಿದ್ದ ರಹಿಮಾನ್ ಮತ್ತು ಮುಸ್ತಫಾ ಮೇಲೆ 50 ಕ್ಕೂ ಅಧಿಕ ದುಷ್ಕರ್ಮಿಗಳು ರಾಡ್ , ಕೊಲಿನಿಂದ ಮಾನಸೋ ಇಚ್ಚೆ ದಾಳಿ ಮಾಡಿದ್ದಾರೆ. ದಾಳಿಯಿಂದ ರಹಿಮಾನ್ ಒಂದು ಕಣ್ಣಿಗೆ ಗಾಯವಾಗಿದ್ದು ದೇಹದ ಎಲ್ಲಾ ಭಾಗಕ್ಕೆ ಗಂಭಿರ ಹಲ್ಲೆ ಮಾಡಿದ್ದಾರೆ. ಮುಸ್ತಾಫಾಗೂ ಗಾಯವಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ಸ್ಥಳಿಯರು ನೀಡಿದ್ದು ಪೊಲೀಸರು ಬಂದು ಗುಂಪು ಚದುರಿಸಿ ಗಾಯಗೊಂಡ ಇಬ್ಬರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

READ ALSO

ಹಲ್ಲೆ ಮಾಡಿದ ಕೆಲವರು ವಶಕ್ಕೆ: ಇನ್ನೂ ಘಟನೆ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆ ಮಾಡಿದ ಕೆಲವರನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.