ಕರಾವಳಿಯ ಪೋಸ್ಟ್ ವೆಡ್ಡಿಂಗ್ ಪೋಟೋಶೂಟ್ ಗೆ ಫಿದಾ ಆದ ಕರಾವಳಿಗರು! ಸಾಂಪ್ರದಾಯಿಕ ಕೃಷಿ ಚಟುವಟಿಕೆಯ ಪೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್!

ಈಗ ಪೋಟೋಶೂಟ್ ಇಲ್ಲದೇ ಮದುವೆ, ನಾಮಕರಣ, ಎಂಗೇಜ್ಮೆಂಟ್, ಸೀಮಂತ ನಡೆಯೋದೆ ಇಲ್ಲ. ಆದರೆ ಕೆಲ ಪೋಟೋಶೂಟ್ ಗಳು ಮಾತ್ರ ತಮ್ಮ ಕಾನ್ಸೆಪ್ಟ್ ಕಾರಣಕ್ಕೆ ವಿವಾದಕ್ಕೆ ಕಾರಣವಾಗುತ್ತವೆ. ಆದರೆ ಅಪ್ಪಟ ಕರಾವಳಿಯ ಪೋಸ್ಟ್ ವೆಡ್ಡಿಂಗ್ ಪೋಟೋಶೂಟ್ ಮಾತ್ರ ತನ್ನ ಕಾನ್ಸೆಪ್ಟ್ ಕಾರಣಕ್ಕೆ ಸಖತ್ ವೈರಲ್ ಆಗಿದ್ದು, ಟ್ರೆಡಿಶನಲ್ ಪೋಟೋಶೂಟ್ ಹೆಸರಿನಲ್ಲಿ ಮಿಂಚುತ್ತಿದೆ.

ಪೋಟೋಶೂಟ್ ಅಂದ್ರೆ ಹೊಸ ವಿನ್ಯಾಸದ ಬಟ್ಟೆ, ಪ್ರವಾಸಿತಾಣ ಹಾಗೂ ಅದ್ದೂರಿ ಬ್ಯಾಕ್ ಗ್ರೌಂಡ್ ಕಾಮನ್. ಆದರೆ ಕರಾವಳಿಯ ಈ ಜೋಡಿ ಮಾತ್ರ ನಮಗೆ ಅನ್ನ ನೀಡುವ ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ಕೃಷಿ ಚಟುವಟಿಕೆಯ ಜೊತೆ ಪೋಟೋಶೂಟ್ ಮಾಡಿಸಿ ಗಮನ ಸೆಳೆದಿದೆ.

ಭತ್ತದ ಗದ್ದೆಯಲ್ಲಿ ನಾಟಿ ಮಾಡುವುದು, ಸಸಿಯನ್ನು ಕೀಳುವುದು, ಸಸಿಯನ್ನು ಬುಟ್ಟಿಯಲ್ಲಿ ಹೊರುವುದು ಇಂತಹ ಸಂದರ್ಭಗಳನ್ನೆ ಮರು ಸೃಷ್ಟಿ ಮಾಡಿ ಪೋಟೋಶೂಟ್ ಮಾಡಿಸಲಾಗಿದೆ. ಇದಕ್ಕೆ ವರ ಲುಂಗಿ, ಟೀಶರ್ಟ್, ಕಂಬಳಿಯ ಕೊಪ್ಪೆ ಜೊತೆ ಗಮನ ಸೆಳೆದರೇ, ವಧು ಸೀರೆ, ಕಂಬಳಿಯ ಕೊಪ್ಪೆಯ ಜೊತೆ ಟ್ರೆಡಿಶನಲ್ ಶೈಲಿನಲ್ಲಿ ಕಾಣಿಸಿಕೊಂಡಿದ್ದಾರೆ.

ಬಾನಿನಿಂದ ತುದಿಯಲ್ಲಿ ಆರಂಭವಾಗುವ ಬೆಟ್ಟ, ಅದರ ಬುಡದಲ್ಲಿ ಹಸಿರ ಗದ್ದೆ, ಮಳೆ ಸುರಿದೇಬಿಡುತ್ತೇ ಎಂಬಂತೆ ಕರಿಗಟ್ಟಿದ ಮೋಡ ಇದರ ನಡುವೆ ಹೊಸಜೋಡಿಯ ಸರಸ ಸಲ್ಲಾಪವನ್ನು ಸಾಂಪ್ರದಾಯಿಕ ಉಡುಪು ಹಾಗೂ ಕೃಷಿ ಕಾರ್ಯದ ಜೊತೆ ಸುಪ್ರೀತ್ ಬೈಂದೂರು ಎಚ್ ಸೆರೆಹಿಡಿದಿದ್ದಾರೆ.

ಮದುವೆ ಹಾಗೂ ಪ್ರವಾಸದ ಪೋಟೋಶೂಟ್ ನ ಎಕ್ಸಪರ್ಟ್ ಆಗಿರೋ ಸುಪ್ರೀತ್ ಬೈಂದೂರು ಈ ಪೋಟೋಶೂಟ್ ಕಾನ್ಸೆಪ್ಟ್ ಸಿದ್ಧಗೊಳಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಟೋಶೂಟ್ ಗೆ ಸಖತ್ ರೆಸ್ಪಾನ್ಸ್ ಬಂದಿದ್ದು, ಜನರು ವಧು- ವರರ ಅಭಿರುಚಿಯನ್ನು ಮೆಚ್ಚಿದ್ದಾರೆ.

ಹೇಗೇಗೋ ಪೋಟೋಶೂಟ್ ಮಾಡಿಸಿ ಹಿಂದೂ ಸಂಸ್ಕೃತಿಗೆ ಧಕ್ಕೆ ತರೋ ಜೋಡಿಗಳ ಮಧ್ಯೆ ಲೆನ್ಸ್ ಆರ್ಟ್ಸ್ ಸ್ಟುಡಿಯೋ ಕಾನ್ಸೆಪ್ಟ್ ಹಾಗೂ ಈ ಡಿಸೆಂಟ್ ಪೋಟೋಶೂಟ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Spread the love
  • Related Posts

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    Belthangady: ತಾಲೂಕಿನ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.Shishila, Kokkada, Dharmasthala, Arasinamakki, Ujire ಹಾಗೂ Nidle ಮೊದಲಾದ ಕಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ತುಂತುರು ಹಾಗೂ ಸಾಮಾನ್ಯ ಮಳೆಯಾಗಿದೆ.ತಾಲೂಕಿನಲ್ಲಿ ಫೆಬ್ರವರಿ 21ರಂದು ಕೆಲವೆಡೆ…

    Spread the love

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಬಂಗಾಡಿ: ಸೂರ್ಯ-ಚಂದ್ರ ಹೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್, ಕರ್ನಾಟಕ ಸರಕಾರ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದೊಂದಿಗೆ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಬಯಲು ಕಂಬಳವು ಶ್ರೀ…

    Spread the love

    You Missed

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    • By admin
    • March 15, 2026
    • 62 views
    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    • By admin
    • March 14, 2026
    • 102 views
    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    • By admin
    • March 14, 2026
    • 43 views
    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ  ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    • By admin
    • March 13, 2026
    • 610 views
    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    • By admin
    • March 10, 2026
    • 150 views
    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ

    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ

    • By admin
    • March 10, 2026
    • 63 views
    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ