ದಿನ ಬಳಕೆ ವಸ್ತುಗಳಿಗೂ ಇದೆ EXPIRY Date! ಹಾಗಾದ್ರೆ ಯಾವ ವಸ್ತು ಯಾವಾಗ ಬದಲಿಸಬೇಕು……..!?

ಮಾತ್ರೆ, ಔಷಧಿ, ಪ್ಯಾಕೆಟ್ ಆಹಾರಗಳಿಗೆ ಕೊನೆ ದಿನಾಂಕವಿರುತ್ತದೆ. ಇವುಗಳನ್ನು ತಯಾರಿಸುವ ವೇಳೆ ತಯಾರಿಸಿದ ದಿನಾಂಕದ ಜೊತೆ ಅಂತಿಮ ಬಳಕೆ ದಿನಾಂಕವನ್ನು ವಸ್ತುಗಳ ಮೇಲೆ ಹಾಕಿರಲಾಗುತ್ತದೆ.

ಆದ್ರೆ ದಿನ ಬಳಕೆಯ ಕೆಲ ವಸ್ತುಗಳಿಗೆ ಈ ದಿನಾಂಕವನ್ನು ಹಾಕಿರುವುದಿಲ್ಲ. ಅದ್ರಲ್ಲಿ ಪ್ರತಿ ದಿನ ಬಳಸುವ ಟೂತ್ ಬ್ರಶ್, ಟವಲ್, ಬಾಚಣಿಕೆ ಸೇರಿದಂತೆ ಅನೇಕ ವಸ್ತುಗಳು ಸೇರಿವೆ. ಕೊನೆ ದಿನಾಂಕ ಹಾಕಿಲ್ಲ ಎನ್ನುವ ಕಾರಣಕ್ಕೆ ಅವುಗಳನ್ನು ವರ್ಷಗಟ್ಟಲೆ ಬಳಸುವುದು ಸರಿಯಲ್ಲ.

ಪ್ರತಿ ದಿನ ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸುವ ಟೂತ್ ಬ್ರಶನ್ನು ಸಾಮಾನ್ಯವಾಗಿ ವರ್ಷಗಟ್ಟಲೆ ಬಳಸುವವರಿದ್ದಾರೆ. ಬ್ರಶ್ ಸಂಪೂರ್ಣ ಹಾಳಾಗುವವರೆಗೂ ಅದನ್ನು ಬಳಸ್ತಾರೆ. ಆದ್ರೆ ಇದು ತಪ್ಪು. ಬ್ರಶ್ ಅವಧಿ ಮೂರು ತಿಂಗಳು ಮಾತ್ರ. ಹೆಚ್ಚು ಸಮಯ ಬಳಸಿದ್ರೆ ನೆಗಡಿ, ಹಲ್ಲು ನೋವು ಸೇರಿದಂತೆ ಸೋಂಕುಗಳ ಸಮಸ್ಯೆ ಎದುರಾಗುತ್ತದೆ.

ಇನ್ನು ಟವೆಲ್ ಗಳ ಬಗ್ಗೆ ಹೇಳುವುದಾದ್ರೆ ಟವೆಲನ್ನು ಪ್ರತಿ ದಿನ ಅನೇಕ ಬಾರಿ ಬಳಸುತ್ತೇವೆ. ಟವೆಲ್ ನಲ್ಲಿ ಕೀಟಾಣುಗಳಿರುತ್ತವೆ. ಹಾಗಾಗಿ ಆಗಾಗ ಟವೆಲ್ ತೊಳೆಯಬೇಕು. ಒಮ್ಮೆ ಟವೆಲ್ ಖರೀದಿ ನಂತ್ರ ಮೂರ್ನಾಲ್ಕು ವರ್ಷ ಅದ್ರ ಸುದ್ದಿಗೆ ಹೋಗುವುದಿಲ್ಲ. ಆದ್ರೆ ಇದು ತಪ್ಪು. ಒಂದು ವರ್ಷ ಮಾತ್ರ ಒಂದು ಟವೆಲ್ ಬಳಸಬೇಕು. ನಂತ್ರ ಅದನ್ನು ಬದಲಿಸಬೇಕು. ಇಲ್ಲವಾದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ.

ಕೂದಲ ಸೌಂದರ್ಯ ವೃದ್ಧಿಗೆ ಬಳಸುವ ಬಾಚಣಿಕೆ ಕೂದಲ ಸಮಸ್ಯೆಗೆ ಕಾರಣವಾಗಬಹುದು. ಬಾಚಣಿಕೆಯಲ್ಲಿ ಕೊಳಕಿರುತ್ತದೆ. ಇದು ಹೊಟ್ಟು, ಅಲರ್ಜಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಆಗಾಗ ಅದನ್ನು ಸ್ವಚ್ಛಗೊಳಿಸಬೇಕು. ಜೊತೆಗೆ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಒಂದೇ ಬಾಚಣಿಕೆ ಬಳಸಬಾರದು.

ಒಂದೇ ಮೇಕಪ್ ಬ್ರಶ್ ಹಾಗೂ ಸ್ಪಂಜ್ ಬಳಕೆ ಕೂಡ ಚರ್ಮದ ಸಮಸ್ಯೆಗೆ ಕಾರಣವಾಗುತ್ತದೆ. ಇದ್ರಿಂದ ಮೊಡವೆ ಸಮಸ್ಯೆ ಕಾಡುತ್ತದೆ. ಹಾಗಾಗಿ ಪ್ರತಿ ಬಾರಿ ಮೇಕಪ್ ನೀಡಿದ ನಂತ್ರ ಮೇಕಪ್ ಬ್ರಶ್ ತೊಳೆಯಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಅದನ್ನು ಬದಲಿಸಬೇಕು.

Spread the love
  • Related Posts

    ಪಶ್ಚಿಮ ಘಟ್ಟದ ಪ್ರಕೃತಿ ಮಡಿಲಿನ ‘ನೇತ್ರಾವತಿ ಹೋಂ ಸ್ಟೇ’ – ಪ್ರವಾಸಿಗರಿಗಾಗಿ ಪರಿಪೂರ್ಣ ತಾಣ

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆಯಲ್ಲಿ, ಪಶ್ಚಿಮ ಘಟ್ಟದ ಹಚ್ಚ ಹಸಿರಿನ ತಪ್ಪಲಿನಲ್ಲಿ ಹಾಗೂ ನೇತ್ರಾವತಿ ನದಿಯ ಉಗಮ ಪ್ರದೇಶದ ಸಮೀಪದಲ್ಲಿರುವ ನೇತ್ರಾವತಿ ಹೋಂ ಸ್ಟೇ ಪ್ರಕೃತಿ ಪ್ರಿಯರು, ಚಾರಣಿಗರು ಹಾಗೂ ಕುಟುಂಬ ಸಮೇತ ಪ್ರವಾಸ ಕೈಗೊಳ್ಳುವವರಿಗೆ…

    Spread the love

    ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಮಗುವಿನ ಚಿಕಿತ್ಸೆಗೆ ಸಹೃದಯಿಗಳ ತುರ್ತು ನೆರವಿನ ಹಸ್ತ ಅಗತ್ಯ

    🙏 ಪುಟ್ಟ ಶಿವಾನಿಯ ಚಿಕಿತ್ಸೆಗೆ ನೆರವಾಗಿ ನಿಮ್ಮ ಸಣ್ಣ ಸಹಾಯವೂ ಒಂದು ಜೀವ ಉಳಿಸಬಹುದು. “ಸಹಾಯಹಸ್ತ ನೀಡಲು ಇಲ್ಲಿ ಕ್ಲಿಕ್ ಮಾಡಿ” ❤️ DONATE NOW SHIVANI upi://pay?pa=107044785044457@cnrb&pn=PADMARAJA&mc=5198&tr=1234567887654321&am=0&mam=0&cu=INR ಬೆಳ್ತಂಗಡಿ, ಆ. 9: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನಿವಾಸಿಗಳಾದ ಪದ್ಮರಾಜ್…

    Spread the love

    You Missed

    ಪಶ್ಚಿಮ ಘಟ್ಟದ ಪ್ರಕೃತಿ ಮಡಿಲಿನ ‘ನೇತ್ರಾವತಿ ಹೋಂ ಸ್ಟೇ’ – ಪ್ರವಾಸಿಗರಿಗಾಗಿ ಪರಿಪೂರ್ಣ ತಾಣ

    • By admin
    • August 9, 2026
    • 4 views

    ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಮಗುವಿನ ಚಿಕಿತ್ಸೆಗೆ ಸಹೃದಯಿಗಳ ತುರ್ತು ನೆರವಿನ ಹಸ್ತ ಅಗತ್ಯ

    • By admin
    • August 8, 2026
    • 8 views
    ಬೆಳ್ತಂಗಡಿ: ಅನಾರೋಗ್ಯದಿಂದ ಬಳಲುತ್ತಿರುವ 2 ತಿಂಗಳ ಮಗುವಿನ ಚಿಕಿತ್ಸೆಗೆ ಸಹೃದಯಿಗಳ ತುರ್ತು ನೆರವಿನ ಹಸ್ತ ಅಗತ್ಯ

    “ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ: ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ”

    • By admin
    • August 8, 2026
    • 6 views
    “ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ: ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಬೆಳೆಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ”

    ಭಾರಿ ಮಳೆ ಹಿನ್ನೆಲೆ: ಪುತ್ತೂರು ಉಪವಿಭಾಗದ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

    • By admin
    • August 7, 2026
    • 8 views
    ಭಾರಿ ಮಳೆ ಹಿನ್ನೆಲೆ: ಪುತ್ತೂರು ಉಪವಿಭಾಗದ ವ್ಯಾಪ್ತಿಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

    ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ ಆ.29ರಂದು ನಡೆಯಲಿದೆ. ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    • By admin
    • August 7, 2026
    • 6 views
    ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ ಆ.29ರಂದು ನಡೆಯಲಿದೆ. ಶೇ.70ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

    “ಶಿಕ್ಷಣದ ಹೆಮ್ಮೆಗೆ ಡ್ರಗ್ಸ್ ಕರಿನೆರಳು: ಎಚ್ಚೆತ್ತುಕೊಳ್ಳಬೇಕಿದೆ ಬೆಳ್ತಂಗಡಿಯ ಜನತೆ!!!”

    • By admin
    • August 6, 2026
    • 13 views
    “ಶಿಕ್ಷಣದ ಹೆಮ್ಮೆಗೆ ಡ್ರಗ್ಸ್ ಕರಿನೆರಳು: ಎಚ್ಚೆತ್ತುಕೊಳ್ಳಬೇಕಿದೆ ಬೆಳ್ತಂಗಡಿಯ ಜನತೆ!!!”