ದಿನ ಬಳಕೆ ವಸ್ತುಗಳಿಗೂ ಇದೆ EXPIRY Date! ಹಾಗಾದ್ರೆ ಯಾವ ವಸ್ತು ಯಾವಾಗ ಬದಲಿಸಬೇಕು……..!?

ಮಾತ್ರೆ, ಔಷಧಿ, ಪ್ಯಾಕೆಟ್ ಆಹಾರಗಳಿಗೆ ಕೊನೆ ದಿನಾಂಕವಿರುತ್ತದೆ. ಇವುಗಳನ್ನು ತಯಾರಿಸುವ ವೇಳೆ ತಯಾರಿಸಿದ ದಿನಾಂಕದ ಜೊತೆ ಅಂತಿಮ ಬಳಕೆ ದಿನಾಂಕವನ್ನು ವಸ್ತುಗಳ ಮೇಲೆ ಹಾಕಿರಲಾಗುತ್ತದೆ.

ಆದ್ರೆ ದಿನ ಬಳಕೆಯ ಕೆಲ ವಸ್ತುಗಳಿಗೆ ಈ ದಿನಾಂಕವನ್ನು ಹಾಕಿರುವುದಿಲ್ಲ. ಅದ್ರಲ್ಲಿ ಪ್ರತಿ ದಿನ ಬಳಸುವ ಟೂತ್ ಬ್ರಶ್, ಟವಲ್, ಬಾಚಣಿಕೆ ಸೇರಿದಂತೆ ಅನೇಕ ವಸ್ತುಗಳು ಸೇರಿವೆ. ಕೊನೆ ದಿನಾಂಕ ಹಾಕಿಲ್ಲ ಎನ್ನುವ ಕಾರಣಕ್ಕೆ ಅವುಗಳನ್ನು ವರ್ಷಗಟ್ಟಲೆ ಬಳಸುವುದು ಸರಿಯಲ್ಲ.

ಪ್ರತಿ ದಿನ ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸುವ ಟೂತ್ ಬ್ರಶನ್ನು ಸಾಮಾನ್ಯವಾಗಿ ವರ್ಷಗಟ್ಟಲೆ ಬಳಸುವವರಿದ್ದಾರೆ. ಬ್ರಶ್ ಸಂಪೂರ್ಣ ಹಾಳಾಗುವವರೆಗೂ ಅದನ್ನು ಬಳಸ್ತಾರೆ. ಆದ್ರೆ ಇದು ತಪ್ಪು. ಬ್ರಶ್ ಅವಧಿ ಮೂರು ತಿಂಗಳು ಮಾತ್ರ. ಹೆಚ್ಚು ಸಮಯ ಬಳಸಿದ್ರೆ ನೆಗಡಿ, ಹಲ್ಲು ನೋವು ಸೇರಿದಂತೆ ಸೋಂಕುಗಳ ಸಮಸ್ಯೆ ಎದುರಾಗುತ್ತದೆ.

ಇನ್ನು ಟವೆಲ್ ಗಳ ಬಗ್ಗೆ ಹೇಳುವುದಾದ್ರೆ ಟವೆಲನ್ನು ಪ್ರತಿ ದಿನ ಅನೇಕ ಬಾರಿ ಬಳಸುತ್ತೇವೆ. ಟವೆಲ್ ನಲ್ಲಿ ಕೀಟಾಣುಗಳಿರುತ್ತವೆ. ಹಾಗಾಗಿ ಆಗಾಗ ಟವೆಲ್ ತೊಳೆಯಬೇಕು. ಒಮ್ಮೆ ಟವೆಲ್ ಖರೀದಿ ನಂತ್ರ ಮೂರ್ನಾಲ್ಕು ವರ್ಷ ಅದ್ರ ಸುದ್ದಿಗೆ ಹೋಗುವುದಿಲ್ಲ. ಆದ್ರೆ ಇದು ತಪ್ಪು. ಒಂದು ವರ್ಷ ಮಾತ್ರ ಒಂದು ಟವೆಲ್ ಬಳಸಬೇಕು. ನಂತ್ರ ಅದನ್ನು ಬದಲಿಸಬೇಕು. ಇಲ್ಲವಾದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ.

ಕೂದಲ ಸೌಂದರ್ಯ ವೃದ್ಧಿಗೆ ಬಳಸುವ ಬಾಚಣಿಕೆ ಕೂದಲ ಸಮಸ್ಯೆಗೆ ಕಾರಣವಾಗಬಹುದು. ಬಾಚಣಿಕೆಯಲ್ಲಿ ಕೊಳಕಿರುತ್ತದೆ. ಇದು ಹೊಟ್ಟು, ಅಲರ್ಜಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಆಗಾಗ ಅದನ್ನು ಸ್ವಚ್ಛಗೊಳಿಸಬೇಕು. ಜೊತೆಗೆ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಒಂದೇ ಬಾಚಣಿಕೆ ಬಳಸಬಾರದು.

ಒಂದೇ ಮೇಕಪ್ ಬ್ರಶ್ ಹಾಗೂ ಸ್ಪಂಜ್ ಬಳಕೆ ಕೂಡ ಚರ್ಮದ ಸಮಸ್ಯೆಗೆ ಕಾರಣವಾಗುತ್ತದೆ. ಇದ್ರಿಂದ ಮೊಡವೆ ಸಮಸ್ಯೆ ಕಾಡುತ್ತದೆ. ಹಾಗಾಗಿ ಪ್ರತಿ ಬಾರಿ ಮೇಕಪ್ ನೀಡಿದ ನಂತ್ರ ಮೇಕಪ್ ಬ್ರಶ್ ತೊಳೆಯಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಅದನ್ನು ಬದಲಿಸಬೇಕು.

Spread the love
  • Related Posts

    ವಿದ್ಯುತ್ ಸರಬರಾಜು ಕಂಪನಿ ನೀಡುತ್ತಿರುವ ಬಿಲ್ಲುಗಳಲ್ಲಿ ಬಳಕೆದಾರರಿಗೆ ಮೂಡಿದೆ P&G ಶುಲ್ಕದ ಗೊಂದಲ!!!!

    ಮಂಗಳೂರು: ವಿದ್ಯುತ್ ಸರಬರಾಜು ಕಂಪನಿಯು ತನ್ನ ಬಿಲ್ಲುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಬಾರಿ ಮಾರ್ಪಾಡು ಮಾಡಿ P&G ಹೆಸರಿನಲ್ಲಿ 0.36 surcharge ಮಾಡುತ್ತಿದ್ದು ಬಳಕೆದಾರರು ಈ ಬಗ್ಗೆ ಅರಿವಿಲ್ಲದೇ ವಿದ್ಯುತ್ ಬಿಲ್ ಪಾವತಿ ಮಾಡುತ್ತಾ ಬಂದಿದ್ದು ಕಳೆದ ಎರಡು ಮೂರು ತಿಂಗಳುಗಳಿಂದ ಈ…

    Spread the love

    ಧರ್ಮಸ್ಥಳದಿಂದ ಹೊರಡುವ ರಸ್ತೆ ಸಾರಿಗೆ ನಿಗಮದ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

    ಧರ್ಮಸ್ಥಳ : ಧರ್ಮಸ್ಥಳದಿಂದ -ಉಜಿರೆ-ಬೆಳಾಲು -ಬಂದಾರು-ಉಪ್ಪಿನಂಗಡಿ, ಸೌತಡ್ಕ ಹಾಗೂ ನೆಲ್ಯಾಡಿ, ಮಾರ್ಗವಾಗಿ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರವರು ಜುಲೈ 08 ರಂದು ಧರ್ಮಸ್ಥಳ ದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ…

    Spread the love

    You Missed

    ವಿದ್ಯುತ್ ಸರಬರಾಜು ಕಂಪನಿ ನೀಡುತ್ತಿರುವ ಬಿಲ್ಲುಗಳಲ್ಲಿ ಬಳಕೆದಾರರಿಗೆ ಮೂಡಿದೆ P&G ಶುಲ್ಕದ ಗೊಂದಲ!!!!

    • By admin
    • July 8, 2025
    • 325 views
    ವಿದ್ಯುತ್ ಸರಬರಾಜು ಕಂಪನಿ ನೀಡುತ್ತಿರುವ ಬಿಲ್ಲುಗಳಲ್ಲಿ ಬಳಕೆದಾರರಿಗೆ ಮೂಡಿದೆ P&G ಶುಲ್ಕದ ಗೊಂದಲ!!!!

    ಧರ್ಮಸ್ಥಳದಿಂದ ಹೊರಡುವ ರಸ್ತೆ ಸಾರಿಗೆ ನಿಗಮದ ಮೂರು ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

    • By admin
    • July 8, 2025
    • 136 views
    ಧರ್ಮಸ್ಥಳದಿಂದ ಹೊರಡುವ ರಸ್ತೆ ಸಾರಿಗೆ ನಿಗಮದ ಮೂರು  ಹೊಸ ರೂಟ್ ಬಸ್ ಗಳಿಗೆ ಶಾಸಕ ಹರೀಶ್ ಪೂಂಜರಿಂದ ಚಾಲನೆ

    ಎತ್ತಿನಹೊಳೆ ಯೋಜನೆಗೆ ಬಾರಿ ಹಿನ್ನಡೆ, 423ಎಕರೆ ಅರಣ್ಯ ಬಳಕೆಗೆ ಕೇಂದ್ರ ಅರಣ್ಯ ಸಲಹಾ ಸಮಿತಿ ನಿರಾಕರಣೆ

    • By admin
    • July 8, 2025
    • 52 views
    ಎತ್ತಿನಹೊಳೆ ಯೋಜನೆಗೆ ಬಾರಿ ಹಿನ್ನಡೆ, 423ಎಕರೆ ಅರಣ್ಯ ಬಳಕೆಗೆ ಕೇಂದ್ರ ಅರಣ್ಯ ಸಲಹಾ ಸಮಿತಿ ನಿರಾಕರಣೆ

    ಮಂಗಳೂರು ನಗರದಲ್ಲಿರುವ ಅಂಗನವಾಡಿ ಕೇಂದ್ರ ಈಗ ಸ್ಮಾರ್ಟ್ ಅಂಗನವಾಡಿ ಕೇಂದ್ರವಾಗಿ ಪರಿವರ್ತನೆ, ಜಿಲ್ಲಾ ಪತ್ರಕರ್ತರ ಸಂಘ ಹಾಗೂ ದಾನಿಗಳಿಂದ ನೆರವು

    • By admin
    • July 5, 2025
    • 53 views
    ಮಂಗಳೂರು ನಗರದಲ್ಲಿರುವ ಅಂಗನವಾಡಿ ಕೇಂದ್ರ ಈಗ ಸ್ಮಾರ್ಟ್ ಅಂಗನವಾಡಿ ಕೇಂದ್ರವಾಗಿ ಪರಿವರ್ತನೆ, ಜಿಲ್ಲಾ ಪತ್ರಕರ್ತರ ಸಂಘ ಹಾಗೂ ದಾನಿಗಳಿಂದ ನೆರವು

    ಬೆಳ್ತಂಗಡಿ ವಕೀಲರ ಭವನಕ್ಕೆ ಹಾಗೂ ನ್ಯಾಯಾಲಯಕ್ಕೆ ಅಧೀಕ್ಷಕರಾದ ಗೋಕುಲ್ ದಾಸ್ ಭೇಟಿ

    • By admin
    • July 5, 2025
    • 39 views
    ಬೆಳ್ತಂಗಡಿ ವಕೀಲರ ಭವನಕ್ಕೆ ಹಾಗೂ ನ್ಯಾಯಾಲಯಕ್ಕೆ ಅಧೀಕ್ಷಕರಾದ ಗೋಕುಲ್ ದಾಸ್ ಭೇಟಿ

    ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ಬಗ್ಗೆ ಉಚಿತ ತರಬೇತಿಗಾಗಿ ಉಜಿರೆಯ ರುಡ್ ಸೆಟ್ ತರಭೇತಿ ಕೇಂದ್ರದಲ್ಲಿ ಅರ್ಜಿ ಆಹ್ವಾನ

    • By admin
    • July 5, 2025
    • 59 views
    ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ಬಗ್ಗೆ ಉಚಿತ ತರಬೇತಿಗಾಗಿ ಉಜಿರೆಯ ರುಡ್ ಸೆಟ್ ತರಭೇತಿ ಕೇಂದ್ರದಲ್ಲಿ ಅರ್ಜಿ ಆಹ್ವಾನ